ತೀರ್ಥೋಟ್ಟು ಸೇತುವೆ ಬಳಿ ಕಂಟೈನರ್ಗಳ ಢಿಕ್ಕಿ
Team Udayavani, Oct 3, 2018, 10:41 AM IST
ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ತೀರ್ಥೋಟ್ಟು ಸೇತುವೆ ಬಳಿ ಎರಡು ಬೃಹತ್ ಕಂಟೈನರ್ಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಅಡ್ಡಲಾಗಿ ಕಂಟೈನರ್ಗಳು ಉರುಳಿ ಬಿದ್ದು ರಸ್ತೆ ಸಂಚಾರ ದಿನವಿಡೀ ಸ್ಥಗಿತಗೊಂಡ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಮಂಗಳೂರಿನಿಂದ ಕಾರ್ಕಳ ಮಾರ್ಗವಾಗಿ ಕಡ್ತಲ ಕಡೆಗೆ ಸಂಚರಿಸುತ್ತಿದ್ದ ಎರಡು ಬೃಹತ್ ಕಂಟೈನರ್ಗಳು ಅಪಘಾತಕ್ಕೆ ಈಡಾಗಿದೆ. ಅ.2ರಂದು ಬೆಳಗ್ಗೆ ತೀರ್ಥೋಟ್ಟು ಸೇತುವೆ ದಾಟಿ ಕಂಟೈನರ್ ಹೋಗುತ್ತಿದ್ದಾಗ ಸ್ಥಗಿತ ಗೊಂಡಿತ್ತು. ಆಗ ಚಾಲಕ ಹಿಮ್ಮುಖ ಚಲಾಯಿಸಿದಾಗ ನಿಯಂತ್ರಣ ಕಳೆದುಕೊಂಡ ಕಂಟೈನರ್ ಹಿಂದಿನಿಂದ ಬರುತ್ತಿದ್ದ ಮತ್ತೂಂದು ಕಂಟೈನರ್ಗೆ ಢಿಕ್ಕಿ ಹೊಡೆದು ಎರಡೂ ಕಂಟೈನರ್ಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದವು. ಅಪಘಾತದಿಂದಾಗಿ ಹಿಂದಿನಿಂದ ಬರುತ್ತಿದ್ದ ಕಂಟೈನರ್ನ ಚಾಲಕನ ಕೈಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಟೈನರ್ ಉರುಳಿ ಬಿದ್ದು ಸಂಚಾರ ಸ್ಥಗಿತಗೊಂಡ ಪರಿಣಾಮ ಅಜೆಕಾರು ಹಾಗೂ ಕಡ್ತಲ, ಕುಕ್ಕುಜೆ ಪರಿಸರದ ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದರು. ವಾಹನಗಳು ಸುತ್ತುಬಳಸಿ ಮುನಿಯಾಲು ಬದಲಿ ಮಾರ್ಗವಾಗಿ ಸಂಚರಿಸಿದವು.
ಮತ್ತೆ ಸಂಚಾರ ಸ್ಥಗಿತ
ಪ್ರತೀ ವರ್ಷ ಮುಳುಗು ಸೇತು ವೆಯ ಸಮಸ್ಯೆಯಿಂದ ತೀರ್ಥೋಟ್ಟು ಸೇತುವೆ ಮುಳುಗಿ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ಆದರೆ ಈ ಭಾರಿ ಬೃಹತ್ ಸೇತುವೆ ನಿರ್ಮಾಣಗೊಂಡು ಮುಳುಗು ಸೇತುವೆ ಸಮಸ್ಯೆ ಪರಿಹಾರ ಗೊಂಡಿತು. ಅಪಘಾñ ದಿಂದಾಗಿ ಮಂಗಳವಾರ ಸಂಚಾರ ಮತ್ತೆ ಸ್ಥಗಿತಗೊಂಡಿತ್ತು.
ರಾತ್ರಿ ವೇಳೆ ತೆರವು
ಕಂಟೈನರ್ಗಳು ಸಂಜೆಯವರೆಗೂ ತೆರವುಗೊಳ್ಳದೆ ಇರುವುದನ್ನು ಮನಗಂಡ ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಅವರು ಬೃಹತ್ ಕ್ರೇನ್ಗಳನ್ನು ತರಿಸಿ ಕಂಟೈನರ್ಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅಜೆಕಾರು ಪೊಲೀಸರಿಗೆ ಹಾಗೂ ಕಂಟೈನರ್ಗಳ ಮಾಲಕರಿಗೆ ಸೂಚಿಸಿ ದರು. ರಾತ್ರಿ ಏಳು ಗಂಟೆ ವಳೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ