ಕೋಟೆ : ಮಟ್ಟುಗುಳ್ಳ ಗದ್ದೆಗೆ ನುಗ್ಗಿದ ಉಪ್ಪು ನೀರು
Team Udayavani, Feb 22, 2019, 12:30 AM IST
ಕಟಪಾಡಿ: ಕೋಟೆ-ಮಟ್ಟು ಬಳಿಯ ಮಟ್ಟುಗುಳ್ಳ ಬೆಳೆಗಾರರ ಗದ್ದೆಗೆ ಫೆ.20ರ ತಡರಾತ್ರಿ ಪಾಂಗಾಳ ಪಿನಾಕಿನಿ ಹೊಳೆಯ ಉಪ್ಪು ನೀರು ನುಗ್ಗಿದ್ದು ಕೆಲವೆಡೆ ತೀವ್ರ ಬೆಳೆ ಹಾನಿ ಸಂಭವಿಸಿದೆ.
ಪಾಂಗಾಳ-ಮಟ್ಟು ಸೇತುವೆಯ ಭಾಗ ದಿಂದ ಬ್ಯಾರಿ ತೋಟದವರೆಗೆ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗಿದೆ. ಪಾಂಗಾಳ-ಮಟ್ಟು ಸೇತುವೆ ಬಳಿಯ ಕರಾವಳಿ ಇಂಟಿಗ್ರೇಟೆಡ್ ಅಗ್ರೋ ಪ್ರೊಡ್ನೂಸರ್ ಲಿ. ಅವರು ಸಾಂಪ್ರದಾಯಿಕವಾಗಿ ಸುಮಾರು 2 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಫಸಲು ನೀಡುತ್ತಿದ್ದ ಮಟ್ಟುಗುಳ್ಳದ ಗಿಡಗಳು ಹಾನಿಗೊಂಡಿವೆ.
ಅಧಿಕಾರಿಗಳಿಂದ ಪರಿಶೀಲನೆ
ಉಪ್ಪು ನೀರು ಮಟ್ಟು ಬೆಳೆಗಾರರ ಗದ್ದೆಗೆ ನುಗ್ಗಿ ತೀವ್ರ ಹಾನಿಯಾಗಿರುವ ಬಗ್ಗೆ ಫೆ.21ರಂದು ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪಾಂಗಾಳ-ಕೈಪುಂಜಾಲು ಸೇತುವೆ
ನಿರ್ಮಾಣದ ಅವೈಜ್ಞಾನಿಕ ಕಾಮಗಾರಿ ಯಿಂದಾಗಿ ನೀರಿನ ಸರಾಗ ಹರಿಯುವಿಕೆಗೆ ತಡೆಯುಂಟಾಗಿದ್ದು, ಉಕ್ಕೇರಿದ ಉಪ್ಪು ನೀರು ಹೆಚ್ಚು ಒಳಪ್ರದೇಶಕ್ಕೆ ನುಗ್ಗಿದ್ದು, ಹೆಚ್ಚು ಹಾನಿ ಸಂಭವಿಸುವಂತಾಗಿದೆ ಎಂದು ಅಧಿಕಾರಿ ವಾದಿರಾಜ ಅವರು ಹೇಳಿದ್ದಾರೆ. ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಕಲ್ಲಿನ ತಡೆಗೋಡೆ ನಿರ್ಮಿಸುವ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು ಇನ್ನಾದರೂ ಆದ್ಯತೆ ಮೇರೆಗೆ ತಡೆಗೋಡೆ ನಿರ್ಮಿಸುವಂತೆ ಕೃಷಿಕರು ಆಗ್ರಹಿಸಿದ್ದಾರೆ.
ಎರಡು ಎಕರೆಯಷ್ಟು ಹಾನಿ
ಹಡೀಲು ಗದ್ದೆಯನ್ನು ಬಳಸಿ ಕೃಷಿ ಕಾಯಕ ನಡೆಸುವ ನಮ್ಮ ಸಂಸ್ಥೆಯ ಮೂಲಕ ಸುಮಾರು 65 ಸಾವಿರ ರೂ. ತೊಡಗಿಸಿಕೊಂಡು ಸಾಂಪ್ರದಾಯಿಕವಾಗಿ ಮಟ್ಟುಗುಳ್ಳದ ಬೆಳೆಯನ್ನು ಬೆಳೆಸಲಾಗಿತ್ತು.ಬುಧವಾರ ತಡರಾತ್ರಿ ಉಕ್ಕೇರಿದ ಹೊಳೆಯ ಉಪ್ಪು ನೀರು ಗದ್ದೆಯೊಳಗೆ ಒಳನುಗ್ಗಿದ್ದು ಸುಮಾರು 2 ಎಕರೆಯಷ್ಟು ಮಟ್ಟುಗುಳ್ಳ ಬೆಳೆಯು ಹಾನಿಗೀಡಾಗಿದೆ.
– ವಸಂತ್ ರಾವ್,ಸಿ.ಇ.ಒ.,ಕೆ.ಐ.ಎ.ಪಿ.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…