ಗ್ರಾಹಕರಿಗೆ ದೀಪಾವಳಿ ಧಮಾಕಾ: ಜಿಯೋಫೋನ್ ಈಗ ಕೇವಲ 699 ರೂಪಾಯಿಗೆ ಲಭ್ಯ!
Team Udayavani, Oct 3, 2019, 3:45 PM IST
ಮುಂಬೈ: ಇಂದಿನ ಸಂಪರ್ಕ ಜಗತ್ತಿನಲ್ಲಿ, ಆಹಾರ, ವಸ್ತ್ರ ಹಾಗೂ ಸೂರಿನ ಹಾಗೆಯೇ ಕೈಗೆಟುಕುವ ಬೆಲೆಯ ಅಂತರಜಾಲ ಸಂಪರ್ಕವೂ ಮನುಷ್ಯನ ಮೂಲಭೂತ ಅಗತ್ಯ ಹಾಗೂ ಮೂಲಭೂತ ಮಾನವ ಹಕ್ಕು ಕೂಡ ಆಗಿದೆ.
ಹೀಗಾಗಿಯೇ ದೇಶಾದ್ಯಂತ ವಾಯ್ಸ್ ಕಾಲಿಂಗ್ ಜೊತೆಗೆ ಡೇಟಾ ಸೇವೆಗಳೂ ಅದರ ಅಗತ್ಯವಿರುವ ಭಾರತೀಯರ ಕೈಗೆಟುಕುವಂತೆ ಜಿಯೋ ನೋಡಿಕೊಂಡಿದೆ. ಇತರ ಸೇವಾದಾರರು ಕಡಿಮೆ ಗುಣಮಟ್ಟದ 2ಜಿ ಡೇಟಾಗಾಗಿ ಪ್ರತಿ ಜಿಬಿಗೆ ರೂ. 500ಕ್ಕೂ ಹೆಚ್ಚಿನ ಶುಲ್ಕ ವಿಧಿಸಿದರೆ, ಜಿಯೋ ತನ್ನ ಸಂಪೂರ್ಣ 4ಜಿ ಜಾಲದಲ್ಲಿ ಅತ್ಯುನ್ನತ ಗುಣಮಟ್ಟದ ಡೇಟಾ ಸೇವೆಯನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಅಲ್ಲದೆ, ಪ್ರಪಂಚದಲ್ಲೇ ಅತ್ಯಂತ ಕಡಿಮೆ ಬೆಲೆಯ 4ಜಿ ಬೆಂಬಲಿಸುವ ಸ್ಮಾರ್ಟ್ಫೋನನ್ನು ಜಿಯೋ ಭಾರತೀಯ ಜನಸಾಮಾನ್ಯರಿಗೆ ಲಭ್ಯವಾಗಿಸಿದೆ.
ಎಲ್ಲ ಭಾರತೀಯರು ಸಂಪೂರ್ಣ ಡಿಜಿಟಲ್ ಒಳಗೊಳ್ಳುವಿಕೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಜಿಯೋ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಇಂದು, ಜಿಯೋಫೋನ್ ದೀಪಾವಳಿ 2019 ಕೊಡುಗೆ ಎಂಬ ಹೆಸರಿನ ಒಂದು ಬಾರಿಯ ವಿಶೇಷ ಕೊಡುಗೆಯನ್ನು ಜಿಯೋ ಪ್ರಕಟಿಸಿದೆ.
ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಜಿಯೋಫೋನ್ ಕೇವಲ 699 ರೂ. ವಿಶೇಷ ಬೆಲೆಯಲ್ಲಿ ದೊರಕಲಿದೆ. 1,500 ರೂ. ಸಾಮಾನ್ಯ ಬೆಲೆಯ ಹೋಲಿಕೆಯಲ್ಲಿ ಇದು 800 ರೂಪಾಯಿ ಉಳಿತಾಯವಾಗಲಿದ್ದು, ಇದಕ್ಕೆ ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಬೇಕಾದ ವಿಶೇಷ ನಿಬಂಧನೆಯೂ ಇಲ್ಲ.
ಜಿಯೋಫೋನ್ ಕೊಳ್ಳಲು ಹಾಗೂ 2ಜಿಯಿಂದ 4ಜಿ ಡೇಟಾ ಜಗತ್ತಿಗೆ ಪ್ರವೇಶಿಸಲು ಜಿಯೋಫೋನ್ ಗ್ರಾಹಕರು ವ್ಯಯಿಸುವ 700 ರೂ. ಮೊತ್ತಕ್ಕೆ ಪ್ರತಿಯಾಗಿ, ಜಿಯೋ ತನ್ನ ಕಡೆಯಿಂದಲೂ ಒಂದು ಹೂಡಿಕೆಯ ಆಫರ್ ನೀಡುತ್ತಿದೆ.
ದೀಪಾವಳಿ 2019 ಕೊಡುಗೆಯ ಮೂಲಕ ಜಿಯೋಗೆ ಸೇರುವ ಜಿಯೋಫೋನ್ ಗ್ರಾಹಕರಿಗೆ ಜಿಯೋ ವತಿಯಿಂದ 700 ರೂ. ಮೌಲ್ಯದ ಡೇಟಾ ಲಾಭ ದೊರಕಲಿದೆ. ಗ್ರಾಹಕರು ಮಾಡುವ ಮೊದಲ 7 ರೀಚಾರ್ಜ್ಗಳಿಗೆ, ತಲಾ 99 ರೂ. ಮೌಲ್ಯದ ಡೇಟಾವನ್ನು ಜಿಯೋ ಹೆಚ್ಚುವರಿಯಾಗಿ ನೀಡಲಿದೆ.
700 ರೂ. ಮೌಲ್ಯದ ಈ ಹೆಚ್ಚುವರಿ ಡೇಟಾದಿಂದ ಮನರಂಜನೆ, ಪಾವತಿಗಳು, ಇ ಕಾಮರ್ಸ್, ಶಿಕ್ಷಣ, ಕಲಿಕೆ, ರೈಲು ಮತ್ತು ಬಸ್ ಬುಕಿಂಗ್, ಕೃತಕ ಬುದ್ಧಿಮತ್ತೆಯ (ಎಐ) ಆ್ಯಪ್ಗಳು ಮತ್ತಿತರ ಅನೇಕ ಸವಲತ್ತುಗಳ ಹಿಂದೆಂದೂ ನೋಡಿರದ ಜಗತ್ತನ್ನು ಪ್ರವೇಶಿಸುವುದು ಜಿಯೋಫೋನ್ ಗ್ರಾಹಕರಿಗೆ ಸಾಧ್ಯವಾಗಲಿದೆ.
ಜಿಯೋಫೋನ್ ಮೇಲೆ 800 ರೂ. ಉಳಿತಾಯ ಹಾಗೂ 700 ರೂ. ಮೌಲ್ಯದ ಡೇಟಾ ಸೇರಿ ಪ್ರತಿ ಜಿಯೋಫೋನ್ ಮೇಲೆ 1,500 ರೂ. ಲಾಭ ದೊರಕುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಇಂಡಿಯಾಗಾಗಿ 1,500 ರೂಪಾಯಿ ಈ ಲಾಭ ಜಿಯೋದ ದೀಪಾವಳಿ ಉಡುಗೊರೆಯಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಮುಖೇಶ್ ಡಿ. ಅಂಬಾನಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…