ರಾಷ್ಟ್ರಪತಿ ಸ್ವಾಗತಕ್ಕೆ ಸಿದ್ಧಗೊಳ್ಳುತ್ತಿದೆ ಉಡುಪಿ ಐಬಿ
Team Udayavani, Dec 18, 2018, 10:29 AM IST
ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಡಿ. 27ರಂದು ಉಡುಪಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಉಡುಪಿಯ ಸರಕಾರಿ ಪ್ರವಾಸಿ ಬಂಗಲೆ (ಐಬಿ)ಯನ್ನು ಒಪ್ಪ ಓರಣವಾಗಿಸುವ ಕೆಲಸ ಆರಂಭಗೊಂಡಿದೆ.
ಕಳೆದ ಬಾರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉಡುಪಿಗೆ ಆಗಮಿಸಿದ್ದಾಗ ನೂತನ ಪ್ರವಾಸಿ ಬಂಗಲೆಯಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಈ ಬಾರಿ ರಾಮನಾಥ ಕೋವಿಂದ್ ಅವರು ಕೂಡ ಇಲ್ಲಿಯೇ ವಿಶ್ರಮಿಸುವ ನಿರೀಕ್ಷೆ ಇರುವುದರಿಂದ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ವಿವಿಐಪಿ ಸೂಟ್
ಹೊಸ ಐಬಿಯಲ್ಲಿ ಮೇಲಂತಸ್ತು ಮತ್ತು ಕೆಳ ಅಂತಸ್ತಿನಲ್ಲಿ ತಲಾ ಒಂದು ವಿವಿಐಪಿ ಸೂಟ್ಗಳಿವೆ. ಕೆಳಗಿನ ವಿವಿಐಪಿ ಸೂಟ್ನ್ನು ರಾಷ್ಟ್ರಪತಿಯವರಿಗೆ ಮೀಸಲಿ ಡಲಾಗುತ್ತದೆ. ಪ್ರಣವ್ ಮುಖರ್ಜಿ ಅವರ ಆಗಮನದ ವೇಳೆ ವಿವಿಐಪಿ ಸೂಟ್ಗೆ ಬೇಕಾದ ಸಲಕರಣೆಗಳನ್ನು ಜೋಡಿಸಿ ಸಿದ್ಧಪಡಿಸಲಾಗಿತ್ತು. ಹೊಸ ಐಬಿಯ 20 ಹಾಗೂ ಹಳೆಯ ಐಬಿಯ 5 ಕೊಠಡಿಗಳು ಸೇರಿದಂತೆ ಎಲ್ಲ ಕೊಠಡಿಗಳನ್ನು ಸುವ್ಯವಸ್ಥಿತವಾಗಿಸುವ ಕೆಲಸ ನಡೆಯುತ್ತಿದೆ. ಅಗತ್ಯ ಇರುವಲ್ಲಿ ಪೈಂಟಿಂಗ್ ಟಚ್ಅಪ್ ಕೊಡಲಾಗುತ್ತಿದೆ. ಹಳೆಯ ಐಬಿಗೆ ಸಂಪೂರ್ಣ ಪೈಂಟಿಂಗ್ ನಡೆಯುತ್ತಿದೆ.
ಹೊಟೇಲ್ನಿಂದ ಭೋಜನ
ಕಳೆದ ಬಾರಿ ಪ್ರಣವ್ ಮುಖರ್ಜಿ ಅವರಿಗೆ ಉಡುಪಿಯ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ಭೋಜನ ಸಿದ್ಧಪಡಿಸಲಾಗಿತ್ತು. ಈ ಬಾರಿಯೂ ಅಲ್ಲಿಯೇ ತಯಾರಾಗುವ ಸಾಧ್ಯತೆಗಳಿವೆ. ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಐಬಿಯಲ್ಲಿ ಮೂರು ದಿನಗಳ ಕಾಲ ಇತರರಿಗೆ ಕೊಠಡಿಗಳ ಬುಕ್ಕಿಂಗ್ ಇರುವುದಿಲ್ಲ. ಈ ಹಿಂದೆ ರಾಜೀವ್ ಗಾಂಧಿ, ಅನಂತರ ರಾಷ್ಟ್ರಪತಿ ಶಂಕರ್ದಯಾಳ್ ಶರ್ಮಾ ಅವರು ಕೂಡ ಉಡುಪಿಯ ಐಬಿಯಲ್ಲಿ (ಹಳೆ) ತಂಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?