ಯುವಕರಿಬ್ಬರ ಭವಿಷ್ಯ ಕಸಿದುಕೊಂಡ ಅಂಗವೈಕಲ್ಯ​​​​​​​


Team Udayavani, Aug 20, 2018, 6:00 AM IST

1808udsb4a.jpg

ಉಡುಪಿ: ಎತ್ತರದ ಸ್ಥಳದಲ್ಲಿ ಒಂದೂ ಮುಕ್ಕಾಲು ಸೆಂಟ್ಸ್‌ ಜಾಗದಲ್ಲಿರುವ ಮನೆಯಲ್ಲಿ ಒಂದು ಬಡಕುಟುಂಬ. ಅದರಲ್ಲಿ ಇಬ್ಬರು ಬಾಲಕರು ಹಾಸಿಗೆ ಬಿಟ್ಟೇಳದ ಸ್ಥಿತಿಯಲ್ಲಿದ್ದಾರೆ. ತಾಯಿ ಮತ್ತು ಅಜ್ಜಿ ಈ ಮಕ್ಕಳ ಆರೈಕೆ ಮಾಡುತ್ತಿದ್ದಾರೆ. 

ಮಣಿಪಾಲ ಸಮೀಪದ ಸರಳೇಬೆಟ್ಟು ಗಣೇಶ್‌ಭಾಗ್‌ನ ಪ್ರಮೀಳ ಪೂಜಾರಿ ಅವರ ಪುತ್ರರಾದ ಧನುಷ್‌(19) ಮತ್ತು ದರ್ಶನ್‌(16) “ಡ್ನೂಸೆನ್‌ ಮಸ್ಕಾéಲರ್‌ ಡಿಸ್ಟ್ರೋಫಿ’ ಎಂಬ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಇದೇ ಅಂಗವೈಕಲ್ಯ ಅವರ ವಿದ್ಯಾಭ್ಯಾಸವನ್ನು ಕಸಿದುಕೊಂಡಿದೆ. ಈ ಎರಡೂ ಮಕ್ಕಳು ಕೂಡ ಎದ್ದು ಕುಳಿತುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಪ್ರತಿಯೊಂದು ಕೆಲಸವನ್ನು ಕೂಡ ಇತರರೇ ಮಾಡಿಸಬೇಕು.

ಡಿಪ್ಲೊಮಾ ಓದಿದ ಧನುಷ್‌
ಧನುಷ್‌ ಹುಟ್ಟಿದ ಮೂರುವರೆ ವರ್ಷದಲ್ಲಿ ಆತನಿಗೆ ಶೀತ ಜ್ವರ ಬಂತು. ಅನಂತರ ಪರೀಕ್ಷಿಸಿದಾಗ ಮಣಿಪಾಲದ ವೈದ್ಯರು “ಡ್ನೂಸೆನ್‌ ಮಸ್ಕಾéಲರ್‌ ಡಿಸ್ಟ್ರೋಫಿ’ ಎಂಬ ಕಾಯಿಲೆ ಇರುವುದನ್ನು ಪತ್ತೆ ಹಚ್ಚಿದರು. ಅದಕ್ಕೆ ಔಷಧಿ ನೀಡುತ್ತಾ ಬಂದರು. ಆತ ಎಲ್ಲ ಮಕ್ಕಳಂತೆಯೇ ಆಟವಾಡುತ್ತಿದ್ದ. 5ನೇ ಕ್ಲಾಸಿನವರೆಗೆ ಸರಿಯಾಗಿದ್ದ ಹುಡುಗನಿಗೆ 6ನೇ ತರಗತಿಯಲ್ಲಿ ಸೊಂಟದ ಕೆಳಗೆ ಸ್ವಾಧೀನ ಕಳೆದುಕೊಳ್ಳುತ್ತಾ ಹೋಯಿತು. 10ನೇ ತರಗತಿವರೆಗೆ ತಾಯಿಯ ಸಹಾಯದಿಂದ ರಿಕ್ಷಾದಲ್ಲಿ ಮಣಿಪಾಲಕ್ಕೆ ಹೋಗಿ ವಿದ್ಯಾಭ್ಯಾಸ ಪಡೆದ. ಎಸೆಸೆಲ್ಸಿಯಲ್ಲಿ  ಶೇ. 61 ಅಂಕ ಪಡೆದಿದ್ದ. ಬಳಿಕ ಫ್ರೀಶಿಪ್‌ ನೆರವಿನಿಂದ ಮಣಿಪಾಲದಲ್ಲಿ ಡಿಪ್ಲೊಮಾ ಸೇರಿದ. ಅಲ್ಲಿಯೂ ಶಿಕ್ಷಣ ಮುಂದುವರಿಸುವುದು ಅಸಾಧ್ಯವಾಗಿ ಪ್ರಸ್ತುತ ಧನುಷ್‌ ಮನೆಯಲ್ಲಿ ಹಾಸಿಗೆಯಲ್ಲೇ ಇದ್ದು 3 ವರ್ಷಗಳಾಯಿತು. ಪ್ರತಿಯೊಂದು ಕೆಲಸಕ್ಕೂ ತಾಯಿ/ ಅಜ್ಜಿಯನ್ನೇ ಅವಲಂಬಿಸಿದ್ದಾನೆ.

ದರ್ಶನ್‌ಗೂ ಅದೇ ಸಮಸ್ಯೆ
ಧನುಷ್‌ ತಮ್ಮ ದರ್ಶನ್‌ನದ್ದೂ ಇದೇ ಸಮಸ್ಯೆ. ಹುಟ್ಟುವಾಗ ಸಾಮಾನ್ಯ ಮಕ್ಕಳಂತೆಯೇ ಇದ್ದ. ಅಣ್ಣನಿಗೆ ಸಮಸ್ಯೆ ಇದ್ದುದರಿಂದ ತಮ್ಮನನ್ನು ಕೂಡ ವೈದ್ಯರಿಗೆ ತೋರಿಸಲು ಪ್ರಮೀಳಾ ಅವರು ಕರೆದು ಕೊಂಡು ಹೋಗಿದ್ದರು. ಆಗ ಅಲ್ಲೂ ಅವರಿಗೆ ಶಾಕ್‌ ಕಾದಿತ್ತು. ದರ್ಶನ್‌ಗೂ ಡ್ನೂಸೆನ್‌ ಮಸ್ಕಾéಲರ್‌ ಡಿಸ್ಟ್ರೋಪಿ ಇದೆ ಎಂದು ವೈದ್ಯರು ಹೇಳಿದ್ದರು. 5ನೇ ತರಗತಿವರೆಗೆ ಸಾಮಾನ್ಯರಂತೆ ಇದ್ದ ದರ್ಶನ್‌ ದೇಹ ಬಳಿಕ ಬಲಕಳೆದುಕೊಳ್ಳುತ್ತಾ ಬಂದಿದೆ. ಔಷಧ ಮುಂದುವರಿದರೂ 9ನೇ ತರಗತಿ ಪೂರ್ಣಗೊಳಿಸುವುದೂ ಅಸಾಧ್ಯವಾಯಿತು. ಈಗ ಇವರಿಬ್ಬರೂ ಔಷಧ ತೆಗೆದುಕೊಳ್ಳುತ್ತಲೇ ಇದ್ದಾರೆ. 
  
ಇವರಿಗೆ ರೆಡ್‌ಕ್ರಾಸ್‌ ವತಿಯಿಂದ ವೀಲ್‌ಚೆಯರ್‌ ನೀಡಲಾಗಿದ್ದರೂ ಅದನ್ನು ಬಳಸಲು ಸ್ಥಳ ಸೂಕ್ತವಾಗಿಲ್ಲ. ಸ್ಥಳೀಯ ರೀಕ್ಷಾ ಚಾಲಕ ಉದಯ ನಾಯಕ್‌ ಅವರು ಎಷ್ಟೋ ಬಾರಿ ಮಕ್ಕಳಿಗೆ ನೆರವಾಗಿದ್ದಾರೆ. ಬೆಳಗ್ಗೆ ಬೇರೆಯವರ ಮನೆಗಳಿಗೆ ಮನೆಕೆಲಸಕ್ಕೆ ಹೋಗಿ ಅನಂತರ ಮನೆಗೆ ವಾಪಸಾಗುವ ಪ್ರಮೀಳಾ ಅವರು ತಮ್ಮ ತಾಯಿ ಅಪ್ಪಿ ಪೂಜಾರ್ತಿ ಅವರ ಜತೆಗೆ ಮಕ್ಕಳ ಆರೈಕೆಯಲ್ಲಿ ತೊಡಗುತ್ತಾರೆ. ಇವರಿಗೆ ತುರ್ತು ನೆರವು ಬೇಕಾಗಿದ್ದು, ಸಹಾಯ ಮಾಡಲಿಚ್ಛಿಸುವವರು ಸಿಂಡಿಕೇಟ್‌ ಬ್ಯಾಂಕ್‌ ಮಣಿಪಾಲ ಶಾಖೆ ಧನುಷ್‌ ಖಾತೆ ಸಂಖ್ಯೆ 01112210055279 IFSC code : SYNB 0000111 Syndicate Bank main branch manipalಗೆ ಸಲ್ಲಿಸಬಹುದು. 

ಲ್ಯಾಪ್‌ಟಾಪ್‌ನಲ್ಲಿ ಏನಾದರೂ ಮಾಡುವೆ
ಡಿಪ್ಲೊಮಾ ಮಾಡಬೇಕೆಂಬ ಆಸೆ ಯಿತ್ತು. ಆದರೆ ಲ್ಯಾಬ್‌ಗ ಹೋಗಲು, ಎಕ್ಸಾಮ್‌ ಹಾಲ್‌ಗೆ ಹೋಗುವುದು ಕೂಡ ಕಷ್ಟವಾಯಿತು. ಬೆನ್ನು ನೋವಿನಿಂದ ಕುಳಿತುಕೊಳ್ಳುವುದು ಕೂಡ ಕಷ್ಟವಾಯಿತು. ಹಾಗಾಗಿ ಅನಿವಾರ್ಯವಾಗಿ ವಿದ್ಯಾಭ್ಯಾಸ ನಿಲ್ಲಿಸಿದ್ದೇನೆ. ಈಗ ಮನೆಯಲ್ಲಿ ನನ್ನ ಮತ್ತು ತಮ್ಮನನ್ನು ಅಮ್ಮ ಮತ್ತು ಅಜ್ಜಿ ನೋಡಿಕೊಳ್ಳು ವಂತಾಗಿದೆ. ಲ್ಯಾಪ್‌ಟಾಪ್‌ನಲ್ಲೇ ಏನಾದರೂ ಕೆಲಸ ಮಾಡಿ ದುಡಿಯೋಣ ಎಂಬ ಆಸೆ ಇದೆ. 
– ಧನುಷ್‌ 

ಖಾಯಿಲೆ ಪೂರ್ಣ ಗುಣಪಡಿಸಲು ಚಿಕಿತ್ಸೆ ಇಲ್ಲ 
ಕಾಯಿಲೆ ವೇಗವಾಗಿ ಬೆಳೆಯದಂತೆ ನಿಯಂತ್ರಿಸುವುದಕ್ಕೆ ಔಷಧಿ ನೀಡಿದ್ದರಿಂದ ಧನುಷ್‌ ಇಷ್ಟರ ಮಟ್ಟಿಗೆ ವಿದ್ಯಾಭ್ಯಾಸ ಮಾಡುವುದು ಸಾಧ್ಯವಾಯಿತು. ಇಂತಹ ಕಾಯಿಲೆಯನ್ನು ಪೂರ್ಣವಾಗಿ ಗುಣಪಡಿಸಲು ಚಿಕಿತ್ಸೆ ಇಲ್ಲ. ಇರುವ ಔಷಧಿಯ ಮೂಲಕ ಒಂದು ಹಂತಕ್ಕೆ ನಿಯಂತ್ರಿಸ ಬಹುದು.
– ಡಾ| ನಳಿನಿ,
ಚಿಕಿತ್ಸೆ ನೀಡಿರುವ ವೈದ್ಯೆ 

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.