ಐಫೋನ್ ಮರಳಿಸಿದ ನಿರ್ವಾಹಕ
Team Udayavani, Jul 20, 2018, 4:20 AM IST
ಉಳ್ಳಾಲ: ಬಸ್ಸಿನಲ್ಲಿ ಸಿಕ್ಕಿದ ಹೊಸ ಐಫೋನ್ ಮೊಬೈಲನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಬಸ್ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಮಂಗಳೂರು – ಕೊಣಾಜೆ ನಡುವೆ ಸಂಚರಿಸುವ ಸುಷ್ಮಿತಾ ಬಸ್ಸಿನ ನಿರ್ವಾಹಕ ನಾರಾಯಣ ಮಂಜನಾಡಿ ಅವರಿಗೆ ವಿವಿ ವಿದ್ಯಾರ್ಥಿ ಅಪಘಾನಿಸ್ಥಾನದ ಸದ್ದಾಂ ಮುಕ್ರೇಷಿ ಅವರ ಐಫೋನ್ ಸಿಕ್ಕಿತ್ತು.ಪ್ರಥಮ ವರ್ಷದ ಪದವಿ ವ್ಯಾಸಂಗಕ್ಕೆ ಸೇರಿದ್ದ ಮುಕ್ರೇಷಿ ಹೊಸ ಫೋನ್ ಖರೀದಿಸಿ ಹೊಸ ಸಿಮ್ ಹಾಕಿದ್ದರು. ಆದರೆ ಸಿಮ್ ಆ್ಯಕ್ಟಿವೇಟ್ ಮಾಡಿರಲಿಲ್ಲ.
ಕೊಣಾಜೆಯಿಂದ ದೇರಳಕಟ್ಟೆಯಲ್ಲಿರುವ ಹಾಸ್ಟೆಲ್ ಗೆ ಸಂಚರಿಸುತ್ತಿದ್ದಾಗ ಮೊಬೈಲ್ ಕಳಕೊಂಡಿದ್ದರು. ಬಸ್ಸಿನಲ್ಲಿ ಸಿಕ್ಕಿದ್ದ ಮೊಬೈಲ್ಗೆ ಕಳಕೊಂಡವರು ಕರೆ ಮಾಡಬಹುದು ಎಂದು ನಿರ್ವಾಹಕ ಭಾವಿಸಿದ್ದರು. ಆದರೆ ಕರೆ ಬಾರದೆ ಇದ್ದಾಗ ಮೊಬೈಲ್ ಅನ್ನು ತಡಕಾಡಿದಾಗ ವಿವಿಯಲ್ಲಿ ಶುಲ್ಕ ಪಾವತಿಸಿದ ರಶೀದಿ ಸಿಕ್ಕಿತು. ಇದರ ಆಧಾರದಲ್ಲಿ ವಿವಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ನಾಯಕ್ ಅವರನ್ನು ಸಂಪರ್ಕಿಸಿ ವಾರಸುದಾರರಿಗೆ ತಲುಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ