ಹತ್ತೇ ದಿನದಲ್ಲಿ ಸೇತುವೆ ನಿರ್ಮಾಣ
Team Udayavani, Jan 15, 2018, 6:10 AM IST
ವಿಶ್ವಸಂಸ್ಥೆ: ಕಳೆದ ವರ್ಷದ ಜೂನ್ ತಿಂಗಳಲ್ಲಿ ನಡೆದ ಮೇಘ ಸ್ಫೋಟದಿಂದಾಗಿ ಈ ಗ್ರಾಮವನ್ನು ನಗರಕ್ಕೆ ಸಂಪರ್ಕಿಸಲು ಇದ್ದ ಏಕೈಕ ಸೇತುವೆ ಕೊಚ್ಚಿ ಹೋಗಿತ್ತು. ಅಂದಿನಿಂದ ಗ್ರಾಮಸ್ಥರ ಜೀವನವೇ ದುರ್ಬರವಾಗಿತ್ತು. ಆವಶ್ಯಕ ವಸ್ತುಗಳನ್ನು ತರಬೇಕಿದ್ದರೂ ಪ್ರಾಣದ ಹಂಗು ತೊರೆದು, ಕುತ್ತಿಗೆಯವರೆಗಿನ ನೀರಲ್ಲಿ ಮುಳುಗಿಕೊಂಡು ನದಿ ದಾಟಿ ಪಟ್ಟಣ ತಲುಪಬೇಕಿತ್ತು. ಇವರ ಈ ಸಮಸ್ಯೆಯನ್ನು ಇದೀಗ ಭಾರ,ತೀಯ ಶಾಂತಿದೂತರು ಪರಿಹರಿಸಿದ್ದಾರೆ.
ಹೌದು. ದಕ್ಷಿಣ ಸುಡಾನ್ನ ಅಕೋಕಾ ಗ್ರಾಮದಲ್ಲಿ ಕೊಚ್ಚಿಹೋಗಿದ್ದ ಸೇತುವೆಯನ್ನು ವಿಶ್ವಸಂಸ್ಥೆಯ ಮಿಷನ್ನಲ್ಲಿರುವ ಭಾರತೀಯ ಶಾಂತಿಸಂದೇಶವಾಹಕರು ಮರು ನಿರ್ಮಾಣ ಮಾಡಿದ್ದಾರೆ. ಅದೂ ಕೇವಲ 10 ದಿನಗಳಲ್ಲಿ. ಭಾರತೀಯರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರಕಾರದ ನೆರವಿನೊಂದಿಗೆ ಶಾಂತಿದೂತರು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಸೇತುವೆ ನಿರ್ಮಿಸಿದ್ದಾರೆ. ಹೀಗಾಗಿ ಆ ಪ್ರದೇಶಕ್ಕೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದು, ಭದ್ರತಾ ಗಸ್ತು, ಮಾನವೀಯ ನೆರವು, ಆಹಾರ ವಸ್ತುಗಳ ಪೂರೈಕೆ ಎಲ್ಲವೂ ಸುಲಭವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು