ಎಲ್ಲಾ ರೀತಿಯ ಆದಾಯ ತೆರಿಗೆ ಸಲ್ಲಿಕೆ ಅಂತಿಮ ದಿನ ನವಂಬರ್ 30ರವರೆಗೆ ವಿಸ್ತರಣೆ
Team Udayavani, May 13, 2020, 6:27 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ನ ವಿವಿಧ ಸೌಲಭ್ಯಗಳ ಕುರಿತಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ವಿವರ ನೀಡಿದ್ದಾರೆ.
ಇದರಲ್ಲಿ ಆದಾಯ ತೆರಿಗೆ ಸಲ್ಲಿಸುವವರಿಗೂ ಸಿಹಿ ಸುದ್ದಿಯನ್ನು ವಿತ್ತ ಸಚಿವರು ನೀಡಿದ್ದಾರೆ. ಅದೆಂದರೆ, ಎಲ್ಲಾ ರೀತಿಯ ಆದಾಯ ತೆರಿಗೆ ಪಾವತಿಗಳ ಅಂತಿಮ ದಿನಾಂಕವನ್ನು ಈ ವರ್ಷದ ನವಂಬರ್ ತಿಂಗಳಿನವರೆಗೆ ವಿಸ್ತರಿಸಲಾಗಿದೆ.
ಇನ್ನು 2021ರ ಮಾರ್ಚ್ 31ರ ತನಕ ಮಾಡುವಂತಹ ವೇತನ ರಹಿತ ಪಾವತಿಗಳ ಟಿಡಿಎಸ್, ಟಿಸಿಎಸ್ ದರಗಳಲ್ಲಿ 25% ಕಡಿತವನ್ನು ಘೋಷಿಸಲಾಗಿದೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಪಾವತಿಯಾಗಬೇಕಿದ್ದ 50 ಸಾವಿರ ಕೋಟಿ ರೂಪಾಯಿಗಳು ಸ್ಥಳೀಯವಾಗಿ ಉಳಿದುಕೊಳ್ಳಲಿದೆ ಹಾಗೂ ತನ್ಮೂಲಕ ಈ ಮೊತ್ತ ಮಾರುಕಟ್ಟೆಯಲ್ಲಿ ಚಲಾವಣೆಗೆ ಬರಲಿದೆ ಎನ್ನುವುದು ವಿತ್ತ ಸಚಿವರ ಆಶಯವಾಗಿದೆ.
ಕೋವಿಡ್ ಸಂಕಷ್ಟದ ಬಳಿಕ ‘ಸ್ವಾವಲಂಬಿ’ ಭಾರತವನ್ನು ಕಟ್ಟುವ ಮಹತ್ವಾಕಾಂಕ್ಷೆಯೊಂದಿಗೆ ಪ್ರದಾನಿ ಮೋದಿ ಅವರು ಮಂಗಳವಾರವಷ್ಟೇ ‘ಆತ್ಮ ನಿರ್ಭರ ಭಾರತ’ ಯೋಜನೆಯಡಿ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ಪ್ಯಾಕೇಜ್ ನೆರವನ್ನು ಘೋಷಿಸಿದ್ದರು. ಮತ್ತಿದು ನಮ್ಮ ಜಿಡಿಪಿಯ 10 ಪ್ರತಿಶದಷ್ಟಾಗಲಿದೆ.
ಆರ್ಥಿಕತೆ, ಮೂಲಭೂತ ವ್ಯವಸ್ಥೆ, ಭೌಗೋಳಿಕತೆ ಹಾಗೂ ಬೇಡಿಕೆ ಎಂಬುದು ‘ಆತ್ಮ ನಿರ್ಭರ ಭಾರತ’ದ ಮೂಲಭೂತ ಸ್ತಂಭಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್