ತ್ಯಾಜ್ಯ ತುಂಬಿದ ತಿಮ್ಮಣ್ಣ ಬಾವಿ


Team Udayavani, Oct 10, 2018, 4:13 PM IST

yad-1.jpg

ಗುರುಮಠಕಲ್‌: ನಗರದ ಮುಖ್ಯ ರಸ್ತೆಯಲ್ಲಿ ಎರಡು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ತಿಮ್ಮಣ್ಣ ಬಾವಿಯಲ್ಲಿ ಜಲಮೂಲ ಇದೆ. ಆದರೆ ತ್ಯಾಜ್ಯ ಬಾವಿಯಲ್ಲಿ ತುಂಬಿ ಚರಂಡಿಯಾಗಿ ಪರಿರ್ವನೆಗೊಂಡಿದೆ.

ಈ ಐತಿಹಾಸ ತಿಮ್ಮಣ್ಣ ಬಾವಿಗೆ ನಿರ್ವಹಣೆ ಭಾಗ್ಯವಿಲ್ಲ. ನಗರದ ಬಹುತೇಕರು ಈ ಬಾವಿ ಇರುವ ರಸ್ತೆಯಿಂದಲೇ ಸಂಚಾರಿಸುತ್ತಾರೆ. ಆದರೆ ಬಾವಿ ದುಸ್ಥಿತಿ ಕುರಿತು ಚಿಂತನೆ ನಡೆಸುತ್ತಿಲ್ಲ. ಈ ಬಾವಿಯನ್ನು ತಿಮ್ಮಣ್ಣ ಎನ್ನುವವರು ನಿರ್ಮಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತವೆ. ಹೀಗಾಗಿ ಇದಕ್ಕೆ ತಿಮ್ಮಣ್ಣನ ಬಾವಿ ಎಂದೇ ಕರೆಯಲಾಗುತ್ತಿದೆ. ಬಸ್‌ ನಿಲ್ದಾಣಕ್ಕೆ ಸಮೀಪದಲ್ಲಿರುವ ತಿಮ್ಮಣ್ಣ ಬಾವಿ ಜನಬಿಡು ಪ್ರದೇಶದಲ್ಲಿದ್ದು, ಉತ್ತಮ ನೀರಿನ ಸೆಲೆ ಹೊಂದಿದೆ. ಮಳೆಗಾಲದಲ್ಲಿ ಬಾವಿಯಲ್ಲಿನ ನೀರು ನೆಲ ಮಟ್ಟಕ್ಕೆ ತುಂಬಿ ಹೊರಗಡೆ ಹರಿಯುತ್ತದೆ. ಆದರೆ ಸಾರ್ವಜನಿಕರು ಕಸಕಡ್ಡಿ ಹಾಕುವುದರಿಂದ ಬಾವಿ ಕುಲಿಷಿತಗೊಂಡಿದೆ.

ಪುರಸಭೆಯವರು ಒಂದೆರಡು ಬಾರಿ ಬಾವಿ ಸ್ವತ್ಛಗೊಳಿಸಿದ್ದರು. ಸಾರ್ವಜನಿಕರು ಕಸ ಹಾಕುವುದರಿಂದ ಮತ್ತೆ ಬಾವಿ ಕುಲುಷಿತಗೊಂಡಿದೆ. ಈ ಮೊದಲು ಸುತ್ತಲಿನ ಜನ ಈ ಬಾವಿ ನೀರನ್ನು ಕುಡಿಯಲು ಬಳಸುತ್ತಿದ್ದರು. ಯಾವಾಗ ವ್ಯಾಪಾರಿಗಳು ಕಸ ಹಾಕಲು ಆರಂಭಿದರೋ ಅಂದಿನಿಂದ ಬಾವಿ ನೀರು ಕಲುಷಿತಗೊಳ್ಳಲಾರಂಭಿಸಿತು.
 
ನಗರದ ನೀರಿನ ಸಮಸ್ಯೆ ನೀಗಿಸಲು ಸುಮರು 45 ಕಿ.ಮೀಟರ್‌ ದೂರದ ಭೀಮಾ ನದಿಯಿಂದ ನೀರನ್ನು ತರಲಾಗುತ್ತದೆ. ಆದರೆ ನಗರದಲ್ಲೇ ಇರುವ ಜಲಸಂಪನ್ಮೂಲ ರಕ್ಷಸಿಕೊಳ್ಳುವಲ್ಲಿ ಪುರಸಭೆ ಏಕೆ ಮುಂದಾಗಿಲ್ಲ ಎನ್ನುವುದು ಜನರ ಪ್ರಶ್ನೆ.

14 ಬಾವಿಗಳ ನಿರ್ವಹಣೆ ಕುರಿತು ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಪುರಸಭೆ ಯಿಂದ ಕಾರ್ಯ ಕೈಗೊಳ್ಳುವಂತೆ ಆದೇಶಿರುವುದರಿಂದ ಶೀಘ್ರವೇ ಈ ಕುರಿತು ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.

ಈ ಬಾವಿ ಯಾವಗ ನಿರ್ಮಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ನಾಯಕನ ಬಾವಿಯನ್ನು ನಿರ್ಮಿಸಿದ ಒಂದೆರಡು ವರ್ಷಗಳ ನಂತರ ಈ ಬಾವಿಯನ್ನು ನಿರ್ಮಿಸಿದ್ದಾರೆ ಎಂದು ಹಿರಿಯರು ಹೇಳುತ್ತಿದ್ದಾರೆ.
 ಬಸವಂತ ರಾಜ್‌ ನೀರೆಟಿ, ನಿವೃತ್ತ ಶಿಕ್ಷಕ

ಬಾವಿಯಲ್ಲಿ ಸಮೃದ್ಧವಾದ ನೀರಿನ ಸೆಲೆಯಿದೆ. ಈಗ ಬಾವಿಯಲ್ಲಿ ನಿರಿದ್ದರೂ, ಕಸಬಿದ್ದು ಚರಂಡಿಯಂತಾಗಿರುವುದು
ದುರದೃಷ್ಟಕರ. 
 ಸುರೇಶ ಬುದ್ದಿ, ಸ್ಥಳೀಯ ನಿವಾಸಿ

ಪುರಸಭೆಯವರು ಒಂದೆರಡು ಸಲ ಬಾವಿ ಸ್ವತ್ಛಗೊಳಿಸಿದ್ದರು. ಆದರೆ ಸಾರ್ವಜನಿಕರು ಕಸ ಹಾಕಿದ್ದರಿಂದ ಮತ್ತೆ ಕುಲುಷಿತಗೊಂಡಿದೆ. ಈ ಬಾವಿಗೆ ತಡೆಗೊಡೆ ನಿರ್ಮಿಸಬೇಕು. ಪುರಸಭೆ ಸಭೆಯಲ್ಲಿ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು.
 ಪಾಪಿರೆಡ್ಡಿ, ಪುರಸಭೆ ಸದಸ

„ಚನ್ನಕೇಶವುಲು ಗೌಡ

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.