ನಾನ್ ಸಿಆರ್ಝಡ್ ಮರಳು: ಅನುಮತಿಗೆ ಇನ್ನೂ 3 ವಾರ
Team Udayavani, Dec 9, 2018, 9:48 AM IST
ಕುಂದಾಪುರ: ನಾನ್ ಸಿಆರ್ಝಡ್ ಪ್ರದೇಶದಲ್ಲಿ ಮರಳು ತೆಗೆಯಲು ಅನುಮತಿ ಕೊಡಲು ಇನ್ನೂ ಮೂರು ವಾರಗಳ ಕಾಲಾವಕಾಶ ಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಅವರು ಕುಂದಾಪುರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಸಿಆರ್ಝಡ್ ಪ್ರದೇಶದಲ್ಲಿ 5 ಜನರಿಗೆ ಟೆಂಡರ್ ಆಗಿ ಅನುಮತಿ ನೀಡಲಾಗಿದೆ. ಕೆಲವೆಡೆ ಮರಳು ತೆಗೆಯಲು ಅಡ್ಡಿಪಡಿಸುತ್ತಿರುವ ಕುರಿತು ಮಾಹಿತಿಯಿದೆ. ಲಿಖೀತ ದೂರು ಬಂದರೆ ಪೊಲೀಸ್ ರಕ್ಷಣೆ ನೀಡಿ ಮರಳು ತೆಗೆಯಲು ಅನುವು ಮಾಡಲಾಗುವುದು. ಅನುಮತಿ ನೀಡಿದ ಬಳಿಕ ಅಡ್ಡಿಪಡಿಸುವಂತಿಲ್ಲ. ನಾನ್ಸಿಆರ್ಝಡ್ ಪ್ರದೇಶದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅನುಮತಿ ನೀಡುತ್ತಿರುವುದರಿಂದ ಕಾಲಾವಕಾಶ ಬೇಕಾಗುತ್ತದೆ. ಟೆಂಡರ್, ಹಣಕಾಸಿನ ಅನುಮತಿ ಸೇರಿದಂತೆ ಮೂರು ವಾರಗಳೇ ತಗಲುತ್ತದೆ. ಕೋಡಿ ಪ್ರದೇಶದಲ್ಲಿ ಗಂಗೊಳ್ಳಿ ಬ್ರೇಕ್ವಾಟರ್ ಕಾಮಗಾರಿ ವೇಳೆ ತೆಗೆದ ಮರಳನ್ನು ಸರಕಾರಿ ದರದಲ್ಲಿ ಸಾರ್ವಜನಿಕರಿಗೆ ನೀಡಲಾಗುವುದು. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯನ್ನು ಸಂಪರ್ಕಿಸಬಹುದು ಎಂದರು.
ಸಾಸ್ತಾನದಲ್ಲಿ ಟೋಲ್ ಕುರಿತು ಹೋರಾಟಗಾರರು – ಗುತ್ತಿಗೆದಾರರ ಮಾತುಕತೆ ಯಶಸ್ವಿಯಾಗಿ ನಡೆದಿದೆ. ಸಿಬಂದಿ ಬದಲಾಗುತ್ತಾ ಇರುವ ಕಾರಣ ಸಮಸ್ಯೆಯಾಗುತ್ತದೆ ಎನ್ನುವುದು ಗಮನಕ್ಕೆ ಬಂದಿದ್ದು ಗುತ್ತಿಗೆದಾರರಿಗೆ ತಿಳಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ