
ಸೆನ್ಸೆಕ್ಸ್ ಏರಿಕೆ: ಹೂಡಿಕೆದಾರರ ಮೊಗದಲ್ಲಿ ನಗು
Team Udayavani, Apr 1, 2023, 6:39 AM IST

ಮುಂಬಯಿ: 2022-23ರ ಹಣ ಕಾಸು ವರ್ಷದ ಕೊನೆಯ ದಿನವಾದ ಶುಕ್ರವಾರ ಷೇರುಪೇಟೆ ಹೂಡಿಕೆದಾರರ ಮೊಗದಲ್ಲಿ ನಗು ಕಂಡುಬಂದಿದೆ. ಹಲವು ದಿನಗಳ ನಿರಾಸೆಯೆಲ್ಲ ಕರಗಿ, ಹೊಸ ಭರವಸೆಯೊಂದಿಗೆ 2023-24 ಅನ್ನು ಸ್ವಾಗತಿಸಿದ್ದಾರೆ. ಇದಕ್ಕೆ ಕಾರಣ ಷೇರುಪೇಟೆ ಸೆನ್ಸೆಕ್ಸ್ ಶೇ.2ರಷ್ಟು ಏರಿಕೆ ಕಂಡಿದ್ದು!
ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರತೆ, ರಿಲಯನ್ಸ್ ಇಂಡಸ್ಟ್ರೀಸ್ ಸಹಿತ ಕೆಲವು ಷೇರುಗಳ ಭಾರೀ ಖರೀದಿ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಯ ಹರಿವು ಹೆಚ್ಚಿದ ಕಾರಣ ಶುಕ್ರವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,031.43 ಅಂಕ ಏರಿಕೆಯಾಗಿ, 58,991ರಲ್ಲಿ ಅಂತ್ಯಗೊಂಡಿತು. ನಿಫ್ಟಿ 279.05 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 17,359ರಲ್ಲಿ ವಹಿವಾಟು ಅಂತ್ಯಗೊಳಿಸಿತು.
ಸಣ್ಣ ಉಳಿತಾಯ: ಬಡ್ಡಿ ಏರಿಕೆ
ಹೊಸದಿಲ್ಲಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕೇಂದ್ರ ಸರಕಾರ ಶುಕ್ರವಾರ ಶೇ. 0.7ರ ವರೆಗೆ ಏರಿಕೆ ಮಾಡಿದೆ. ಪ್ರಸಕ್ತ ವರ್ಷದ ಎಪ್ರಿಲ್- ಜೂನ್ ತ್ತೈಮಾಸಿಕಕ್ಕೆ ಈ ಬಡ್ಡಿದರಗಳು ಅನ್ವಯವಾಗಲಿದೆ. ಪಿಪಿಎಫ್ ಮತ್ತು ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ಯನ್ನು ಕ್ರಮವಾಗಿ ಶೇ.7.1 ಮತ್ತು ಶೇ.4ರ ದರವನ್ನೇ ಉಳಿಸಿಕೊಳ್ಳಲಾಗಿದೆ.
ಎನ್ಎಸ್ಸಿಗೆ ಶೇ.7ರಿಂದ ಶೇ.7.5, ಸುಕನ್ಯಾ ಸಮೃದ್ಧಿಗೆ ಶೇ.7.6ರಿಂದ ಶೇ.8, ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಶೇ.8ರಿಂದ ಶೇ.8.2, ಕಿಸಾನ್ ವಿಕಾಸ್ ಪತ್ರಕ್ಕೆ ಶೇ.7.2ರಿಂದ ಶೇ.7.6ಕ್ಕೆ ಏರಿಕೆಯಾಗಿದೆ. ಪ್ರಮುಖ ಅಂಶವೆಂದರೆ ಕೆವಿಪಿಯಲ್ಲಿ ಮಾಡಿದ ಹೂಡಿಕೆ 120 ತಿಂಗಳ ಬದಲಾಗಿ 115 ತಿಂಗಳಲ್ಲಿ ಮೆಚೂÂರ್ ಆಗಲಿದೆ. ಮಾಸಿಕ ಇನ್ಕಂ ಸ್ಕೀಮ್ ಯೋಜನೆ ಬಡ್ಡಿ 30 ಮೂಲಾಂಶ ಹೆಚ್ಚಿಸಿದ್ದರಿಂದ ಶೇ.7.4 ಆಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Loan repayment; ಸುಸ್ತಿದಾರನಾಗುವ ದಿಕ್ಕಿನಲ್ಲಿ ಬೈಜೂಸ್ ?

LPG Cylinder; ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ…

ಆರ್ಥಿಕತೆ ಶೇ.7 ಪ್ರಗತಿ ನಿರೀಕ್ಷೆ: ಕಳೆದ ವಿತ್ತ ವರ್ಷದ ಕೊನೆಯಲ್ಲಿ ಶೇ.6.1ರಷ್ಟು ವೃದ್ಧಿ

ಆರಂಭಿಕ ವಹಿವಾಟಿನಲ್ಲಿ… ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 340 ಅಂಕ ಇಳಿಕೆ, ನಿಫ್ಟಿ ಕುಸಿತ

Foreign Fund: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 131 ಅಂಕ ಏರಿಕೆ, ನಿಫ್ಟಿಯೂ ಜಿಗಿತ
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

Kalaburagi: ತಲ್ವಾರ್ ನಿಂದ ಕೊಚ್ಚಿ ಯುವಕನ ಕೊಲೆ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು