- Wednesday 11 Dec 2019
ಸದ್ಯದಲ್ಲೇ ದೇಶಿಯ ಮಾರುಕಟ್ಟೆಗೆ ಬರಲಿದೆ ನೋಕಿಯಾ ಸ್ಮಾರ್ಟ್ ಟಿವಿ
Team Udayavani, Nov 19, 2019, 3:12 PM IST
ಹೊಸದಿಲ್ಲಿ: ಮೊಬೈಲ್ ಮಾರುಕಟ್ಟೆಯಲ್ಲಿ ದಿನ ಬೆಳಗಾದರೆ ಒಂದಲ್ಲ ಒಂದು ಹೊಸ ಪ್ರಯೋಗಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಹೆಸರಾಂತ ಕಂಪೆನಿಯಾದ ನೋಕಿಯಾ ವಿನೂತನ ಚಿಂತನೆ ನಡೆಸಿದ್ದು, ಸದ್ಯದಲ್ಲೇ ದೇಶೀಯ ಮಾರುಕಟ್ಟೆಗೆ ಸ್ಮಾರ್ಟ್ ಟಿವಿಯನ್ನು ಪರಿಚಯಿಸಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಮೊಬೈಲ್ ಕಂಪನಿಗಳು ಸ್ಮಾರ್ಟ್ ಟಿವಿಯನ್ನು ಪರಿಚಯಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಒನ್ಪ್ಲಸ್ ಸ್ಮಾರ್ಟ್ ಟಿವಿ ರಿಲೀಸ್ ಆಗಿದ್ದು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಸದ್ಯ ಇದೇ ರೀತಿಯಲ್ಲಿ ಟಿವಿ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲು ನೋಕಿಯಾ ಸಂಸ್ಥೆ ಮುಂದಾಗಿದ್ದು, ಆಕರ್ಷಕ ಮಾದರಿಯಲ್ಲಿ ಟಿವಿಯನ್ನು ರೂಪುರೇಷೆ ಮಾಡಲಿದೆ.
ಹೆಚ್ಚಾದ ಆ್ಯಂಡ್ರಾಯ್ಡ್ ಫೋನ್ಗಳ ಭರಾಟೆಯಲ್ಲಿ ನೋಕಿಯಾ ಕಂಪನಿ ದೇಶದಲ್ಲಿ ತನ್ನ ಅಸ್ತಿತ್ವ ಬಹುತೇಕ ಕಳೆದುಕೊಂಡಿದ್ದು, ದಶಕದ ಹಿಂದಿನವರೆಗೂ ಭಾರೀ ಚಾಲ್ತಿಯಲ್ಲಿತ್ತು. ಈ ಹಿನ್ನಲೆ ತನ್ನ ಗ್ರಾಹಕ ಬಳಗವನ್ನು ಸೆಳೆಯುವ ಕಾರ್ಯತಂತ್ರವನ್ನು ಕಂಪೆನಿ ಹಾಕಿಕೊಂಡಿದ್ದು, ಸದ್ಯ ಕಂಪೆನಿಯಿಂದ ಹೊರಬಿದ್ದ ಮಾಹಿತಿ ಪ್ರಕಾರ ನೋಕಿಯಾ ಶೀಘ್ರದಲ್ಲೇ ಭಾರತದಲ್ಲಿ ಸ್ಮಾರ್ಟ್ ಟಿವಿ ರಿಲೀಸ್ ಮಾಡಲಿದೆ.
ಇ-ಕಾಮರ್ಸ್ನ ಹೆಸರಾಂತ ಸಂಸ್ಥೆ ಫ್ಲಿಪ್ಕಾರ್ಟ್ ಸಹಭಾಗಿತ್ವದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿ ಲಭ್ಯವಾಗಲಿದೆ. ಇನ್ನೂ ಈ ಟಿವಿ ಕುರಿತು ಕೆಲ ಫೀಚರ್ ಹೊರಬಿದ್ದಿದ್ದು, 50 ಹಾಗೂ ಅದಕ್ಕಿಂತ ಹೆಚ್ಚಿನ ಇಂಚಿನ ಸ್ಕ್ರೀನ್ ಇರುವ ನೋಕಿಯಾ ಸ್ಮಾರ್ಟ್ ಟಿವಿ ಆ್ಯಂಡ್ರಾಯ್ಡ್ 9.0 ಹೊಂದಿರಲಿದೆ.
ಜೆಬಿಎಲ್ ಸ್ಪೀಕರ್ ಈ ಟಿವಿಯಲ್ಲಿರಲಿದೆ. ಇನ್ನೂ ಬಿಡುಗಡೆಗೆ ದಿನಾಂಕ ನಿಗದಿ ಆಗದಿದ್ದರೂ, ಡಿಸೆಂಬರ್ನಲ್ಲಿ ಲಾಂಚ್ ಆಗಲಿದೆ ಎನ್ನುವ ಸುದ್ದಿ ಸದ್ಯ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ.
ಈ ವಿಭಾಗದಿಂದ ಇನ್ನಷ್ಟು
-
ದೇಶ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದರೆ, ಹೊಲ ಉಳುವ ರೈತ ನಮಗೆಲ್ಲಾ ಅನ್ನದಾತ, ಹಸಿವಿನಿಂದ ನಮ್ಮನ್ನು ರಕ್ಷಿಸುವ ದೇವದೂತ. ಅಂತಹ ರೈತರನ್ನು ಸ್ಮರಿಸುವುದು...
-
ಹೊಸದಿಲ್ಲಿ: ಫೋನ್ ಯಾವುದೇ ತೆಗೆದುಕೊಳ್ಳಲಿ, ಮೊದಲು ಕೇಳುವುದು ಎಷ್ಟು ಮೆಗಾಪಿಕ್ಸೆಲ್ ಕೆಮರಾ? ಇಂತಹ ಪ್ರಶ್ನೆ ಕೇಳಿದವರು ಇನ್ನು ಬೆಚ್ಚಿ ಬೀಳಬೇಕು. ಅತಂಹದ್ದೊಂದು...
-
ಕ್ಯಾಲಿಫೋರ್ನಿಯಾ / ನಾರ್ವೆ: ತಾಂತ್ರಿಕ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಆವಿಷ್ಕಾರಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಅಂತಹದೇ ಹೊಸ ಸಾಹಸಕ್ಕೆ ಗೂಗಲ್...
-
ಕ್ಯಾಲಿಫೋರ್ನಿಯಾ: ರಾತ್ರಿಯ ವೇಳೆ ಸುರಕ್ಷತೆಯಿಂದ ಜನರನ್ನು ಮನೆಗೆ ತಲುಪಿಸುವ ಉದ್ದೇಶದಿಂದ ಗೂಗಲ್ ಮ್ಯಾಪ್ ಹೊಸ ಫೀಚರ್ ಒಂದನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಗೂಗಲ್...
-
ಮುಂಬಯಿ: 'ಕಾಲ್ ಆಫ್ ಡ್ಯೂಟಿ ಮೊಬೈಲ್' ಎಂಬ ಮೊಬೈಲ್ ಗೇಮ್ 2019ರ ಗೋಗಲ್ ಪ್ಲೇನ ಅತ್ಯುತ್ತಮ ಮೊಬೈಲ್ ಗೇಮ್ ಪ್ರಶಸ್ತಿಗೆ ಭಾಜನವಾಗಿದೆ. ಜೊತೆಗೆ ಗೂಗಲ್ ಪ್ಲೇಸ್...
ಹೊಸ ಸೇರ್ಪಡೆ
-
ಲಂಡನ್: ವೈದ್ಯರ ಬಳಿಯಲ್ಲಿ ಹಾಗೂ ವಕೀಲರ ಬಳಿಯಲ್ಲಿ ನಾವು ಯಾವುದೇ ವಿಷಯಗಳನ್ನು ಮುಚ್ಚಿಡಬಾರದು ಎಂಬ ಮಾತೊಂದಿದೆ. ಹಾಗಾಗಿಯೇ ರೋಗಿಗಳು ತಾವು ವೈದ್ಯರಲ್ಲಿಗೆ...
-
ಶರತ್ ಭದ್ರಾವತಿ ಶಿವಮೊಗ್ಗ: ತಮಿಳುನಾಡು ಬಾಳೆ ಜಿಲ್ಲೆಗೆ ಕಾಲಿಟ್ಟ ಕಾರಣ ಗ್ರಾಹಕರ ಜೇಬಿಗೆ ಹೊರೆಯಾಗಿದ್ದು ಪುಟ್ಟ ಬಾಳೆ (ಏಲಕ್ಕಿ ಬಾಳೆ) ಈಗ ಭಾರೀ ಇಳಿಕೆಯಾಗಿದ್ದು...
-
ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಕೆರೆ ನೀರು ಪೋಲಾಗುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ...
-
ಸುರಪುರ: ತಾಲೂಕಿನ ಯಕ್ತಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿ ಅಂಕಪಟ್ಟಿ ತಿದ್ದುಪಡಿ ಮಾಡಿದ ಪ್ರಧಾನ ಶಿಕ್ಷಕರ...
-
ದೇಶ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದರೆ, ಹೊಲ ಉಳುವ ರೈತ ನಮಗೆಲ್ಲಾ ಅನ್ನದಾತ, ಹಸಿವಿನಿಂದ ನಮ್ಮನ್ನು ರಕ್ಷಿಸುವ ದೇವದೂತ. ಅಂತಹ ರೈತರನ್ನು ಸ್ಮರಿಸುವುದು...