ತೇಜಸ್ ಎಕ್ಸ್ ಪ್ರೆಸ್ 2 ಗಂಟೆ ವಿಳಂಬ…IRCTC ಪ್ರಯಾಣಿಕರಿಗೆ ಪರಿಹಾರ ಕೊಟ್ಟಿದ್ದೆಷ್ಟು?
ಒಂದು ವೇಳೆ ರೈಲು ಆಗಮಿಸುವುದು ವಿಳಂಬವಾದರೆ ಭಾರೀ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.
Team Udayavani, Aug 24, 2021, 12:37 PM IST
ನವದೆಹಲಿ:ಭಾರತದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ಶನಿವಾರ ಮತ್ತು ಭಾನುವಾರದ ಸಂಚಾರದಲ್ಲಿ 2.5 ಗಂಟೆಗಳಷ್ಟು ಕಾಲ ವಿಳಂಬವಾಗಿದ್ದು, ಇದರ ಪರಿಣಾಮ ಇದೇ ಮೊದಲ ಬಾರಿಗೆ ಐಆರ್ ಸಿಟಿಸಿ ಒಟ್ಟು 4.5 ಲಕ್ಷ ರೂಪಾಯಿ ಪರಿಹಾರ ನೀಡುವಂತಾಗಿದೆ.!
ಇದನ್ನೂ ಓದಿ:ವಿಶ್ವನಾಥ್ ಅವರೇ, ನೀವು ಸತ್ಯಸಂಧರ ರೀತಿ ಮಾತಾಡಬೇಡಿ: ಪ್ರತಾಪ್ ಸಿಂಹ
ಶನಿವಾರ ಭಾರೀ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಗ್ನಲ್ ವೈಫಲ್ಯದಿಂದ ತೇಜಸ್ ರೈಲು ಸುಮಾರು ಎರಡೂವರೆ ಗಂಟೆಗಳಷ್ಟು ಕಾಲ ವಿಳಂಬವಾಗಿ ತಲುಪಿತ್ತು. ಭಾನುವಾರವೂ ಕೂಡಾ ಲಕ್ನೋ-ದೆಹಲಿ ರೈಲು ಒಂದು ಗಂಟೆಗಳಷ್ಟು ಕಾಲ ವಿಳಂಬವಾಗಿ ಆಗಮಿಸಿರುವುದಾಗಿ ವರದಿ ತಿಳಿಸಿದೆ.
ಏನಿದು ಪರಿಹಾರ?
ಭಾರತದಲ್ಲಿ ರೈಲು ಸಮಯಕ್ಕೆ ಸರಿಯಾಗಿ ತಲುಪದೇ ವಿಳಂಬವಾದಲ್ಲಿ ಪ್ರಯಾಣಿಕರಿಗೆ ಪರಿಹಾರ ನೀಡುವ ಮೊದಲ ರೈಲು ತೇಜಸ್ ಎಕ್ಸ್ ಪ್ರೆಸ್. ರೈಲು ಒಂದು ಗಂಟೆ ವಿಳಂಬವಾದರೆ ಪ್ರಯಾಣಿಕರು ನೂರು ರೂಪಾಯಿ ಪರಿಹಾರ ಸಿಗುತ್ತದೆ. ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ವಿಳಂಬವಾದರೆ ಪ್ರಯಾಣಿಕರಿಗೆ 250 ರೂಪಾಯಿ ಪರಿಹಾರ ದೊರೆಯುತ್ತದೆ.
ಶನಿವಾರ ತೇಜಸ್ ಎಕ್ಸ್ ಪ್ರೆಸ್ ಎರಡು ಟ್ರಿಪ್ ಗಳ ವಿಳಂಬದಿಂದಾಗಿ ಐಆರ್ ಸಿಟಿಸಿ 1574 ಪ್ರಯಾಣಿಕರಿಗೆ ಒಟ್ಟು 3,93,500 ರೂಪಾಯಿ (ಪ್ರತಿ ಪ್ರಯಾಣಿಕರಿಗೆ 250 ರೂ.) ಪರಿಹಾರದ ಹಣವನ್ನು ಮರು ಪಾವತಿಸಲಾಗಿದೆ. ಅಷ್ಟೇ ಅಲ್ಲ ಭಾನುವಾರ ತೇಜಸ್ ಎಕ್ಸ್ ಪ್ರೆಸ್ ಒಂದು ಗಂಟೆಗಳ ಕಾಲ ವಿಳಂಬವಾಗಿದ್ದಕ್ಕೆ 561 ಪ್ರಯಾಣಿಕರಿಗೆ ತಲಾ 150 ರೂಪಾಯಿಯಂತೆ ಪರಿಹಾರದ ಹಣವನ್ನು ಪಾವತಿಸಲಾಗಿದೆ ಎಂದು ವರದಿ ವಿವರಿಸಿದೆ.
2019ರ ಆಗಸ್ಟ್ 4ರಂದು ವಿಮಾನ ಮಾದರಿ ಸೌಲಭ್ಯಗಳನ್ನೊಳಗೊಂಡ ತೇಜಸ್ ಎಕ್ಸ್ ಪ್ರೆಸ್ ರೈಲನ್ನು ಲಕ್ನೋ ಮತ್ತು ದೆಹಲಿ ನಡುವೆ ಮೊದಲ ಬಾರಿಗೆ ಸಂಚರಿಸಲು ಚಾಲನೆ ನೀಡಲಾಗಿತ್ತು. ಶೇ.99.9ರಷ್ಟು ನಿಗದಿತ ಸಮಯಕ್ಕೆ ರೈಲು ಸಂಚಾರ ಮತ್ತು ತಲುಪುವುದನ್ನು ನಿರ್ವಹಿಸಲಾಗುತ್ತಿದೆ ಎಂದು ಐಆರ್ ಸಿಟಿಸಿ ಹೇಳಿದೆ.
ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಎರಡು ಗಂಟೆಗಳಷ್ಟು ವಿಳಂಬವಾಗಿರುವುದು. ಒಂದು ವೇಳೆ ರೈಲು ಆಗಮಿಸುವುದು ವಿಳಂಬವಾದರೆ ಭಾರೀ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ