Release ಆಯ್ತು ಕಳ್ಬೆಟ್ಟದ ದರೋಡೆಕೋರರು ಚಿತ್ರದ ಟ್ರೈಲರ್
Team Udayavani, Jun 26, 2018, 11:42 AM IST
ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರ `ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಟ್ರೈಲರ್ ಟ್ರೈಲರ್ ಬಿಡುಗಡೆಗೊಳಿಸಲಾಯಿತು. `ಭ್ಯಾಗರಾಜ್’ ನ ನಂತರ ಇದು ಇವರ ನಿರ್ದೇಶನದ ಎರಡನೇ ಚಿತ್ರವಾಗಿದೆ ಅನುಷ್ ಶೆಟ್ಟಿ ಬರೆದಿರುವ ಕಳ್ಬೆಟ್ಟದ ದರೋಡೆಕೋರರು ಕಾದಂಬರಿಯನ್ನು ಆದರಿಸಿ ಸಿನಿಮಾ ಮಾಡಲು ಮುಂದಾದ ದೀಪಕ್ ಚಿತ್ರೀಕರಣ ಪೂರ್ಣಗೊಂಡಿದ್ದು ಜೂನ್ 25 ರಂದು ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲಾಯಿತು.
‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ಈ ಚಿತ್ರದ ನಾಯಕ ನಟರಾಜ್ ಗೆ `ರಾಧಾರಮಣ’ ಟಿವಿ ಧಾರವಾಹಿಯ ಶ್ವೇತಾ ಪ್ರಸಾದ್ ಜೋಡಿಯಾಗಿದ್ದಾರೆ.
ಮೊದಲಬಾರಿಗೆ ಬ್ರಿಗೇಡ್ ಫಿಲಂ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರಕ್ಕೆ ಅನೂಪ್ ಸೀಲಿನ್ ಸಂಗೀತ ನೀಡಿದ್ದು ಚಿತ್ರಕ್ಕೆ ಕಿರಣ್ ಹಾಂಪುರ್, ಲವಿತ್ , ಪ್ರದೀಪ್ ಛಾಯಾಗ್ರಹಣ ಮಾಡಿದ್ದಾರೆ. ಅಮರಾವತಿ ಖ್ಯಾತಿಯ ಹೇಮಂತ್ ಸುಶಿಲ್, ಸುಂದರ್ ವೀಣಾ ಮತ್ತು ರಮಣ್ಣ ಮೊದಲಾದ ನಟರು ಈ ಚಿತ್ರದಲ್ಲಿದ್ದಾರೆ…