ಕಾಶ್ಮೀರ ಪ್ರಶ್ನೆ ಇತ್ಯರ್ಥಕ್ಕೆ ವಾಜಪೇಯಿ ನಿಕಟವಾಗಿದ್ದರು: ಇಮ್ರಾನ್
Team Udayavani, Dec 4, 2018, 12:34 PM IST
ಇಸ್ಲಾಮಾಬಾದ್ : ‘2004ರ ಸಂಸತ್ ಚುನಾವಣೆಗಳನ್ನು ಬಿಜೆಪಿ ಸೋಲದಿರುತ್ತಿದ್ದರೆ ಕಾಶ್ಮೀರ ಪ್ರಶ್ನೆ ಇತ್ಯರ್ಥವಾಗುತ್ತಿತ್ತು ಎಂದು ಭಾರತದ ಮಾಜಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನನ್ನಲ್ಲಿ ಹೇಳಿದ್ದರು; ಕಾಶ್ಮೀರ ಪ್ರಶ್ನೆ ಇತ್ಯರ್ಥಕ್ಕೆ ವಾಜಪೇಯಿ ನಿಕಟವಾಗಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ಥಾನ ಪ್ರಾಮಾಣಿಕತೆ ತೋರಿದಲ್ಲಿ ಕಾಶ್ಮೀರ ಸೇರಿದಂತೆ ಯಾವುದೇ ಬಾಕಿ ಉಳಿದಿರುವ ವಿಷಯವನ್ನು ಮಾತುಕತೆಯ ಮೂಲಕವೇ ಬಗೆ ಹರಿಸಲು ಸಾಧ್ಯವಿದೆ ಎಂದು ಇಮ್ರಾನ್ ಪುನರುಚ್ಚರಿಸಿದರು.
ಟಿವಿ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್, “ಕಾಶ್ಮೀರ ಸಮಸ್ಯೆಗೆ ಯುದ್ಧ ಪರಿಹಾರವೇ ಅಲ್ಲ; ಅದನ್ನು ಮಾತುಕತೆಯ ಮೂಲಕವೇ ಇತ್ಯರ್ಥ ಪಡಿಸಲು ಸಾಧ್ಯವಿದೆ’ ಎಂದು ಹೇಳಿದರು.
ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ನಿಮ್ಮ ಬಳಿ ಯಾವ ಸೂತ್ರ ಇದೆ ಎಂಬ ಪ್ರಶ್ನೆಗೆ ಇಮ್ರಾನ್, “ಎರಡು ಅಥವಾ ಮೂರು ಪರಿಹಾರ ಸೂತ್ರಗಳಿವೆ ಮತ್ತು ಇವು ಚರ್ಚೆಯಲ್ಲಿವೆ’ ಎಂದು ಹೇಳಿದರು. ಆದರೆ ಅವುಗಳ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ, ವಿವರ ನೀಡಲು ನಿರಾಕರಿಸಿದರು. “ಈಗಲೇ ಆ ಪರಿಹಾರ ಸೂತ್ರಗಳ ಬಗ್ಗೆ ಮಾತನಾಡುವುದು ಬಹಳ ಬೇಗ ಎನ್ನಿಸೀತು’ ಎಂದು ಸಮಜಾಯಿಷಿಕೆ ನೀಡಿದೆ.
“ವಾಜಪೇಯಿ ಅವರು ಅಂದು ನನ್ನಲ್ಲಿ ಹೇಳಿದ್ದ ಮಾತುಗಳನ್ನು ಆಧರಿಸಿ ಹೇಳುವುದಾದರೆ ಕಾಶ್ಮೀರ ಸಮಸ್ಯೆ ಇತ್ಯರ್ಥ ಪಡಿಸಲು ಭಾರತ – ಪಾಕಿಸ್ಥಾನ ಅಂದಿನ ದಿನಗಳಲ್ಲಿ ಮುಂದಾಗಿದ್ದವು ಎಂದು ಕಾಣುತ್ತದೆ’ ಎಂದು ಇಮ್ರಾನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?