ಕನಿಷ್ಠ ಮೊತ್ತಕ್ಕೆ ದೊರೆಯಲಿರುವ ಸ್ಮಾರ್ಟ್ಫೋನ್ಗಳು
Team Udayavani, Oct 8, 2019, 9:30 PM IST
ಮೊಬೈಲ್ ಮಾರುಕಟ್ಟೆಗೆ ದಿನಕ್ಕೊಂದು ಹೊಸ ಸ್ಮಾರ್ಟ್ ಫೋನ್ಗಳು ಬರುತ್ತಲೇ ಇರುತ್ತವೆ . ಆದರೆ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಮೊಬೈಲ್ಗಳು ಸದ್ದು ಮಾಡುತ್ತಿದ್ದು, ಮಾರುಕಟ್ಟೆಗೆ ಲಗ್ಗೆ ಇಟ್ಟ ಕನಿಷ್ಠ ಮೊತ್ತದ ಸ್ಮಾರ್ಟ್ಫೋನ್ಗಳ ಲಕ್ಷಣಗಳು ಹಾಗೂ ಬೆಲೆಯ ಮಾಹಿತಿ ಇಲ್ಲಿದೆ.
ಶಿಯೋಮಿ ರೆಡ್ಮಿ 8 ಎ
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರ ನೆಚ್ಚಿನ ಸ್ಮಾರ್ಟ್ಫೋನ್ ಎಂದು ಗುರುತಿಸಿಕೊಂಡಿರುವ ಶಿಯೋಮಿ ರೆಡ್ಮಿ 7ಎ ಫೋನಿನ ಉತ್ತರಾಧಿಕಾರಿಯಾಗಿ ‘ರೆಡ್ಮಿ 8 ಎ’ ಸ್ಮಾರ್ಟ್ಫೋನ್ ದೇಶದಲ್ಲಿ ಬಿಡುಗಡೆಯಾಗಿದ್ದು, ವಾಟರ್ಡ್ರಾಪ್ ಹಾಗೂ ಡಿಸ್ಪ್ಲೇ ನೋಚ್ ಇತ್ಯಾದಿ ವಿಶೇಷ ಫೀಚರ್ಗಳಿಂದ ಯುವ ಗ್ರಾಹಕರನ್ನು ಆಕರ್ಷಿಸುತ್ತಿದೆ. ವೈರ್ಲೆಸ್ ಎಫ್ಎಂ ರೇಡಿಯೊ, 12/8 ಕ್ಯಾಮರಾ ಎಂಪಿ, 2ಜಿಬಿ ರ್ಯಾಮ್ನೊಂದಿಗೆ 5,000ಎಂಹೆಚ್ ಬ್ಯಾಟರಿಯ ಜತೆಗೆ ವೇಗವಾಗಿ ಚಾರ್ಜಿಂಗ್ ಆಗುವ ಸಾಮರ್ಥ್ಯವಿರುವ ಈ ಸ್ಮಾರ್ಟ್ಫೋನ್ ಬೆಲೆ ಕೇವಲ 6,499 ರೂ.ಗಳಾಗಿದೆ.
ರಿಯಲ್ಮೀ ಸಿ2
4000 ಎಂಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾಟ್ಫೋನ್ 7999 ರೂಗಳಿಗೆ ಲಭ್ಯವಿದ್ದು, 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ 13 ಪ್ಲಸ್ 25 ಎಂಪಿ ಕ್ಯಾಮರಾವಿದ್ದು, 4000 ಎಂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 10
ಕಂಪ್ಯೂಟರ್ ಗೇಮಿಂಗ್ ಕಾನ್ಸೋಲ್, ಮೂವಿ ಟೆಕ್ ಕ್ಯಾಮರಾ, ಇಂಟಲಿಜೆಂಟ್ ಪೇನ್ ಸೇರಿದಂತೆ ವಿಭಿನ್ನ ವೈಶಿಷ್ಟಗಳನ್ನು ಒಳಗೊಂಡಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 10 ಮಾರುಕಟ್ಟೆಯ ಬೆಲೆ 7999 ರೂಗಳಾಗಿದೆ. ಇನ್ನೂ ಇದು 3400 ಎಂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 3ಜಿಬಿ ರ್ಯಾಮ್ ಹಾಗೂ 6.2 ಇಂಚಿನ ಸ್ಕ್ರೀನ್ ಗಾರ್ಡ್ ಇದೆ.
ಶಿಯೋಮಿ ರೆಡ್ಮಿ 7
ರೆಡ್ಮಿ ನೋಟ್ 7 ವಿಭಿನ್ನ ಮೆಮೊರಿ ವೇರಿಯಂಟ್ ನಲ್ಲಿ ಲಭ್ಯವಿದ್ದು, 2ಜಿಬಿ ರ್ಯಾಮ್ನೊಂದಿಗೆ 632 ಸ್ನ್ಯಾಪ್ಡ್ರ್ಯಾಗನ್ ಹಾಗೂ 12 ಪ್ಲಸ್ 2 ಎಂಪಿ ಎರಡು ಕ್ಯಾಮರಾಗಳನ್ನು ಹೊಂದಿರುವ ಈ ಫೋನ್ನ ಮಾರುಕಟ್ಟೆಯ ಬೆಲೆ ಕೇವಲ 5000 ರೂಗಳಾಗಿದೆ.
ಇನ್ಫಿನಿಕ್ಸ್ ಹಾಟ್ 8
ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಅಗ್ಗದ ಬೆಲೆಯ ಸ್ಮಾರ್ಟ್ಫೋನ್ಗಳ ಪೈಕಿ “ಇನ್ಫಿನಿಕ್ಸ್ ಹಾಟ್ 8′ ಕೂಡಾ ಒಂದಾಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ 6999 ರೂಗಳಾಗಿದೆ. ಈ ಸ್ಮಾರ್ಟ್ಫೋನ್ ಅಲ್ಲಿ ಮೂರು ಕ್ಯಾಮರಾಗಳ ಆಯ್ಕೆಗಳಿದ್ದು, 5000 ಎಂಹೆಚ್ ಬ್ಯಾಟರಿ ಬ್ಯಾಕ್ಅಪ್ ಸಾಮರ್ಥ್ಯ, 4ಜಿಬಿ ರ್ಯಾಮ್ ಇದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ10
ಪ್ರಸ್ತುತ ಕೇವಲ 7,990 ರೂಪಾಯಿಗಳ ಬೆಲೆಯಲ್ಲಿ ಲಭ್ಯವಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎ10 6.2 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, 3ಜಿಬಿ ರ್ಯಾಮ್ ಹಾಗೂ 3400 ಎಂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ