BJP; ಬರೀ 2029 ಮಾತ್ರವಲ್ಲ, 2047ರ ಎಲೆಕ್ಷನ್ ಕೂಡ ನನ್ನ ಗುರಿ: ಪಿಎಂ ಮೋದಿ
Team Udayavani, Mar 17, 2024, 6:30 AM IST
ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿರುವಂತೆಯೇ, 2047ರ ಚುನಾವಣೆ ಗೆಲುವಿನ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಬರೀ 2029ರ ಸಾರ್ವತ್ರಿಕ ಚುನಾವಣೆ ಬಗ್ಗೆ ನಾನು ಚಿತ್ತ ನೆಟ್ಟಿಲ್ಲ. ಬದಲಾಗಿ 2047ರ ಗೆಲುವಿನ ಮೇಲೆಯೂ ಕಣ್ಣಿಟ್ಟಿದ್ದೇನೆ’ ಎಂದಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಶನಿವಾರ ಪ್ರಧಾನಿ ಭಾಗಿಯಾಗಿದ್ದರು.
ಈ ವೇಳೆ “400 ಪಾರ್’ (400ಕ್ಕೂ ಹೆಚ್ಚು) ಎಂಬ ಘೋಷಣೆಗಳ ಮೂಲಕ ಜನರು ಪ್ರಧಾನಿಯನ್ನು ಸ್ವಾಗತಿಸಿ ದ ರು. ಬಳಿಕ ಮಾತನಾಡಿದ ಅವ ರು, ಜನರ ಸೇವೆಯೇ ನನ್ನ ಗಮ್ಯ. ನಾನು ಹೆಡ್ಲೈನ್ನಲ್ಲಿ ಸುದ್ದಿಯಾಗುವು ದಕ್ಕಾಗಿ ಕೆಲಸ ಮಾಡಿಲ್ಲ. ಡೆಡ್ಲೈನ್ಗಳು ಮೀರ ದಂತೆ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರಿಗಳನ್ನು ಸುಮ್ಮನೆ ಬಿಡುವುದಿಲ್ಲ
ಹೈದರಾಬಾದ್: “ಭ್ರಷ್ಟಾಚಾರ ಮಾಡಿದ ಯಾವೊಬ್ಬ ವ್ಯಕ್ತಿಯನ್ನೂ ಸುಮ್ಮನೆ ಬಿಡುವುದಿಲ್ಲ’. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತೆಲಂಗಾಣ ಜನತೆಗೆ ವಾಗ್ಧಾನ ನೀಡಿದ್ದಾರೆ. ದಿಲ್ಲಿಯ ಮದ್ಯ ಹಗರಣದಲ್ಲಿ ಬಿಆರ್ಎಸ್ ನಾಯಕಿ ಕೆ.ಕವಿತಾ ಬಂಧನ ಬೆನ್ನಲ್ಲೇ ಮೋದಿ ಈ ಹೇಳಿಕೆ ನೀಡಿದ್ದಾರೆ.
ನಾಗರ್ಕರ್ನೂಲ್ನಲ್ಲಿ ಶನಿವಾರ ನಡೆದ ಬಿಜೆಪಿ ರ್ಯಾಲಿಯನ್ನು ಉದ್ದೇ ಶಿಸಿ ಪ್ರಧಾನಿ ಮಾತನಾಡಿದ್ದಾರೆ. ಈ ವೇಳೆ ಬಿಆರ್ಎಸ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿ, ಬಿಆರ್ಎಸ್ ರಾಜ್ಯದಿಂದ ಹೊರ ಹೋಗಿ ಕಟ್ಟ ರ್ ಭ್ರಷ್ಟ ಪಕ್ಷಗಳೊಂದಿಗೆ ಕೈ ಜೋಡಿಸಿದೆ. ತೆಲಂಗಾಣದ ಅಭಿವೃದ್ಧಿಯ ಕನಸನ್ನು ಬಿಆರ್ಎಸ್ ಮತ್ತು ಕಾಂಗ್ರೆಸ್ ಸೇರಿ ನಿರ್ನಾಮ ಮಾಡಿಬಿಟ್ಟಿವೆ. ಈ ಎರಡೂ ಪಕ್ಷಗಳು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ಬಹುದೊಡ್ಡ ಪಾಲುದಾರರಾಗಿವೆ ಎಂದು ಆರೋಪಿಸಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆಗೆ ಜನರ ಬೆಂಬಲ ಕೋರಿರುವ ಪ್ರಧಾನಿ ” ಮೋದಿಯನ್ನು 3ನೇ ಬಾರಿ ಅಧಿಕಾರಕ್ಕೆ ತರಲು ತೆಲಂಗಾಣ ಜನತೆ ನಿರ್ಧರಿಸಿರುವುದು ನನಗೆ ಕಾಣುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ