ಕ್ಯಾಲಿಫೋರ್ನಿಯ ಬಾರ್‌ ಶೂಟಿಂಗ್‌: ಪೊಲೀಸ್‌ ಸಹಿತ ಕನಿಷ್ಠ 12 ಬಲಿ


Team Udayavani, Nov 8, 2018, 5:32 PM IST

california-bar-shooting-700.jpg

ವಾಷಿಂಗ್ಟನ್‌ : ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ಜನಪ್ರಿಯ ಬಾರ್‌ ಒಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಹುಚ್ಚಾಪಟ್ಟೆ  ಗುಂಡು ಹಾರಾಟಕ್ಕೆ ಓರ್ವ ಪೊಲೀಸ್‌ ಅಧಿಕಾರಿಯ ಸಹಿತ ಕನಿಷ್ಠ 12 ಮಂದಿ ಬಲಿಯಾಗಿದ್ದಾರೆ ಎಂದು ಶೆರೀಫ್ ಜೆಫ್ ಡೀನ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕ್ಯಾಲಿಫೋರ್ನಿಯದ ಬಾರ್ಡರ್‌ ಲೈನ್‌ ಬಾರ್‌ ಆ್ಯಂಡ್‌ ಗ್ರಿಲ್‌ ಬಾರ್‌ ನಲ್ಲಿ ನಿನ್ನೆ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. 

ಬಾರ್‌ನಲ್ಲಿದ್ದವರು ಆನಂದದ ನಶೆಯಲ್ಲಿದ್ದ ವೇಳೆ ಅದೆಲ್ಲಿಂದಲೋ ಒಳ ನುಗ್ಗಿ ಬಂದ ಬಂದೂಕುಧಾರಿ ಇದ್ದಕ್ಕಿದ್ದಂತೆಯೇ, ಮನಬಂದಂತೆ, ಕುಳಿತಿದ್ದವರ ಮೇಲೆ ಗುಂಡೆಸೆಯತೊಡಗಿದ. ಪರಿಣಾಮವಾಗಿ ಓರ್ವ ಪೊಲೀಸ್‌ ಅಧಿಕಾರಿಯೂ ಸೇರಿ ಕನಿಷ್ಠ 12 ಮಂದಿ ಹತರಾದರು. 

ಬಂದೂಕುಧಾರಿ ಕೂಡ ತಾನು ಈ ಮಾರಣ ಹೋಮ ನಡೆಸಿದ ಸ್ಥಳದಲ್ಲೇ ಸತ್ತು ಬಿದ್ದಿರುವುದು ಅನಂತರ ಕಂಡು ಬಂದಿದೆ ಎಂದು ಜೆಫ್ ಡೀನ್‌ ಹೇಳಿದ್ದಾರೆ. 

ಕ್ಯಾಲಿಫೋರ್ನಿಯದ ಥೌಝಂಡ್‌ ಓಕ್ಸ್‌ ನಲ್ಲಿರುವ ಈ ಬಾರ್‌ ನಲ್ಲಿ ನಡೆದಿರುವ ಶೂಟಿಂಗ್‌ ನಲ್ಲಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. 

ಗುಂಡು ಹಾರಾಟದ ಸುದ್ದಿ ತಿಳಿದೊಡನೆಯೇ ಪೊಲೀಸರು ರಾತ್ರಿ 11.30ರ ಸುಮಾರಿಗೆ ಬಾರ್‌ ಗೆ ಧಾವಿಸಿ ಬಂದಿದ್ದಾರೆ.

ಗುಂಡು ಹಾರಾಟದ ಘಟನೆ ನಡೆದ ವೇಳೆ ಬಾರ್‌ನಲ್ಲಿ ಕಾಲೇಜ್‌ ಕಂಟ್ರಿ ಮ್ಯೂಸಿಕಲ್‌ ನೈಟ್‌ ನಡೆಯುತ್ತಿತ್ತು ಮತ್ತು ಕನಿಷ್ಠ 200 ಮಂದಿ ಇದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಬಂದೂಕುಧಾರಿಯು ಬಾರ್‌ನಲ್ಲಿದ್ದವರ ಮೇಲೆ ಕನಿಷ್ಠ 30 ಗುಂಡುಗಳನ್ನು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.  

“ಒಬ್ಬ ಸಭ್ಯ ಮನುಷ್ಯ ಬಾರ್‌ ನ ಎದುರು ಬಾಗಿಲಿನಿಂದಲೇ ಒಳಗೆ ಬಂದಿದ್ದಾನೆ; ಬಳಿಕ ಕೌಂಟರ್‌ ಹಿಂದಿದ್ದ ಹುಡುಗಿಯ ಮೇಲೆ ಗುಂಡೆಸೆದಿದ್ದಾನೆ’ ಎಂದು ಈ ಶೂಟಿಂಗ್‌ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಹೋಲ್ಡನ್‌ ಹ್ಯಾರಾ ಎಂಬವರು ಹೇಳಿದ್ದಾರೆ. 

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.