ಕ್ಯಾಲಿಫೋರ್ನಿಯ ಬಾರ್ ಶೂಟಿಂಗ್: ಪೊಲೀಸ್ ಸಹಿತ ಕನಿಷ್ಠ 12 ಬಲಿ
Team Udayavani, Nov 8, 2018, 5:32 PM IST
ವಾಷಿಂಗ್ಟನ್ : ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ಜನಪ್ರಿಯ ಬಾರ್ ಒಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಹುಚ್ಚಾಪಟ್ಟೆ ಗುಂಡು ಹಾರಾಟಕ್ಕೆ ಓರ್ವ ಪೊಲೀಸ್ ಅಧಿಕಾರಿಯ ಸಹಿತ ಕನಿಷ್ಠ 12 ಮಂದಿ ಬಲಿಯಾಗಿದ್ದಾರೆ ಎಂದು ಶೆರೀಫ್ ಜೆಫ್ ಡೀನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯದ ಬಾರ್ಡರ್ ಲೈನ್ ಬಾರ್ ಆ್ಯಂಡ್ ಗ್ರಿಲ್ ಬಾರ್ ನಲ್ಲಿ ನಿನ್ನೆ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.
ಬಾರ್ನಲ್ಲಿದ್ದವರು ಆನಂದದ ನಶೆಯಲ್ಲಿದ್ದ ವೇಳೆ ಅದೆಲ್ಲಿಂದಲೋ ಒಳ ನುಗ್ಗಿ ಬಂದ ಬಂದೂಕುಧಾರಿ ಇದ್ದಕ್ಕಿದ್ದಂತೆಯೇ, ಮನಬಂದಂತೆ, ಕುಳಿತಿದ್ದವರ ಮೇಲೆ ಗುಂಡೆಸೆಯತೊಡಗಿದ. ಪರಿಣಾಮವಾಗಿ ಓರ್ವ ಪೊಲೀಸ್ ಅಧಿಕಾರಿಯೂ ಸೇರಿ ಕನಿಷ್ಠ 12 ಮಂದಿ ಹತರಾದರು.
ಬಂದೂಕುಧಾರಿ ಕೂಡ ತಾನು ಈ ಮಾರಣ ಹೋಮ ನಡೆಸಿದ ಸ್ಥಳದಲ್ಲೇ ಸತ್ತು ಬಿದ್ದಿರುವುದು ಅನಂತರ ಕಂಡು ಬಂದಿದೆ ಎಂದು ಜೆಫ್ ಡೀನ್ ಹೇಳಿದ್ದಾರೆ.
ಕ್ಯಾಲಿಫೋರ್ನಿಯದ ಥೌಝಂಡ್ ಓಕ್ಸ್ ನಲ್ಲಿರುವ ಈ ಬಾರ್ ನಲ್ಲಿ ನಡೆದಿರುವ ಶೂಟಿಂಗ್ ನಲ್ಲಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಗುಂಡು ಹಾರಾಟದ ಸುದ್ದಿ ತಿಳಿದೊಡನೆಯೇ ಪೊಲೀಸರು ರಾತ್ರಿ 11.30ರ ಸುಮಾರಿಗೆ ಬಾರ್ ಗೆ ಧಾವಿಸಿ ಬಂದಿದ್ದಾರೆ.
ಗುಂಡು ಹಾರಾಟದ ಘಟನೆ ನಡೆದ ವೇಳೆ ಬಾರ್ನಲ್ಲಿ ಕಾಲೇಜ್ ಕಂಟ್ರಿ ಮ್ಯೂಸಿಕಲ್ ನೈಟ್ ನಡೆಯುತ್ತಿತ್ತು ಮತ್ತು ಕನಿಷ್ಠ 200 ಮಂದಿ ಇದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಬಂದೂಕುಧಾರಿಯು ಬಾರ್ನಲ್ಲಿದ್ದವರ ಮೇಲೆ ಕನಿಷ್ಠ 30 ಗುಂಡುಗಳನ್ನು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
“ಒಬ್ಬ ಸಭ್ಯ ಮನುಷ್ಯ ಬಾರ್ ನ ಎದುರು ಬಾಗಿಲಿನಿಂದಲೇ ಒಳಗೆ ಬಂದಿದ್ದಾನೆ; ಬಳಿಕ ಕೌಂಟರ್ ಹಿಂದಿದ್ದ ಹುಡುಗಿಯ ಮೇಲೆ ಗುಂಡೆಸೆದಿದ್ದಾನೆ’ ಎಂದು ಈ ಶೂಟಿಂಗ್ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಹೋಲ್ಡನ್ ಹ್ಯಾರಾ ಎಂಬವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ