ಮತ್ತೆ ಮತ್ತೆ ಸೇವಂತಿ


Team Udayavani, Apr 22, 2018, 6:15 AM IST

book-page-2.jpg

ಇಂದು ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ ಸೇವಂತಿ ಪ್ರಸಂಗ, ಜತೆಗಿರುವನು ಚಂದಿರ ಮತ್ತು ಇತಿ ನಿನ್ನ ಅಮೃತಾ ನಾಟಕಗುತ್ಛದ ಪುಸ್ತಕ ಬಿಡುಗಡೆಗೊಳ್ಳಲಿದೆ.

ನಾವು ನೋಡಿದ ಅಥವಾ ಅಭಿನಯಿಸಿದ ನಾಟಕದ ಪುಸ್ತಕವನ್ನು ಬಹಳ ದಿನಗಳ ನಂತರ ಓದಲು ತೆಗೆದರೆ, ಎಷ್ಟೊಂದು ನೆನಪುಗಳು ತೆರೆದುಕೊಳ್ಳುತ್ತವೆ ! ಸೇವಂತಿ ಪ್ರಸಂಗ ಅಥವಾ ಹೂ ಹುಡುಗಿ ನಾಟಕವನ್ನು “ಚಂದನ’ ವಾಹಿನಿಯಲ್ಲಿ ನೋಡಿದಾಗ, ಈ ನಾಟಕವನ್ನು ರಂಗದ ಮೇಲೆ ನೇರವಾಗಿ ನೋಡಿದ್ದಿದ್ದರೆ ಎಂದು ಕಲ್ಪಿಸಿಕೊಳ್ಳುವುದರಲ್ಲಿಯೇ ರೋಮಾಂಚ®ವಿರುತ್ತಿತ್ತು. ಕೆಲವು ವರ್ಷಗಳ ನಂತರ ನಮ್ಮ ಊರಿನವರೇ ಆದ ಚಂದ್ರಶೇಖರ ಹೆಗ್ಗೊàಠಾರ ಅವರು ನಮ್ಮ “ಶಾಂತಲಾ ಕಲಾವಿದರು’ ಹವ್ಯಾಸಿ ತಂಡಕ್ಕೆ ಈ ನಾಟಕವನ್ನು ನಿರ್ದೇಶಿಸಲು ಆಯ್ಕೆ ಮಾಡಿಕೊಂಡಾಗ ಇದೇ ಎಪ್ರಿಲ್‌ನ ಧಗೆಯಿದ್ದರೂ ಮನಸ್ಸಿಗೆ ಎಲ್ಲಿಲ್ಲದ ಉತ್ಸಾಹ. ನನಗೆ ಸೇವಂತಿ ಪಾತ್ರ ಸಿಗುತ್ತದೆ ಎನ್ನುವ ಉಮೇದಿನಲ್ಲಿ ತಾಲೀಮಿಗೆ ಹೋಗುತ್ತಿದ್ದೆ. ಪಾತ್ರ ಹಂಚುವ ದಿನ ನಮ್ಮ ತಂಡದ ಮೈತ್ರಿಗೆ ಸೇವಂತಿ ಪಾತ್ರ ಸಿಕ್ಕಿತು! ಇರಲಿ, ಪಾತ್ರ ಸಿಗದಿದ್ದರೇನು ಫ್ಯಾಷನ್‌ ಶೋ ಇದೆಯಲ್ಲ ಎಂದು ಸಮಾಧಾನಪಟ್ಟುಕೊಂಡದ್ದಾಯಿತು.

ನಾಟಕದೊಳಗೆ ನಡೆಯುವ ಫ್ಯಾಷನ್‌ ಶೋ ದೃಶ್ಯಕ್ಕೆ, ನಿಜವಾದ ಫ್ಯಾಷನ್‌ ಶೋ ನಡೆಸುವವರಷ್ಟೇ ತಲೆಕೆಡಿಸಿಕೊಂಡು ವಿನ್ಯಾಸ ಮಾಡಿದ್ದು, ತಿಪ್ಪೇಕ್ರಾಸ್‌ನ ಕಸದ ತೊಟ್ಟಿಗೆ ಎಲ್ಲರೂ ಸೇರಿ ಬಣ್ಣ ಬಳಿದದ್ದು,  ಉಳಿದವರು ಅದ್ಭುತವಾದ ಹಾಡುಗಳಿಗೆ ನೃತ್ಯ ಮಾಡುವಾಗ, “ನಮಗೆ ಒಂದು ಸೀನ್‌ನಲ್ಲಾದರೂ ಇಂತಹದ್ದೊಂದು ಡ್ಯಾನ್ಸ್‌ ಇರಬೇಕಿತ್ತು’ ಎಂದು ಹೊಟ್ಟೆ ಉರಿದುಕೊಂಡದ್ದು… ಪ್ರದರ್ಶನದ ಹಿಂದಿನ ದಿನ ಇನ್ನೆರಡು ದಿನ ಮಳೆ ಬಾರದೆ ಇರಲಿ ಎಂದು ಮನಸ್ಸಿನಲ್ಲೇ ದೇವರಿಗೆ ಕೈ ಮುಗಿದದ್ದು, ಪ್ರದರ್ಶನ ಮುಗಿದಾಗ ಪ್ರೇಕ್ಷಕರ ಕರತಾಡನದಲ್ಲಿ ಕೊಚ್ಚಿಹೋಗಿದ್ದು… ಇವೆಲ್ಲ ಕೇವಲ ಸಣ್ಣ ವಯಸ್ಸಿನಲ್ಲಿ ನಾಟಕ ಮಾಡಿದ ಅನುಭವ ಮಾತ್ರವಲ್ಲ, ಬದಲಾಗಿ ಬದುಕಿನುದ್ದಕ್ಕೂ ಜೀವಂತವಾಗಿಡಬಲ್ಲ ನೆನಪಿನ ಗುತ್ಛಗಳು.

ಇದಾದ 15 ವರ್ಷಗಳ ಬಳಿಕ ಮೈಸೂರಿನಲ್ಲಿ “ಸೇವಂತಿಯ’ ಮತ್ತೂಂದು ಪ್ರದರ್ಶನ ನಡೆಯಿತು. ನಾಟಕ ಮುಗಿದ ಮೇಲೆ ನಮ್ಮೂರಿನವರೊಬ್ಬರು, “ನೀವು ಮಾಡಿದ ಪ್ರದರ್ಶನವೇ ಚೆನ್ನಾಗಿತ್ತು’ ಎಂದು ಹೇಳಿದಾಗ ಹೆಮ್ಮೆ ಪಡಬೇಕೋ ಅಥವಾ ಇಷ್ಟದ ನಾಟಕದ ಪ್ರದರ್ಶನ ಹೀಗಾಯಿತಲ್ಲಾ ಎಂದು ಬೇಸರ ಪಡಬೇಕೋ ತಿಳಿಯಲಿಲ್ಲ ನೀನಾಸಮ್‌ ತಿರುಗಾಟಕ್ಕೆ ಇದನ್ನು ನಿರ್ದೇಶಿಸಿದ ಅತುಲ್‌ ತಿವಾರಿಯವರು ಜಯಂತರ ಬರವಣಿಗೆಯ ಬಗ್ಗೆ ಹೀಗೆ ಹೇಳಿದ್ದರು:Jayant’s writings prick you with flowers and tickle with thorns.

ನಾಟಕದ ಕತೆ ಬರ್ನಾಡ್‌ ಷಾರದ್ದಾಗಿದ್ದರೂ ಪಾತ್ರಗಳ ಆತ್ಮ ಜಯಂತ ಕಾಯ್ಕಿಣಿಯವರದ್ದೇ. ಇಲ್ಲಿಯೂ ಮತ್ತೆ ಅವರನ್ನು ಕಾಡುವುದು ಮುಂಬೈನ ಮಳೆಗಾಲದಲ್ಲಿ ಬೂಟ್‌ಪಾಲಿಶ್‌ ಡಬ್ಬಿಗಳನ್ನು ಸುರಕ್ಷಿತವಾಗಿಟ್ಟು ಕೊಡೆ ಹೊಲಿಯುತ್ತ‌ ಪಾಠ ಕಲಿಯುವ ಬೀದಿ ಮಕ್ಕಳು, ಬೆಚ್ಚಗಿನ ಒಲೆಯಲ್ಲಿ “ಭಗ್‌’ ಎಂದು ಹೊತ್ತಿಕೊಳ್ಳುವ ನೀಲಿ ಹೂ.

ಇಲ್ಲಿಯವರೆಗೆ ಬೇರೆ ಬೇರೆ ತಂಡದವರು ಅಭಿನಯಿಸಿದ ಐದು ಪ್ರದರ್ಶನಗಳನ್ನು ನೋಡಿದ್ದೇನೆ. ಎಷ್ಟೊಂದು ಸೇವಂತಿಯರು, ಎಷ್ಟೊಂದು ತಿಪ್ಪೆ$ಕ್ರಾಸ್‌, ಟಕ್‌ಟಕ್‌ ಟಗಡಕ್‌ ರೇಸ್‌ಕೋರ್ಸ್‌ಗಳು.ಪುಸ್ತಕ ಮತ್ತೆ ಮತ್ತೆ ಮುದ್ರಣಗೊಳ್ಳುವಂತೆ ಹೊಸ ಹೊಸ ಸೇವಂತಿಯರು ರಂಗದ ಮೇಲೆ ಬರುತ್ತಿರಲಿ.

ಸಮುದ್ರ, ನದಿ ಅಥವಾ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿಯುವವರು ತಮ್ಮ ಬಟ್ಟೆ ಚಪ್ಪಲಿ ವಾಚು, ಕನ್ನಡಕ ಪೆನ್ನು , ಪಾಕೀಟು ಇತ್ಯಾದಿಗಳನ್ನು ತೀರದಲ್ಲೆ, ಆಚೆ ಈಚೆ ನೋಡಿ ಇಟ್ಟು ಹೋಗಿರುತ್ತಾರೆ. ವ್ಯಕ್ತಿಯ ಖಾಸಾ ಲಕ್ಷಣಗಳನ್ನೆಲ್ಲ ಆತ್ಮಗತ ಮಾಡಿಕೊಂಡಿರುವ ಆ ವಸ್ತುಗಳ ಪುಟ್ಟ ಗುತ್ಛ , ಒಂದು ನಿರುಪದ್ರವಿ ಸ್ವಾತಂತ್ರ್ಯದಲ್ಲಿರುತ್ತದೆ, ವ್ಯಕ್ತಿಯ ಹಾಜರಿಯನ್ನೂ ಸಾರುವಂತಿರುತ್ತದೆ. ಒಂದು ಅಲಿಖೀತ ವಿಶ್ವಾಸ ಅಲ್ಲಿರುತ್ತದೆ. ಬರವಣಿಗೆಯ ವ್ಯವಸಾಯವೂ ಇಂಥದೊಂದು ವ್ಯಾಪಕ ಅನಾಮಿಕ ಕೌಟುಂಬಿಕತೆಯ ಅಲಿಖೀತ ವಿಶ್ವಾಸದಲ್ಲೇ  ನಡೆಯು ವಂಥದು.
– ಜಯಂತ ಕಾಯ್ಕಿಣಿ

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.