ತುಂಬಿ ಹರಿದ ಸೂಪಾ ಜಲಾಶಯ


Team Udayavani, Sep 5, 2018, 4:41 PM IST

5-september-23.jpg

ಜೋಯಿಡಾ: ಏಷ್ಯಾದ ಎರಡನೇ ಅತಿ ಎತ್ತರದ ಹಿರಿಮೆಯ ಸೂಪಾ ಜಲಾಶಯ ಈ ಬಾರಿ ತುಂಬಿ ಹರಿಯುವ ಮೂಲಕ ತನ್ನೊಡಲಿನಿಂದ ಈಗ ಮೂರನೇ (1994, 2006, 2018) ಬಾರಿ ತುಂಬಿ ಹರಿದ ದಾಖಲೆ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಆ.29 ರಿಂದ ಸೆ.2 ವರೆಗೆ ಕ್ರಿಸ್‌ಗೇಟ್‌ ಮೂಲಕ ಹೊರಹರಿದು ಸಾವಿರಾರು ಪ್ರವಾಸಿಗರಿಗೆ ತನ್ನ ಸೌಂದರ್ಯ ದರ್ಶನ ಮಾಡಿ ಮನತಣಿಸಿತ್ತು. ದಿನನಿತ್ಯ 7 ಕ್ಯೂಸೆಕ್‌ ನೀರು ಹಾಲನೊರೆಯಂತೆ ಹರಿಯುವ ದೃಶ್ಯ ಮನಮೋಹಕವಾಗಿತ್ತು. ಮೂರೂ ಗೆಟ್‌ಗಳಿಗೆ ಕೆಸರಿ, ಬಿಳಿ, ಹಸಿರು ಮೂರೂ ಬಣ್ಣದ ವಿದ್ಯುತ್‌ ದ್ವೀಪವನ್ನಳವಡಿಸಿದ್ದು, ರಾತ್ರಿವೇಳೆ ತುಂಬಾ ಸುಂದರವಾಗಿ ರಾಷ್ಟ್ರಧ್ವಜದ ಬಣ್ಣಾಲಂಕಾರವನ್ನು ಚಿತ್ರಿಸುವ ಮೂಲಕ ಪ್ರವಾಸಿಗರ ಮನ ಸೊರೆಗೊಂಡಿತು.

ಆ.15 ರಂದು ಹಿನ್ನೀರಿನ ಒಳಹರಿವಿನ ಪ್ರಮಾಣ 35 ರಿಂದ 40 ಸಾವಿರ ಕ್ಯೂಸೆಕ್‌ ದಾಟುವ ಹಂತದಲ್ಲಿದ್ದ ಸಂದರ್ಭದಲ್ಲಿ ಜಲಾಶಯದ ನೀರಿನ ಎತ್ತರ 557 ಮೀ. ರಷ್ಟಿರುವಾಗಲೇ ಜಲಾಶಯ ತುಂಬಿ ಹರಿಯುವ ಸಾಧ್ಯತೆಯನ್ನು ಮನಗಂಡು ಉಸ್ತುವಾರಿ ಸಚಿವ ದೇಶಪಾಂಡೆ ಕಾಳಿ ನದಿಗೆ ಸೂಪಾ ಜಲಾಶಯದ ಮೂಲಕ ಭಾಗಿನ ಅರ್ಪಿಸಿದ್ದರು.

ಇದಾದ ನಂತರ ಹಂತಹಂತವಾಗಿ ಏರುತ್ತಾ ಬಂದ ಜಲಾಶಯದ ನೀರಿನ ಮಟ್ಟ ಕಳೆದ ಆ.29 ರಂದು 562.75 ಮೀ. ದಾಟುತ್ತಿದಂತೆ ಸಂಗ್ರಹ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಮಧ್ಯಾಹ್ನ 3 ಗಂಟೆಯಿಂದ 7 ಸಾವಿರ ಕ್ಯೂಸೆಕ್‌ ನಷ್ಟು ಮೇಲ್ಭಾಗದ ಕ್ರಿಸ್‌ಗೇಟ್‌ನಿಂದ ಬಿಡಲಾರಂಭಿಸಿದ್ದರು. ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ಸೆ.2 ರ ರಾತ್ರಿ 8 ಗಂಟೆಯಿಂದ ಹೊರಹರಿವನ್ನು ನಿಲ್ಲಿಸಲಾಯಿತು.

ಸದ್ಯ ಸೆ.3 ರಂದು ಸೂಪಾ ಡ್ಯಾಂ ಲೆವೆಲ್‌ 562.74 ಆಗಿದ್ದು, ಒಳಹರಿವಿನ ಪ್ರಮಾಣ 5600 ಕ್ಯೂಸೆಕ್‌ ಆಗಿದ್ದರೆ, ಪ್ರತಿನಿತ್ಯ ವಿದ್ಯುತ್‌ ಉತ್ಪಾದನೆಗಾಗಿ ಹೊರಹರಿವಿನ ಪ್ರಮಾಣ 4.300 ಕ್ಯೂಸೆಕ್‌ ಆಗಿದೆ. ಹೊರಹರಿವಿನಂದಾಗಿ ನಿತ್ಯ 2.4 ಮಿಲಿಯನ್‌ ಯುನಿಟ್‌ ಪವರ್‌ ಜನರೇಟ್‌ ಮಾಡಲಾಗುತ್ತಿದೆ. ಈಗಾಗಲೆ 5 ದಿನಗಳಿಂದ ಸೂಪಾ ಜಲಾಶಯದಿಂದ ಹೊರಹರಿದು ಬಿಡಲಾಗಿದ್ದ ಒಟ್ಟು 1.9 ಟಿಎಂಸಿ ನೀರನ್ನು ಅಂಬಿಕಾನಗರ ಡ್ಯಾಮ್‌ನಲ್ಲಿ ಶೇಖರಿಸಿಡಲಾಗಿದ್ದು, ವಿದ್ಯುತ್‌ ಉತ್ಪಾದನಾ ಬೇಡಿಕೆಗನುಗುಣವಾಗಿ ಬಳಸಿಕೊಳ್ಳಲಾಗುತ್ತಿದ್ದಾಗಿ ಅಧಿಕಾರಿಗಳು ತಿಳಿಸಿರುತ್ತಾರೆ.

ಸೂಪಾ ಹಿನ್ನೀರಿನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಒಳಹರಿವಿನ ಪ್ರಮಾಣ ಇಳಿದಿದ್ದರಿಂದ ಮೇನ್‌ಗೇಟ್‌ ಬಂದ್‌ ಮಾಡಿದ್ದು, ಹೊರಹರಿವು ನಿಲ್ಲಿಸಲಾಗಿದೆ. ಹಿನ್ನೀರಿನ ಪ್ರಮಾಣಕ್ಕನುಗುಣವಾಗಿ ಜನರೇಟ್‌ ಮಾಡಲಾಗುತ್ತಿದ್ದು, 4.300ಕ್ಯೂಸೆಕ್‌ ನೀರನ್ನು ಹೊರಹರಿವಿದ್ದು, 2.4 ಮಿಲಿಯನ್‌ ಯುನಿಟ್‌ ಪವರ್‌ ಜನರೇಟ್‌ ಮಾಡಲಾಗುತ್ತಿದೆ.
ಅಬ್ದುಲ್‌ ಮಜೀದ್‌
ಸ.ಕಾ.ನಿ. ಅಭಿಯಂತರ ಗಣೇಶಗುಡಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.