ಉಳಿತಾಯ- ಹೂಡಿಕೆ ; ಗೃಹಿಣಿಯರ ಪಾತ್ರ
Team Udayavani, Nov 29, 2020, 5:44 AM IST
ಸಾಂದರ್ಭಿಕ ಚಿತ್ರ
ದೇಶದಲ್ಲಿ ಕುಟುಂಬದ ಹಣಕಾಸು ವ್ಯವಹಾರಗಳನ್ನು ಪುರುಷರೇ ನಿರ್ವಹಿಸುವುದು ಸಾಂಪ್ರದಾಯಿಕವಾಗಿ ನಡೆದುಬಂದಿದೆ. ಆದರೆ ಬದಲಾಗುತ್ತಿರುವ ಕಾಲ ಹಾಗೂ ಹಣದುಬ್ಬರದಂತಹ ಸನ್ನಿವೇಶಗಳಿಗೆ ತಕ್ಕಂತೆ ಗೃಹಿಣಿಯರು ಹಾಗೂ ಉದ್ಯೋಗಸ್ಥೆ ಮಹಿಳೆಯರು ಕುಟುಂಬದ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳಲು ಆರಂಭಿಸಿದ್ದಾರಲ್ಲದೇ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಪದೇಪದೆ ಏರಿಳಿತ ಕಾಣುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ತನ್ನ ಕುಟುಂಬದ ಹಣಕಾಸು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದು ಪ್ರತಿಯೊಬ್ಬ ಗೃಹಿಣಿಯ ಮೇಲಿರುವ ಮಹತ್ವದ ಜವಾಬ್ದಾರಿಯಾಗಿದೆ. ಮನೆಯ ಡಬ್ಬಿಗಳಲ್ಲಿ ಹಣ ಕೂಡಿಡುವ ಹಳೇ ಸಂಪ್ರದಾಯದ ಬದಲಾಗಿ ಇಂದು ಬ್ಯಾಂಕ್ಗಳು ಹಾಗೂ ಹೂಡಿಕೆಯ ತಾಣಗಳನ್ನು ಗೃಹಿಣಿಯರು ಹಣ ಉಳಿತಾಯಕ್ಕೆ ಆಶ್ರಯಿಸಿದ್ದಾರೆ.
ತಾಂತ್ರಿಕವಾಗಿ ನೋಡುವುದಾ ದರೆ ಪ್ರತಿಯೊಂದೂ ಕುಟುಂಬ ದಲ್ಲಿ ಗೃಹಿಣಿ ಸಂಪಾದನೆ ಮಾಡುವ ಸದಸ್ಯೆಯಲ್ಲ, ಆದರೆ ಆಕೆಯ ಹೆಗಲ ಮೇಲೆ ಕುಟುಂಬದ ಹಣಕಾಸು ವ್ಯವಹಾರವನ್ನು ನಿಭಾಯಿಸುವ ಮಹತ್ವದ ಜವಾಬ್ದಾರಿಯಿದೆ. ಇಂದಿನ ಗೃಹಿಣಿಯರು ಸುಶಿಕ್ಷಿತರಾಗಿದ್ದು, ಸಮಾಜದ ಆಗುಹೋಗುಗಳನ್ನು ಗ್ರಹಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಹಣಕಾಸು ಸವಾಲುಗಳನ್ನು ನಿಭಾಯಿಸಲು ಎಂದಿಗಿಂತ ಹೆಚ್ಚು ಸಮರ್ಥರಾಗಿದ್ದಾರೆ.
ಹಣಕಾಸು ನಿರ್ವಹಣೆ
ಉಳಿತಾಯ ಮಾಡುವ ವಿಷಯದಲ್ಲಿ ಮಹಿಳೆಯರು ಹೆಚ್ಚು ಚಾಣಾಕ್ಷರು. ಮನೆ ಹಾಗೂ ಮಕ್ಕಳ ಭವಿಷ್ಯದ ಬಗೆಗಿನ ಹಣಕಾಸು ಯೋಜನೆಗಳನ್ನು ಮಹಿಳೆಯರು ಉತ್ತಮವಾಗಿ ನಿರ್ಧರಿಸಬಲ್ಲರು. ಹಣಕಾಸು ವ್ಯವಹಾರ/ ಯೋಜನೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಅತ್ಯಗತ್ಯವಾಗಿದೆ.
ಗೃಹಿಣಿಯರ ಉಳಿತಾಯಕ್ಕೆ ಸರಳ ಸೂತ್ರಗಳು
– ಕುಟುಂಬದ ಹಣಕಾಸು ವ್ಯವಹಾರ, ಹೂಡಿಕೆ, ವಿಮೆ ಮೊದಲಾದ ವಿಚಾರಗಳಲ್ಲಿ ಗೃಹಿಣಿಯರು ಆಸಕ್ತಿ ವಹಿಸಬೇಕು. ಗೃಹಿಣಿಯಾಗಿರುವ ನೆಲೆಯಲ್ಲಿ, ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ತೆರೆದು, ಉಳಿತಾಯ ಮಾಡುವ ಹಣವನ್ನು ಅದರಲ್ಲಿ ಜಮೆ ಮಾಡಬಹುದಾಗಿದೆ. ಫಿಕ್ಸೆಡ್ ಠೇವಣಿ ಖಾತೆ ತೆರೆದು, ಹಣವನ್ನು ಜಮೆ ಮಾಡುವ ಮೂಲಕ ಅದನ್ನು ವೃದ್ಧಿಸಬಹುದು.
– ಪ್ರತೀ ಹೂಡಿಕೆ ಯೋಜನೆಯಲ್ಲಿ ತನ್ನನ್ನು ಸಹ-ಖಾತೆದಾರ (Joint Holder) ರನ್ನಾಗಿ ಮಾಡುವಂತೆ ಪತಿಗೆ ಹೇಳಬೇಕು. ಒಂದು ವೇಳೆ ಅದು ಸಾಧ್ಯವಿಲ್ಲದಿದ್ದಲ್ಲಿ ಅಥವಾ ಪಿಂಚಣಿ ಖಾತೆ ಮುಂತಾದವುಗಳಲ್ಲಿ ಪತ್ನಿಯ ಹೆಸರನ್ನು ನಾಮಿನಿ (ನಾಮನಿರ್ದೇಶನ)ಯಾಗಿ ಸೇರ್ಪಡೆಗೊಳಿಸುವಂತೆ ತಿಳಿಸಬೇಕು. ಇದು ಭವಿಷ್ಯದಲ್ಲಿ ನೆರವಾಗುತ್ತದೆ.
– ಪತಿಯ ಪ್ರತೀ ಹೂಡಿಕೆ, ಬ್ಯಾಂಕ್ ಖಾತೆ, ದಾಖಲೆಗಳು, ಲಾಗಿನ್ ಐಡಿ ಮುಂತಾದವುಗಳ ವಿವರಗಳನ್ನು ಗೃಹಿಣಿಯು ತನ್ನ ಬಳಿ ಇಟ್ಟುಕೊಳ್ಳಬೇಕು. ವಿಮೆ, ಆರೋಗ್ಯ ವಿಮೆ, ಪಿಪಿಎಎಫ್, ಬ್ಯಾಂಕ್ ಖಾತೆ, ಫಿಕ್ಸೆಡ್ ಡಿಪಾಸಿಟ್ ಖಾತೆ ಮುಂತಾದವುಗಳ ಬಗ್ಗೆ ತಿಳಿದುಕೊಂಡಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ