ಅಹ್ಮದಾಬಾದ್ನಲ್ಲಿ ಕರ್ಫ್ಯೂ: ಅತಿಥಿಗಳು ಆಗಮಿಸಿದ್ದ 1,700 ವಿವಾಹ ಸಮಾರಂಭ ರದ್ದು!
Team Udayavani, Nov 20, 2020, 8:45 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಮದುವೆ ಎಂದರೆ ವರ್ಷಗಳ ಸಿದ್ಧತೆ. ನಿಶ್ಚಿತಾರ್ಥ ಕಾರ್ಯಕ್ರಮದ ಬಳಿಕ ಏರ್ಪಡುವ ತಯಾರಿಯ ಜತೆಗೆ ಸಂಭ್ರಮ ಮನೆಮಾಡುತ್ತದೆ. ಬಟ್ಟೆ ಶಾಪಿಂಗ್, ಒಡವೆ ಕೊಂಡುಕೊಳ್ಳುವುದು ಮೊದಲಾದ ಕಾರ್ಯಗಳೊಂದಿಗೆ ಭರಪೂರ ಸಿದ್ಧತೆಗಳು ನಡೆಯುತ್ತವೆ. ಮದುವೆಯ ವಾರದ ಮೊದಲು ಅತಿಥಿಗಳು ಆಗಮಿಸುತ್ತಾರೆ. ಸಂಭ್ರಮ ಸಡಗರದ ವಾತಾವರಣ ನೆಲೆಸುತ್ತದೆ.
ಇಂತಹದ್ದೇ ಸಂಭ್ರಮದಲ್ಲಿದ್ದ ಅಹ್ಮದಾಬಾದ್ನ 1700 ಕುಟುಂಬಗಳಿಗೆ ನಿರಾಶೆಯಾಗಿದೆ. ಶನಿವಾರ ಮತ್ತು ರವಿವಾರ ಅತೀ ಹೆಚ್ಚು ವಿವಾಹ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ಆದರೆ ಕೋವಿಡ್ ಹೆಚ್ಚುತ್ತಿರುವುದನ್ನು ಮನಗಂಡು ಯಾವುದೇ ಮುನ್ಸೂಚನೆಯಿಲ್ಲದೆ ವಿಧಿಸಲಾದ ಕರ್ಫ್ಯೂ ವಿವಾಹಿತ ಕುಟುಂಬಗಳನ್ನು ಗೊಂದಲಕ್ಕೀಡು ಮಾಡಿದೆ
ಗುಜರಾತ್ನ ಅಹ್ಮದಾಬಾದ್ನಲ್ಲಿ ಹೆಚ್ಚುತ್ತಿರುವ ಕೋವಿಡ್ ಕಾರಣಕ್ಕೆ ಬೆಳಗ್ಗೆ 9ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಶನಿವಾರ ಮತ್ತು ರವಿವಾರ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಉದ್ಯಾನಗಳು, ಪಾರ್ಟಿ ಪ್ಲಾಟ್ಗಳನ್ನು ಬುಕ್ ಮಾಡಲಾಗಿದೆ, ವೆಡ್ಡಿಂಗ್ ಕಾರ್ಡ್ಗಳನ್ನು ವಿತರಿಸಲಾಗಿದೆ ಮತ್ತು ಅತಿಥಿಗಳು ಸಹ ಆಗಮಿಸಿದ್ದಾರೆ.
ಸುಮಾರು 8 ತಿಂಗಳ ಬಳಿಕ ಶನಿವಾರದಿಂದ ವಿವಾಹಗಳು ಪ್ರಾರಂಭವಾಗುತ್ತಿವೆ. ಈಗ ಈ ಎರಡು ದಿನಗಳು (ಶನಿವಾರ-ರವಿವಾರ) ಕರ್ಫ್ಯೂ ವಿಧಿಸಲಾಗಿದೆ. ಇದರಿಂದ ವಿವಾಹ ಕಾರ್ಯಕ್ರಮ ಏರ್ಪಡಿಸುವ ಉದ್ಯಮಿಗಳಿಗೆ ದೊಡ್ಡ ನಷ್ಟವಾಗಲಿದೆ.
ಎರಡು ದಿನಗಳಲ್ಲಿ 1700 ಮದುವೆಗಳು ನಡೆಯಲಿರುವುದರಿಂದ ಉದ್ಯಾನಗಳು, ಪಾರ್ಟಿ ಪ್ಲಾಟ್ಗಳು, ಡಿಜೆಗಳು ಮತ್ತು ಅನೇಕ ಸಣ್ಣ ಉದ್ಯಮಗಳಿಗೆ ನಿಷೇಧಾಜ್ಞೆ ಭಾರಿ ನಷ್ಟವನ್ನುಂಟು ಮಾಡಲಿದೆ. ವ್ಯವಹಾರ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದೆ. ಅನ್ಲಾಕ್ ಮಾಡಿದ ಬಳಿಕ ಚೇತರಿಕೆಯಾಗುವ ಭರವಸೆ ಇತ್ತು. ಈಗ ಅದೂ ವಿಫಲವಾಗಿದೆ.
ಉತ್ತರ ಭಾರತದಲ್ಲಿ ಈ ಸಮಯದಲ್ಲಿ ಹೆಚ್ಚು ವಿವಾಹ ಕಾರ್ಯಗಳು ನಡೆಯುತ್ತವೆ. ಜೂನ್ 15, 25 ಮತ್ತು 29 ರಂದು ನೂರಾರು ವಿವಾಹಗಳು ನಿಶ್ಚಯವಾಗಿದ್ದವು. ಆದರೆ ವಿವಾಹ ಕಾರ್ಯಗಳಉ ಕೋವಿಡ್ಗೆ ಬಲಿಯಾಗಿವೆ. ಈಗ ಅದೇ ಪರಿಸ್ಥಿತಿ ಮರುಕಳಿಸಲಿವೆ. ನವೆಂಬರ್ 20-21, 26, 30ರಲ್ಲಿ ಹಲವು ಮುಹೂರ್ತಗಳಿವೆ. ಅದರಲ್ಲಿ ಈ ಎರಡು ದಿನಗಳು ಕರ್ಫ್ಯೂನಲ್ಲಿ ಕಳೆದೋಗುತ್ತವೆ. ಈ ದಿನಗಳು ಕಳೆದರೆ ಡಿಸೆಂಬರ್ 1,2,6,7, 8,9,11 ತಾರೀಖಿನಲ್ಲಿ ಮುಹೂರ್ತಗಳಿವೆ. ಲಾಕ್ಡೌನ್ ಪ್ರಕ್ರಿಯೆಯು ಈ ರೀತಿ ಮುಂದುವರಿದರೆ, ವಿವಾಹ ಉದ್ಯಮಗಳು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು