ಟಿಟಿಎ ಹೊಂದಿದ ಮೊದಲ ವಿ.ವಿ. ಮಾಹೆ
Team Udayavani, Aug 18, 2018, 6:00 AM IST
ಉಡುಪಿ: ದೇಸೀಯವಾಗಿ ಅಭಿವೃದ್ಧಿಪಡಿಸಿದ ಟೇಬಲ್ ಟಾಪ್ ಎಕ್ಸಲರೇಟರ್ (ಟಿಟಿಎ) ಮಣಿಪಾಲ ಮಾಹೆಯ ಮಣಿಪಾಲ್ ಸೆಂಟರ್ ಫಾರ್ ನೇಚುರಲ್ ಸೈನ್ಸಸ್ನಲ್ಲಿ (ಎಂಸಿಎನ್ಎಸ್) ಕಾರ್ಯವನ್ನು ಆರಂಭಿಸಿದೆ.
ಹೊಸದಿಲ್ಲಿಯ ಐಯುಎಸಿ (ಅಂತರ್ ವಿ.ವಿ. ಎಕ್ಸಲರೇಟರ್ ಸೆಂಟರ್) ಇದನ್ನು ವಿನ್ಯಾಸಗೊಳಿಸಿದೆ. ಟಿಟಿಎಯನ್ನು ಹೊಂದಿದ ಪ್ರಥಮ ವಿ.ವಿ., ದಕ್ಷಿಣ ಭಾರತದ ಪ್ರಥಮ ಟಿಟಿಎ ಎಂಬ ಹೆಗ್ಗಳಿಕೆಗೆ ಮಾಹೆ ಪಾತ್ರವಾಗಿದೆ.
ಇದೊಂದು ಸಣ್ಣ ಉಪಕರಣವಾಗಿದ್ದು ಇದು ನ್ಯೂಕ್ಲಿಯರ್ ವಿಜ್ಞಾನ, ಫಿಸಿಕ್ಸ್ ಪ್ರಾಪರ್ಟೀಸ್, ರಸಾಯನಶಾಸ್ತ್ರ, ಭೌತಶಾಸ್ತ್ರ, ನ್ಯಾಚುರಲ್ ಸೈನ್ಸ್ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆಗೆ ಉಪಯುಕ್ತವಾಗಿದೆ.
ಈ ಯೋಜನೆಯನ್ನು ಎಂಸಿಎನ್ಎಸ್ನ ನ್ಯೂಕ್ಲಿಯರ್ ಫಿಸಿಕ್ಸ್ ತಂಡ ಐಯುಎಸಿ ತಾಂತ್ರಿಕ ಸಹಕಾರದಿಂದ ಕೈಗೆತ್ತಿಕೊಂಡು ಯಶಸ್ವಿಯಾಗಿದೆ. ಮಣಿಪಾಲ ತಂಡದ ನೇತೃತ್ವವನ್ನು ಪ್ರಾಧ್ಯಾಪಕ ಡಾ|ಪ್ರಶಾಂತಕುಮಾರ್ ರಥ್ ವಹಿಸಿದ್ದರು. ಇವರಿಗೆ ಸಹಾಯಕರಾಗಿ ವಿನ್ಯಾಸ ಎಂಜಿನಿಯರ್ ಪ್ರತ್ಯೂಷ ದಿತ್ತಕವಿ ಅವರು ಐಯುಎಸಿಯ ಡಾ|ಸಫÌನ್, ಡಾ| ರಾಜಕುಮಾರ್ ಅವರ ನೆರವಿನಿಂದ ಕಾರ್ಯನಿರ್ವಹಿಸಿದ್ದರು. ನ್ಯೂಕ್ಲಿಯರ್ ಫಿಸಿಕ್ಸ್ ತಂಡವು ಪ್ರಸ್ತುತ ಹೆವ್ವಿ ಇಲೆಮೆಂಟ್ ಸಿಂತೆಸಿಸ್ ಮತ್ತು ನ್ಯೂಟ್ರಾನ್ ಫಿಸಿಕ್ಸ್ ನಲ್ಲಿ ಪರಿಣತಿ ಹೊಂದಿದೆ.
“ನಾವೀಗ ಎಕ್ಸಲರೇಟರ್ ವಿಜ್ಞಾನ ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿದ್ದೇವೆ. ಭವಿಷ್ಯದಲ್ಲಿ ನಮ್ಮ ಆರ್ ಆ್ಯಂಡ್ ಡಿ ವಿಭಾಗವು ಸೀಮಾತೀತವಾಗಿ ಕಾರ್ಯನಿರ್ವಹಿಸಲಿದೆ’ ಎಂದು ವಿ.ವಿ. ಕುಲಪತಿ ಡಾ| ಎಚ್.ವಿನೋದ ಭಟ್ ತಿಳಿಸಿದ್ದಾರೆ.
ಎಂಸಿಎನ್ಎಸ್ ನಿರ್ದೇಶಕಿ ಡಾ| ಮೋಹನಿ ಗುಪ್ತ ಅವರು ಐಯುಎಸಿ ನಿರ್ದೇಶಕ ಡಾ|ಕಂಜಿಲಾಲ್ ಅವರಿಗೆ ತಾಂತ್ರಿಕ ಸಹಕಾರ ಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಎಕ್ಸಲರೇಟ್ರ್ ಮಣಿಪಾಲದಲ್ಲಿ ಬೋಧನೆ ಮತ್ತು ಸಂಶೋಧನೆ ಎರಡರಲ್ಲೂ ಸಹಕಾರಿಯಾಗಲಿದೆ ಎಂದು ಡಾ|ರಥ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?