ಏಳಿಗೆಗೆ ಶುದ್ಧ ಮನಸ್ಸು, ಛಲ, ಕಠಿನ ಶ್ರಮ ಕೀಲಿಕೈ
Team Udayavani, Dec 7, 2018, 10:40 AM IST
ಉಡುಪಿ: ಜೀವನದಲ್ಲಿ ಸಾಧನೆ ಮಾಡಲು ಹದಿಹರಯದಲ್ಲಿ ಪರಿಶ್ರಮ, ಶುದ್ಧ ಮನಸ್ಸು, ಛಲ ಇರಲೇಬೇಕು ಎಂದು ದಿಲ್ಲಿ ಜಿಎಸ್ಟಿ ಆಯುಕ್ತ ರಾಜೇಶ್ ಪ್ರಸಾದ್ ಅಭಿಪ್ರಾಯಪಟ್ಟರು.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಗುರುವಾರ ನಡೆದ ಎಂಜಿಎಂ ಪ.ಪೂ. ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹದಿಹರೆಯದಲ್ಲಿ ಮೋಜು ಮಸ್ತಿಗೆ ಒಳಗಾಗದೆ ಕಷ್ಟ ಪಟ್ಟು ಓದಬೇಕು. ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದ್ದೇ ಇರುತ್ತದೆ ಎಂಬುದನ್ನು ವಿವೇಕಾನಂದರು ಬೆಟ್ಟು ಮಾಡಿದ್ದಾರೆ. ಸಕಾರಾತ್ಮಕ ಚಿಂತನೆ ಹೊಂದಿ ನಮ್ಮ ಭವಿಷ್ಯವನ್ನು ನಾವೇ ರೂಪಿಸಬೇಕು ಎಂದರು.
ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ವಹಿಸಿದ್ದರು. ಪ್ರಾಂಶುಪಾಲ ಡಾ| ಎಂ.ಜಿ. ವಿಜಯ, ಪೋಷಕರು-ಶಿಕ್ಷಕರ ಸಂಘದ ಅಧ್ಯಕ್ಷ ಆತ್ರಾಡಿ ಪೃಥ್ವೀರಾಜ್ ಹೆಗ್ಡೆ ಗೌರವ ಅತಿಥಿಯಾಗಿದ್ದರು. ಪ.ಪೂ. ಪ್ರಾಂಶುಪಾಲೆ ಮಾಲತಿದೇವಿ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ನೇಹಾ ಭಟ್ ಸ್ವಾಗತಿಸಿ ವಿಭಾ ರಾವ್ ವಿದ್ಯಾರ್ಥಿ ಚಟುವಟಿಕೆಗಳನ್ನು ವಿವರಿಸಿದರು. ಅನಿಷಾ ಅತಿಥಿಗಳನ್ನು ಪರಿಚಯಿಸಿದರು. ಪ್ರತೀಕ್ ವಂದಿಸಿದರು. ಶ್ರಾವ್ಯ ಮಲ್ಯ ಕಾರ್ಯಕ್ರಮ ನಿರ್ವಹಿಸಿದರು.
ಜೀವನವೇ ಶಿಕ್ಷಕ, ಜಗತ್ತೇ ಶಾಲೆ
ಮೋಹನದಾಸ ಕರಮಚಂದ ಗಾಂಧಿ ಸತ್ಯ, ಅಹಿಂಸೆ, ತ್ಯಾಗ, ಪ್ರಾಮಾಣಿಕತೆ, ನಿಸ್ವಾರ್ಥಸೇವೆಯಿಂದ ಮಹಾತ್ಮನಾದರು. ಜೀವನದಲ್ಲಿ ಶಿಸ್ತು ಬಹಳ ಮುಖ್ಯ, ಜ್ಞಾನಾರ್ಜನೆ ಮಾಡಬೇಕೆಂಬ ಇಚ್ಛೆಯೂ ಅಗತ್ಯ. ಜೀವನವೇ ಗುರು, ಭೂಮಿಯೇ ಶಾಲೆ. ಜೀವನ, ಪರಿಸರದ ಅನುಭವ ಗಳಿಸುತ್ತ ಸಾಧನೆಯತ್ತ ಮುಂದಾಗಬೇಕು. ಕಷ್ಟಪಟ್ಟರೆ ಸಾಧನೆ ಮಾಡಬಹುದು ಎಂಬುದಕ್ಕೆ ಮಣಿಪಾಲದ ಡಾ| ಟಿಎಂಎ ಪೈಯವರೇ ಉದಾಹರಣೆ. ಹದಿಹರೆಯವನ್ನು ಸಮರ್ಥವಾಗಿ ಬಳಸಿಕೊಳ್ಳದೆ ಇದ್ದರೆ ಸಮಾಜಕ್ಕೂ ಹೆತ್ತವರಿಗೂ ಭಾರವಾಗುತ್ತೇವೆ. ಹದಿವಯಸ್ಸು ಭವಿಷ್ಯದ ಭದ್ರ ಬುನಾದಿ ನಿರ್ಮಿಸಲು ಸಕಾಲ ಎಂದು ರಾಜೇಶ್ಪ್ರಸಾದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ