ಕಂಚಗಾರ ಅಪ್ಪಟ ಗ್ರಾಮೀಣ ಪ್ರತಿಭೆ
Team Udayavani, Dec 3, 2018, 3:11 PM IST
ನಾರಾಯಣಪುರ: ಎಲೆಮರೆ ಕಾಯಿಯಂತಿರುವ ಕಾಷ್ಠಶಿಲ್ಪಿ ಬಸಣ್ಣ ಕಂಚಗಾರ ಒರ್ವ ಅಪ್ಪಟ ಗ್ರಾಮೀಣ ಪ್ರತಿಭೆ, ತಮ್ಮ ಕಾಷ್ಠಶಿಲ್ಪ ಕಲೆಗಳ ಮೂಲಕವೇ ಹೆಸರಾಗಿರುವ ಇವರ ನಿಸ್ವಾರ್ಥ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹುಣಸಗಿ ಹಿರಿಮೆ ಹೆಚ್ಚಿದಂತಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಹಡಿಕ್ಯಾಳ ಹೇಳಿದರು.
ಕೊಡೇಕಲ್ ಪಟ್ಟಣದಲ್ಲಿ ಹುಣಸಗಿ ತಾಲೂಕು ಕಸಾಪ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಠಶಿಲ್ಪಿ ಬಸಣ್ಣ ಕಂಚಗಾರ ಅವರಿಗೆ ನಡೆದ ಅಭಿನಂದನೆ, ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಗ್ರಾಮೀಣ ಭಾಗದಲ್ಲಿ ಅನೇಕ ಕಲಾವಿದರು ಎಲೆಮರೆಯ ಕಾಯಿಯಂತೆ ತಮ್ಮ ಕಾಯಕ ಮಾಡುತ್ತಿದ್ದಾರೆ. ಅಂತಹ ಕಲಾವಿದರ ಪೈಕಿ ಒಬ್ಬರಾಗಿರುವ ಬಸಣ್ಣ ಕಂಚಗಾರ ಅವರನ್ನು ಗುರುತಿಸುವ ಮೂಲಕ ಸರ್ಕಾರ ಒಳ್ಳೆಯ ಹೆಜ್ಜೆ ಇಟ್ಟಿದೆ. ಇದು ಉಳಿದ ಕಲಾವಿದರಿಗೆ ಸ್ಫೂರ್ತಿ ನೀಡಿದೆ.
ಕಂಚಗಾರ ಅವರು ಎಂದು ಪ್ರಶಸ್ತಿಗಾಗಿ ಹಂಬಲಿಸಿಲ್ಲ. ಬದಲಾಗಿ ಪ್ರಶಸ್ತಿಗಳೆ ಇವರನ್ನು ಹುಡುಕಿಕೊಂಡು ಬಂದಿವೆ ಎಂದು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸಣ್ಣ ಕಂಚಗಾರ ಮಾತನಾಡಿ, ನನ್ನ ಕಲೆ ಮೆಚ್ಚಿ ನನ್ನನ್ನು ಮೇಲೆತ್ತಿರುವ ನಮ್ಮ ಸಗರನಾಡಿನ ಎಲ್ಲರ ಸಹಕಾರ ಫಲದಿಂದ ಇಂದು ನನಗೆ ಪ್ರಶಸ್ತಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ವೀರೇಶ ಹಳ್ಳೂರ, ನಾಗನಗೌಡ ಪಾಟೀಲ, ಆರ್.ಎಲ್. ಸುಣಗಾರ, ಬಸಣ್ಣ ಗೊಡ್ರಿ, ಶಿವಕುಮಾರ ಬಂಡೋಳಿ, ಶಿವಾನಂದ ತೋಟದ, ಕನಕಪ್ಪ ವಾಗಣಗೇರಿ, ಮಶಾಕ ಯಾಳಗಿ, ಬಸವರಾಜ ಅಂಗಡಿ, ರಮೇಶ ಪತ್ತಾರ, ಕಾಳಪ್ಪ ಕಂಚಗಾರ, ಬಸವರಾಜ ಅಂಗಡಿ, ಸಂಗನಗೌಡ ಧನರೆಡ್ಡಿ, ಬಸವಂತಭಟ್ ಜೋಶಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ