ಉಡುಪಿಗೆ ಬರಲಿದೆ ಕುಟುಂಬ ನ್ಯಾಯಾಲಯ
Team Udayavani, Jan 21, 2019, 12:30 AM IST
ಉಡುಪಿ: ಉಡುಪಿಗೆ ಸದ್ಯದಲ್ಲಿಯೇ ಕುಟುಂಬ ನ್ಯಾಯಾಲಯ ಬರಲಿದೆ. ಸರಕಾರ ಉಡುಪಿ, ಕೊಡಗು, ಉತ್ತರಕನ್ನಡ ಜಿಲ್ಲೆ ಸಹಿತ 13 ಜಿಲ್ಲೆಗಳಿಗೆ ಕುಟುಂಬ ನ್ಯಾಯಾ ಲಯವನ್ನು ಮಂಜೂರು ಮಾಡಿದೆ.
ಮೂಲ ಸೌಕರ್ಯಗಳ ಲಭ್ಯತೆ ಆಧರಿಸಿ ಈ ನ್ಯಾಯಾಲಯಗಳು ಆರಂಭವಾಗಲಿವೆ. ಹೊಸ ನ್ಯಾಯಾ ಲಯಕ್ಕೆ ಒಂದು ಕೋರ್ಟ್ ಹಾಲ್, ಎರಡು ಕಚೇರಿಗಳು, ನ್ಯಾಯಾಧೀಶರ ಕೊಠಡಿ ಸೇರಿ ಸುಮಾರು 2,000 ಚದರಡಿ ವಿಸ್ತೀರ್ಣದ ಕಟ್ಟಡ ಅಗತ್ಯವಿದೆ.
ಹೊಸ ಕಟ್ಟಡ ನಿರ್ಮಾಣದ ವರೆಗೆ ಇರುವ ಕಟ್ಟಡಗಳ ಖಾಲಿ ಜಾಗದಲ್ಲಿ ಆರಂಭಿಸಲು ಅವಕಾಶವಿದ್ದರೂ ಉಡುಪಿ ನ್ಯಾಯಾಲಯ ಸಂಕೀರ್ಣ ದಲ್ಲಿ ಈಗಾಗಲೇ ಜಾಗದ ಕೊರತೆ ಇದೆ. ಒಂದೇ ಸಂಕೀರ್ಣದಲ್ಲಿ ಎಲ್ಲ ನ್ಯಾಯಾಲಯಗಳಿದ್ದರೆ ಅನು ಕೂಲ. ಈಗಿರುವ ನ್ಯಾಯಾಲಯ ಸಂಕೀರ್ಣದಲ್ಲಿ ಮೂರನೇ ಮಹಡಿ ನಿರ್ಮಿಸುವ ಪ್ರಸ್ತಾವವಿದೆ. 4.2 ಕೋ.ರೂ. ಅಂದಾಜು ವೆಚ್ಚದ ಈ ಕಟ್ಟಡಕ್ಕೂ ಸರಕಾರ ಅನುದಾನ ಮಂಜೂರು ಮಾಡಿದ ಬಳಿಕವೇ ಸಾಧ್ಯ.
ಈ ರೀತಿ ಕುಟುಂಬ ನ್ಯಾಯಾ ಲಯಕ್ಕೆ ಸಂಬಂಧಿಸಿದ ಸುಮಾರು 750 ಪ್ರಕರಣಗಳು ಜಿಲ್ಲೆಯಲ್ಲಿ ಇರಬಹುದು ಎಂದು ಅಂದಾಜಿಸಬಹುದು.
ಕುಟುಂಬ ನ್ಯಾಯಾಲಯಗಳು ಇಲ್ಲದ ಕಡೆ ಇತರ ನ್ಯಾಯಾಲಯಗಳೇ ವೈವಾಹಿಕ ಪ್ರಕರಣಗಳ ವಿಚಾರಣೆ ನಡೆಸುತ್ತವೆ. ಕುಟುಂಬ ನ್ಯಾಯಾಲಯ ಆರಂಭವಾದ ಬಳಿಕ ವೈವಾಹಿಕ ಪ್ರಕರಣಗಳ ಇತ್ಯರ್ಥಕ್ಕೆ ವೇಗ ಸಿಗುತ್ತದೆ. ಕುತೂಹಲದ ವಿಷಯವೆಂದರೆ, ವಿದ್ಯಾವಂತರು ಜಾಸ್ತಿಯಿರುವಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಿಗೆ ಇರುತ್ತವೆ.
ಇನ್ನೊಂದು ಜಿಲ್ಲಾ
ನ್ಯಾಯಾಲಯ ಪ್ರಸ್ತಾವ
ಜಿಲ್ಲೆಯಲ್ಲಿ ಸುಮಾರು 2,800 ಪ್ರಕರಣಗಳು ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದು, ಇನ್ನೊಂದು ಜಿಲ್ಲಾ ನ್ಯಾಯಾಲಯದ ಸ್ಥಾಪನೆಯ ಪ್ರಸ್ತಾವವಿದೆ.
ಕೌಟುಂಬಿಕ ಪ್ರಕರಣ ಶೀಘ್ರ ಇತ್ಯರ್ಥ
ಕುಟುಂಬ ನ್ಯಾಯಾಲಯದ ವ್ಯಾಪ್ತಿಯಲ್ಲಿ ವಿಶೇಷವಾಗಿ ವರದಕ್ಷಿಣೆ, ವಿಚ್ಛೇದನ ಇತ್ಯಾದಿ ವೈವಾಹಿಕ ಪ್ರಕರಣಗಳು ಸೇರಿರುತ್ತವೆ. ಉಡುಪಿ ಜಿಲ್ಲೆಯ ಒಟ್ಟು 17 ನ್ಯಾಯಾಲಯಗಳಲ್ಲಿ 12,687 ಸಿವಿಲ್, 16,079 ಕ್ರಿಮಿನಲ್ ಸೇರಿ ಒಟ್ಟು 28,766 ಪ್ರಕರಣಗಳು ವಿಚಾರಣೆಯಲ್ಲಿವೆ. ಇವುಗಳಲ್ಲಿ ಮಹಿಳೆಯರು ಕೊಟ್ಟ ದೂರಿನ ಪ್ರಕರಣಗಳು 2,761 ಸಿವಿಲ್ ಮತ್ತು 837 ಕ್ರಿಮಿನಲ್ ಒಟ್ಟು 3,598 ಪ್ರಕರಣಗಳಿವೆ. ಇವುಗಳಲ್ಲಿ ವೈವಾಹಿಕ ಪ್ರಕರಣಗಳೂ ಸೇರಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!