ಫೆ.10: ಹಿಂದೂ ರಾಷ್ಟ್ರ ಜಾಗೃತಿ ಸಭೆ
Team Udayavani, Jan 17, 2019, 12:50 AM IST
ಉಡುಪಿ: ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಜಿÇÉೆಯಾದ್ಯಂತ ಈಗಾಗಲೇ ಪುತ್ತೂರು ಅಂಬಾಗಿಲು, ನೇರಳಕಟ್ಟೆ, ಕೆರಾಡಿ, ಪರ್ಕಳದಲ್ಲಿ ಧರ್ಮ ಜಾಗೃತಿ ಸಭೆಗಳು ನಡೆದಿದ್ದು, ಉಡುಪಿಯಲ್ಲಿ ಫೆ.10ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸುವ ಕುರಿತು ಜ. 15 ರಂದು ಉಡುಪಿ ರಥಬೀದಿಯ ಪುತ್ತಿಗೆ ಮಠದಲ್ಲಿ ಪೂರ್ವಭಾವಿ ಸಭೆ ಜರಗಿತು.
ಸಭೆಯಲ್ಲಿ ಭಾಗವಹಿಸಿದ ಸಮಿತಿಯ ವಿಜಯ ಕುಮಾರ ಅವರು ಮಾತನಾಡಿ, ಹಿಂದೂ ಧರ್ಮದ ಮೇಲಾಗುವ ಆಘಾತಗಳನ್ನು ತಡೆಯುವುದು ಪ್ರಸ್ತುತ ಕಾಲದ ಮಹತ್ವದ ಧರ್ಮ ಕಾರ್ಯವಾಗಿದೆ. ಅದಕ್ಕಾಗಿ ಎಲ್ಲರೂ ಸಂಘಟಿತರಾಗಬೇಕಾಗಿದೆ. ಹಿಂದೂ ಸಮಾಜ, ದೇಶದ ಮೇಲೆ ಎರಗಿ ಬಂದ ಎಲ್ಲ ಸಮಸ್ಯೆಗಳಿಗೆ ಹಿಂದೂ ರಾಷ್ಟ್ರದ ಸ್ಥಾಪನೆಯಿಂದ ಶಾಶ್ವತವಾಗಿ ಪರಿಹಾರ ಸಿಗಲಿದೆ. ಅದಕ್ಕಾಗಿ ಎಲ್ಲರೂ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಭಾಗವಹಿಸಬೇಕು ಎಂದರು.
ಸನಾತನ ಸಂಸ್ಥೆಯ ಶೋಭಾ, ಶ್ರೀರಾಮಸೇನೆಯ ಜಿÇÉಾಧ್ಯಕ್ಷ ಜಯರಾಮ ಅಂಬೆಕಲ್ಲು ಮತ್ತು ಇತರ ಸಂಘಟನೆಗಳ ಹಲವರು ಭಾಗವಹಿಸಿದ್ದರು. ಪೂರ್ವಭಾವಿ ಸಭೆಯಲ್ಲಿ ಫೆ.10ರಂದು ಉಡುಪಿಯ ಬೋರ್ಡ… ಹೈಸ್ಕೂಲಿನ ವಠಾರದಲ್ಲಿ ದೊಡ್ಡ ಮಟ್ಟದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲು ನಿರ್ಧರಿಸಲಾಯಿತು. ಇದಕ್ಕಾಗಿ ಜಿÇÉೆಯಾದ್ಯಂತ ದೇವಸ್ಥಾನಗಳು, ಭಜನಾ ಮಂದಿರ, ಧಾರ್ಮಿಕ ಸಂಘಟನೆಗಳು, ಯುವಕ ಮಂಡಲಗಳು, ಜಾತಿ ಸಂಘಟನೆಗಳನ್ನು ಭೇಟಿ ಮಾಡಲು ನಿರ್ಧರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ