ಹಿಂದೂಗಳು ಒಗ್ಗಟ್ಟಾಗಲಿ


Team Udayavani, Sep 9, 2018, 6:00 AM IST

x-38.jpg

ಷಿಕಾಗೋ: “”ಸಿಂಹ ಏಕಾಂಗಿಯಾಗಿದ್ದರೆ ಕಾಡು ನಾಯಿಗಳು ದಾಳಿ ಮಾಡುತ್ತವೆ. ಇದನ್ನು ನಾವು ಮರೆಯಬಾರದು. ನಾವೆಲ್ಲರೂ ಒಗ್ಗಟ್ಟಾಗಿ, ಮನುಕುಲದ ಒಳಿತಿಗೆ ಏಕತೆಯಿಂದ ಶ್ರಮಿಸಬೇಕು” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಮಸ್ತ ಹಿಂದೂ ನಾಯಕರಿಗೆ ಕರೆ ಕೊಟ್ಟಿದ್ದಾರೆ. ಷಿಕಾಗೋದಲ್ಲಿ ಶುಕ್ರವಾರ ಆರಂಭಗೊಂಡ 3 ದಿನಗಳ ವಿಶ್ವ ಹಿಂದೂ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೂಗಳ ಐಕ್ಯತೆ ಹಾಗೂ ಸಾರ್ವಭೌಮತೆಗೆ ಕರೆ ನೀಡಿದರು. 1883 ರಲ್ಲಿ ಸ್ವಾಮಿ ವಿವೇಕಾನಂದ ಅವರು ಅಂತಾರಾಷ್ಟ್ರೀಯ ಧರ್ಮ ಸಂಸತ್‌ ಸಭೆಯಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ 125 ವರ್ಷ ಸಂದ ಹಿನ್ನೆಲೆಯಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ. 

ತಮ್ಮ ಭಾಷಣದಲ್ಲಿ ಹಿಂದೂಗಳ ಸರ್ವಧರ್ಮ ಸಹಿಷ್ಣುತೆಯ ಗುಣವನ್ನು ವಿಶೇಷವಾಗಿ ಉಲ್ಲೇಖೀಸಿದ ಭಾಗವತ್‌, “”ಹಿಂದೂಗಳು ಸಮಾಜದಲ್ಲಿ ತಾವೇ ಪ್ರಬಲರಾಗಿರ ಬೇಕೆಂದು ಎಂದಿಗೂ ಬಯಸುವುದಿಲ್ಲ. ಆದರೆ, ಹಿಂದೂಗಳಲ್ಲಿ ಏಕತೆಯ ಕೊರತೆಯಿದೆ. ಇಡೀ ಸಮುದಾಯವೇ ಒಂದು ಸಮಾಜದಂತೆ ನಡೆದುಕೊಂಡಲ್ಲಿ ಮಾತ್ರ ಹಿಂದೂಗಳು ಸಂಪದ್ಭರಿತವಾಗಿ ಜೀವಿಸಲು ಸಾಧ್ಯ” ಎಂದರು. 

ಇದೇ ವೇಳೆ, ಒಗ್ಗಟ್ಟಿನಿಂದ ಬದುಕಲು ಹಿಂದೂ ಧರ್ಮದ ನಾಯಕರಿಗೆ ಕಿವಿಮಾತು ಹೇಳಿದ ಅವರು, “”ಒಬ್ಬರ ಅಭಿಪ್ರಾಯವನ್ನು ಮತ್ತೂಬ್ಬರು ಗೌರವಿಸಬೇಕು. ಅಹಂಕಾರಗಳನ್ನು ಬಿಡಬೇಕು. ಹಿಂದೂಗಳಲ್ಲಿ ಅನೇಕ ಪ್ರಜ್ಞಾವಂತ ನಾಯಕರಿದ್ದಾರೆ. ಆದರೆ, ಅವರೆಲ್ಲರೂ ಒಗ್ಗೂಡುವುದೇ ಕಠಿಣ” ಎಂದು ವಿಷಾದಿಸಿದರು.

ರಾಜಕೀಯದಲ್ಲೂ ಏಕತೆಯಿರಲಿ: ರಾಜಕೀಯದಲ್ಲೂ ಧಾರ್ಮಿಕತೆಯ ತಳಹದಿ ಇರಬೇಕೆಂದು ಆಶಿಸಿದ ಭಾಗವತ್‌, “”ರಾಜಕೀಯವನ್ನು ಧ್ಯಾನಶಿಬಿರದಂತೆ ನಡೆಸಲು ಸಾಧ್ಯವಿಲ್ಲ. ಆದರೂ, ಮಹಾಭಾರತದ ಶ್ರೀಕೃಷ್ಣ ಹಾಗೂ ಯುಧಿಷ್ಠಿರರು ಎಂದಿಗೂ ತಮ್ಮ ನಡುವೆ ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇಂದಿನ ಯುಗದಲ್ಲಿ ಇಡೀ ವಿಶ್ವವನ್ನೇ ಒಂದು ಕುಟುಂಬವನ್ನಾಗಿ ರೂಪಿಸಬೇಕೆಂದರೆ ಜಗತ್ತಿನ ನಾನಾ ನಾಯಕರ ನಡುವೆ ಕೃಷ್ಣ-ಯುಧಿಷ್ಠಿರರಂಥ ಸಮನ್ವಯತೆ ಇರಬೇಕು” ಎಂದು ಅವರು ಅಭಿಪ್ರಾಯಪಟ್ಟರು.   

ಸಂಪ್ರದಾಯವಾದಿಯಲ್ಲ: ಇದೇ ವೇಳೆ, ತಾವೊಬ್ಬ ಆದರ್ಶವಾದಿ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡ ಭಾಗವತ್‌, ನಾನು ಆಧುನಿಕತೆಯ ವಿರೋಧಿಯಲ್ಲ. ನಾನೊಬ್ಬ ಭವಿಷ್ಯವಾದಿ. ತಮ್ಮಿ ವ್ಯಕ್ತಿತ್ವಕ್ಕೆ ತಾವು ನಂಬಿರುವ ಹಿಂದೂ ಧರ್ಮವೇ ಕಾರಣ. ಹಿಂದೂ ಧರ್ಮವು ಪುರಾತನವಾಗಿದ್ದರೂ ಅದರ ಒಳದೃಷ್ಟಿಯು ಆಧುನಿಕತೆಯನ್ನೂ ಮೀರಿಸಿದೆ ಎಂದರು.

ತಂತ್ರಜ್ಞಾನದಿಂದ ಎಲ್ಲರನ್ನೂ ಬೆಸೆಯೋಣ
“ವಿಶ್ವವನ್ನು ಹುರಿದು ಮುಕ್ಕುತ್ತಿರುವ ಅನೇಕ ಸಮಸ್ಯೆಗಳಿಗೆ ಹಿಂದೂ ಧರ್ಮದ ಆಳವಾದ ಚಿಂತನೆಗಳಲ್ಲಿ ಪರಿಹಾರವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ವಿಶ್ವ ಹಿಂದೂ ಸಮ್ಮೇಳನಕ್ಕಾಗಿ ವಿಶೇಷ ಸಂದೇಶವನ್ನು ರವಾನಿಸಿರುವ ಅವರು, “ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನುಕುಲವನ್ನು ತಂತ್ರಜ್ಞಾನದಿಂದಲೇ ಬೆಸೆಯಬೇಕಿದೆ. ಹೀಗೆ, ಎಲ್ಲರನ್ನೂ ಬೆಸೆಯುವ ಮೂಲಕ ಹಿಂದೂ ಧರ್ಮದ ಚಿಂತನೆಗಳನ್ನು ಸರ್ವರಿಗೂ ಮುಟ್ಟಿಸಬೇಕಿದೆ. ಇಂಥ ಪ್ರಯತ್ನಗಳ ಬಗ್ಗೆ ಸಮ್ಮೇಳನಕ್ಕೆ ಹಾಜರಾಗಿರುವ ಎಲ್ಲರೂ ಆಲೋಚಿಸಬೇಕು’ ಎಂದು ಕರೆ ನೀಡಿದ್ದಾರೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.