Lok Sabha Election: ಮಹಾರಾಷ್ಟ್ರದಲ್ಲಿ ಠಾಕ್ರೆ vs ಠಾಕ್ರೆ? ರಾಜ್ ಠಾಕ್ರೆಗೆ ಬಿಜೆಪಿ ಗಾಳ
Team Udayavani, Mar 20, 2024, 6:30 AM IST
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿನ ಎನ್ಡಿಎ ಘಟಕಕ್ಕೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ ಸೆಳೆಯುವ ಪ್ರಯತ್ನ ನಡೆದಿದೆ. ಅದಕ್ಕೆ ಪೂರಕವಾಗಿ ಅವರು ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ.
ಒಂದು ವೇಳೆ ಮೈತ್ರಿ ನಡೆದರೆ ಮುಂಬಯಿಯಿಂದ ಸ್ಪರ್ಧಿಸಲು ಎಂಎನ್ಎಸ್ಗೆ 1 ಸ್ಥಾನ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಮುಂಬಯಿಯಲ್ಲಿ ಪ್ರತಿಕ್ರಿಯೆ ನೀಡಿದ ಬಾಲನಂದಗಾಂವ್ಕರ್ ಮಾತುಕತೆ ತೃಪ್ತಿದಾ ಯಕವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ಜತೆಗಿನ ಭೇಟಿಗೆ ಮುನ್ನ ಬಿಜೆಪಿ ನಾಯಕ ವಿನೋದ್ ತಾಬ್ಡೆ ಜತೆಗೂ ರಾಜ್ ಮಾತುಕತೆ ನಡೆಸಿದ್ದಾರೆ.
ಉದ್ಧವ್ ಕಿಡಿ: ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಬಿಜೆಪಿ ಠಾಕ್ರೆಯನ್ನು ಸೆಳೆಯುತ್ತಿದೆ. ಮಹಾರಾಷ್ಟ್ರದಲ್ಲಿ ಮೋದಿ ಹೆಸರಿನಲ್ಲಿ ಮತಗಳಿಕೆ ಸಾಧ್ಯ ವಿಲ್ಲ ಎಂಬುದು ಬಿಜೆಪಿಗೆ ಗೊತ್ತಾಗಿದೆ. ಹೀಗಾಗಿಯೇ ಠಾಕ್ರೆಯನ್ನು ಸೆಳೆಯುತ್ತಿದೆ ಎಂದು ಉದ್ಧವ್ ವ್ಯಂಗ್ಯವಾಡಿದ್ದಾರೆ.