ಕಾಪು ಮೀನು ಮಾರುಕಟ್ಟೆ ಬಂದ್
Team Udayavani, Sep 9, 2018, 6:00 AM IST
ಕಾಪು: ಬೆಳಪುವಿನಲ್ಲಿ ತೆರೆದಿರುವ ಮೀನು ಮಾರಾಟದ ಅಂಗಡಿ ವಿರುದ್ಧ ಕಾಪು ಮಹಿಳಾ ಮೀನು ಮಾರಾಟಗಾರರು ಮಾರುಕಟ್ಟೆ ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು.
ಕಾಪು ಮೀನು ಮಾರುಕಟ್ಟೆಯಲ್ಲಿ ಸುಮಾರು 70 ಮಂದಿ ಮಹಿಳಾ ಮೀನುಗಾರರಿದ್ದಾರೆ. ಇವರೊಂದಿಗೆ ಇದ್ದ ಸುಮಾ ಎಂಬವರು ಕೆಲ ದಿನಗಳ ಹಿಂದೆ ಬೆಳಪುವಿನಲ್ಲಿ ಪ್ರತ್ಯೇಕವಾಗಿ ಮೀನು ಮಾರಾಟ ಅಂಗಡಿಯನ್ನು ತೆರೆದಿದ್ದು, ಇದರಿಂದ ತೊಂದರೆ ಯಾಗುತ್ತಿದೆ ಎಂದು ಮಹಿಳಾ ಮೀನು ಮಾರಾಟಗಾರರು ದೂರಿದ್ದಾರೆ.
ಸಂಘಕ್ಕೆ ಮನವಿ
ಬೆಳಪು ಗ್ರಾಮದಲ್ಲಿ ಹಸಿ ಮೀನು ಮಾರಾಟ ಅಂಗಡಿ ಪ್ರಾರಂಭಿಸಿರುವುದರಿಂದ 4 ದಿನ ಗಳಿಂದ ವ್ಯಾಪಾರ ಕುಂಠಿತವಾಗಿದೆ. ಬೆಳಪು, ಪಣಿಯೂರು, ಮಲ್ಲಾರು, ಮಜೂರಿನಿಂದ ಬರುವ ಗ್ರಾಹಕರು ಬೆಳಪುವಿನಲ್ಲೇ ಮೀನು ಖರೀದಿಸುತ್ತಿದ್ದು, ಕಾಪುವಿನಿಂದ ಮನೆ ಮನೆ ಮೀನು ಮಾರಾಟಗಾರರಿಗೂ ಇದರಿಂದ ತೊಂದರೆಯಾಗುತ್ತಿದೆ. ಇದನ್ನು ಬಗೆಹರಿಸಿ ಕೊಡುವಂತೆ ಕಾಪುವಿನ ಮಹಿಳಾ ಮೀನುಗಾರರು ಉಡುಪಿ ತಾ| ಮಹಿಳಾ ಹಸಿ ಮೀನು ಮಾರಾಟಗಾರರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ.
ಶನಿವಾರ ದಿನವಿಡೀ ಪ್ರತಿಭಟನೆ ನಡೆಸಿದ ಮಹಿಳೆಯರು ಬೆಳಪುಗೆ ತೆರಳಿ ಸುಮಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಅಂಗಡಿ ಮುಚ್ಚಿ ಪಾರಂಪರಿಕ ಮಾದರಿಯಲ್ಲಿ ಮೀನು ಮಾರಾಟಕ್ಕೆ ಸಹಕರಿಸಲು ಮನವಿ ಮಾಡಿದ್ದಾರೆ.
ಸ್ಥಳಾವಕಾಶದ ಕೊರತೆ
ಬೆಳಪುವಿನಲ್ಲಿ ಗ್ರಾಮ ಪಂಚಾಯತ್ ಅನುಮತಿ ಮೇರೆಗೆ ಅಂಗಡಿ ತೆರೆಯಲಾಗಿದೆ. ಕಾಪು ಮಾರುಕಟ್ಟೆಯಲ್ಲಿ ಕುಳಿತು ಕೊಳ್ಳಲು, ಮೀನು ಮಾರಾಟ ಮಾಡಲು ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಮಾರಾಟಕ್ಕೆ ಉದ್ದೇಶಿಸಿದ್ದೇನೆ. ಇದಕ್ಕೆ ನಮ್ಮದೇ ಸಮುದಾಯದ ಮಹಿಳೆಯರು ವಿರೋಧಿಸುವುದು ಬೇಸರ ತಂದಿದೆ.
– ಸುಮಾ,ಬೆಳಪುವಿನ ಮೀನು ಮಾರಾಟ ಮಹಿಳೆ
ಒಟ್ಟಾಗಿ ತೀರ್ಮಾನ
ಕಾಪುವಿನಲ್ಲಿ ನಾವೆಲ್ಲರೂ ಒಟ್ಟಾಗಿ ಮೀನು ಮಾರಾಟ ನಡೆಸುತ್ತಿದ್ದೇವೆ. ಈಗ ನಮ್ಮೊಂದಿಗೆ ಇದ್ದವರು ಬೇರೊಂದು ಪ್ರದೇಶದಲ್ಲಿ ಅಂಗಡಿ ತೆರೆದಿರುವುದು ಸಮಂಜಸವಲ್ಲ. ಮುಂದೆ ಎಲ್ಲರೂ ಇದೇ ರೀತಿ ಮಾಡಿದರೆ ನಮ್ಮ ಪಾಡೇನು ಎಂಬ ಚಿಂತೆ ಇದೆ. ಈ ಬಗ್ಗೆ ಅವರ ಬಳಿಯೂ ಮಾತುಕತೆ ನಡೆಸಿದ್ದೇವೆ. ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ.
– ಶಾಂತಾ, ಕಾಪು ಮೀನು
ಮಾರಾಟಗಾರ ಮಹಿಳಾ ಮುಖಂಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?