ಆದಾಯ ಹೆಚ್ಚಿಸಲು ಪಿಪಿಎಫ್ ನಲ್ಲಿ ಯಾವಾಗ ಹೂಡಿಕೆ ಮಾಡಬೇಕು..?
Team Udayavani, Apr 3, 2021, 11:51 AM IST
ನವ ದೆಹಲಿ : ಪಿಪಿಎಫ್ ಭಾರತೀಯರು ತಮ್ಮ ದೀರ್ಘಕಾಲೀನ ಉಳಿತಾಯವನ್ನು ಠೇವಣಿ ಮಾಡಲು ಬಳಸುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದು ಗ್ಯಾರಂಟಿ ರಿಟರ್ನ್ಸ ನನ್ನು ಒದಗಿಸುತ್ತದೆ.
ಪ್ರಸ್ತುತ, ಪಿಪಿಎಫ್ 7.1% ಬಡ್ಡಿಯನ್ನು ನೀಡುತ್ತಿದೆ. ಸರ್ಕಾರ ಇತ್ತೀಚೆಗೆ ಬಡ್ಡಿದರಗಳನ್ನು ಕೆಳಕ್ಕೆ ಪರಿಷ್ಕರಿಸಿತು, ಆದಾಗ್ಯೂ, ನಂತರ ಆ ನಿರ್ಧಾರವನ್ನು ವಾಪಸ್ ಪಡೆಯಲಾಯಿತು.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ. ನೀವು ಪಿಪಿಎಫ್ ನಲ್ಲಿ ಹೂಡಿಕೆ ಮಾಡುತ್ತಿದ್ದರೆ, ನಿಮ್ಮ ನಿರ್ಧಾರವನ್ನು ನೀವು ಬದಲಾಯಿಸಬೇಕಾಗಿಲ್ಲ. ಇನ್ನು, ನಿಮ್ಮ ಪಿಪಿಎಫ್ 20 ಜೂನ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 7.1% ಬಡ್ಡಿದರ ಯತಾವತ್ತಾಗಿ ಮುಂದುವರಿಯುತ್ತದೆ.
ಓದಿ : ರಶ್ಮಿಕಾ ಮಂದಣ್ಣ ಎರಡನೇ ಬಾಲಿವುಡ್ ಚಿತ್ರ ಶುರು
ಆದಾಗ್ಯೂ, ಬಡ್ಡಿದರಗಳ ಹೊರತಾಗಿ ನೀವು ಪಿಪಿಎಫ್ ನಲ್ಲಿ ಹೂಡಿಕೆ ಮಾಡುತ್ತಿದ್ದರೆ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಇತರ ಕೆಲವು ವಿಷಯಗಳಿವೆ.
ವರ್ಷದ ಆರಂಭದಲ್ಲಿ ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ಸೂಕ್ತ. ಈ ರೀತಿಯಾಗಿ ನೀವು ಇಡೀ ವರ್ಷ ಠೇವಣಿಗಳ ಮೇಲೆ ಬಡ್ಡಿಯನ್ನು ಗಳಿಸುತ್ತೀರಿ. ಒಂದು ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಮಾಡಿದ ಹೂಡಿಕೆಗಳ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ನೀವು ವರ್ಷದ ಕೊನೆಯಲ್ಲಿ ಹೂಡಿಕೆ ಮಾಡಿದರೆ, ನೀವು ವರ್ಷದ ಇಂಟ್ರೆಸ್ಟ್ ನ್ನು ಕಳೆದುಕೊಳ್ಳುತ್ತೀರಿ.
ಇದಲ್ಲದೆ ಪಿಪಿಎಫ್ ಮೇಲಿನ ಇಂಟ್ರೆಸ್ಟ್ ನ್ನು ತಿಂಗಳ ಐದನೇ ಮತ್ತು ಕೊನೆಯ ದಿನದ ನಡುವಿನ ಕನಿಷ್ಠ ಮಾಸಿಕ ಸಮತೋಲನದ ಮೇಲೆ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ, ಪಿಪಿಎಫ್ ನಲ್ಲಿ ನಿಮ್ಮ ಬಾಕಿ ಏಪ್ರಿಲ್ 1 ರಂತೆ ₹ 50,000 ಆಗಿದ್ದರೆ ಮತ್ತು ಏಪ್ರಿಲ್ 6 ರಂದು ನೀವು 20,000 ಠೇವಣಿ ಇಟ್ಟರೆ, ಏಪ್ರಿಲ್ ತಿಂಗಳ ಬಡ್ಡಿಯನ್ನು 70,000 ಬದಲಿಗೆ 50,000 ಕ್ಕೆ ಲೆಕ್ಕಹಾಕಲಾಗುತ್ತದೆ.
ನೀವು ವರ್ಷದ ಆರಂಭದಲ್ಲಿ ಮೊತ್ತವನ್ನು ಠೇವಣಿ ಮಾಡಿದರೆ ಮಾತ್ರ ಗರಿಷ್ಠ ಬಡ್ಡಿಯನ್ನು ಗಳಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ