ಚಿನ್ನದ ಮೌಲ್ಯದ ಶೇ. 90ರಷ್ಟು ಸಾಲ ನೀಡಲು ಆರ್ಬಿಐ ಅವಕಾಶ
Team Udayavani, Aug 6, 2020, 7:55 PM IST
ಮಣಿಪಾಲ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಚಿನ್ನದ ಸಾಲ ನೀಡುವ ಮಾನದಂಡಗಳನ್ನು ಸಡಿಲಗೊಳಿಸಿದೆ.
ಗ್ರಾಹಕರು ಈಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಇಡುವ ತಮ್ಮ ಚಿನ್ನಕ್ಕಾಗಿ ದೊಡ್ಡ ಮೊತ್ತದ ಸಾಲವನ್ನು ಪಡೆಯಬಹುದಾಗಿದೆ.
ಈ ಕುರಿತಾಗಿ ಕೆಲವು ನಿರ್ದೇಶನಗಳನ್ನು ಆರ್ಬಿಐ ನೀಡಿದೆ. ವಿಶೇಷವಾಗಿ ಕೊರೊನಾ ಸಂಕಷ್ಟದ ಕಾರಣಕ್ಕೆ ನೆರವಾಗುವ ಉದ್ದೇಶದಿಂದ ಈ ಸೌಲಭ್ಯವನ್ನು ಒದಗಿಸುತ್ತಿದೆ.
ಏನಿದು ಹೊಸ ಅವಕಾಶ
ಪ್ರಸ್ತುತ ಅಡಮಾನ ಕ್ರಮದಲ್ಲಿ ಚಿನ್ನದ ಮೌಲ್ಯದ ಶೇ. 75ರ ವರೆಗೆ ಸಾಲ ನೀಡಲಾಗುತ್ತಿದೆ. ಆದರೆ ಇನ್ನು ಮುಂದೆ ಶೇ. 90ರಷ್ಟು ಸಾಲ ಪಡೆಯಬಹುದು. ಮುಂದಿನ ಮಾರ್ಚ್ 31ರ ವರೆಗೆ ಈ ಸೌಲಭ್ಯ ಲಭ್ಯವಾಗಲಿದೆ. ಅಂದ ಹಾಗೇ ನೀವು ಶೇ. 90ರಷ್ಟು ಸಾಲ ಪಡೆದರೆ ಬಡ್ಡಿದರವೂ ಹೆಚ್ಚಾಗಲಿದೆ.
ಶೇ. 90 ಅಂದರೆ ಹೇಗೆ?
ಆರ್ಬಿಐ ಎಟಿವಿ (ಲೋನ್ ಟು ವ್ಯಾಲು)ಯ ಅನುಪಾತವನ್ನು ಹೆಚ್ಚಿಸಿದೆ. ಇದರ ಫಲವಾಗಿ ಗ್ರಾಹಕರು ಶೇ. 90ರಷ್ಟು ಸಾಲ ಪಡೆಯಬಹುದು. ಉದಾಹರಣೆಗೆ ಪ್ರಸ್ತುತ ಚಾಲ್ತಿಯಲ್ಲಿದ್ದ ಕ್ರಮದಂತೆ, ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಮೌಲ್ಯದ ಶೇ. 75ರಷ್ಟು ಸಾಲವನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ನಿಮ್ಮ ಚಿನ್ನದ ಮೌಲ್ಯ 1 ಲಕ್ಷ ಇರಲೇಬೇಕಾಗಿದೆ. ಅಂದರೆ ನೀವು 75,000 ರೂ. ಅನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಆದರೆ ಈಗ ಅದರ ಪ್ರಮಾಣವನ್ನು ಹೆಚ್ಚಿಸಲಾಗಿದೆ. ನಿಮ್ಮ ಚಿನ್ನದ ಮೌಲ್ಯ 1 ಲಕ್ಷವಾಗಿದ್ದರೆ ಅದರ ಶೇ. 90 ಅಂದರೆ 90 ಸಾವಿರವನ್ನು ಸಾಲದ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಗೋಲ್ಡ್ ಲೋನ್ ಪ್ರಮಾಣ ಹೆಚ್ಚಳ
ಕೋವಿಡ್-19 ಆರಂಭವಾದಾಗಿನಿಮದ ಚಿನ್ನದ ಮೇಲೆ ಸಾಲ ಪಡೆಯುವವರ ಪ್ರಮಾನ ಗಮನಾರ್ಹ ಏರಿಕೆಯಾಗಿದೆ. ಯಾಕೆಂದರೆ ಇದು ಬಹಳ ಬೇಗನೆ ದೊರೆಯುವುದು ಮಾತ್ರವಲ್ಲದೇ ಈ ಸಾಲಗಳು ಸುರಕ್ಷಿತವಾಗಿದೆ. ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಗೋಲ್ಡ್ಲೋನ್ನ ಬಡ್ಡಿದರಗಳು ಕಡಿಮೆ. ಚಿನ್ನದ ಬೆಲೆಯಲ್ಲಿನ ಏರಿಕೆಯು ಈ ಸಾಲಗಳ ಬೇಡಿಕೆಯನ್ನು ಹೆಚ್ಚಿಸಿದೆ. ತಮ್ಮಲ್ಲಿರುವ ಚಿನ್ನಕ್ಕೆ ಹೆಚ್ಚಿನ ಸಾಲವನ್ನು ಪಡೆಯಬಹುದು.
ಚಿನ್ನ ದುಬಾರಿ
ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಈ ವರ್ಷದ ಎಪ್ರಿಲ್ನಿಂದ ಚಿನ್ನದ ಬೆಲೆ ಶೇ. 30ರಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಗಳು ಶೇ. 42ಕ್ಕಿಂತ ಹೆಚ್ಚಾಗಿದೆ. ಆಗಸ್ಟ್ 2019ರಂದು ಚಿನ್ನದ ಬೆಲೆ 38,950 ರೂ. ಆಗಿತ್ತು. ಇದೀಗ 10 ಗ್ರಾಂ.ಗೆ 55,500 ರೂ. ಆಗಿದೆ. ಕೊರೊನಾ ಕಾಲದಲ್ಲಿ ಇದೇ ಅನಿಶ್ಚಿತತೆ ಮುಂದುವರಿದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?