ಕೈಮುಗಿದ್ರು ದಯೆ ತೋರಿಲ್ಲ; ಊಹಾಪೋಹದ ವದಂತಿಗೆ ಮೂವರನ್ನ ಬರ್ಬರವಾಗಿ ಕೊಂದ ಗ್ರಾಮಸ್ಥರು
ಇದರಲ್ಲಿ 70 ವರ್ಷದ ಮುದುಕ ಬಿಟ್ಟು ಬಿಡುವಂತೆ ಗೋಗರೆಯುತ್ತಿದ್ದ ದೃಶ್ಯ ಕೂಡಾ ಸೆರೆಯಾಗಿದೆ.
Team Udayavani, Apr 18, 2020, 8:10 PM IST
3 Men Brutally Killed By Mob In Maharashtra
ಮುಂಬೈ:ಮಕ್ಕಳನ್ನು ಅಪಹರಿಸಿ ಕಿಡ್ನಿ ಸೇರಿದಂತೆ ಇತರೆ ಅಂಗಾಂಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಬಂದಿದ್ದಾರೆ ಎಂಬ ಊಹಾಪೋಹಕ್ಕೆ 70 ವರ್ಷದ ಮುದುಕು ಸೇರಿದಂತೆ ಮೂವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮುಂಬೈನಿಂದ 125 ಕಿಲೋ ಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ಪಾಲ್ಗಾಢ್ ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಗುರುವಾರ ರಾತ್ರಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಡ್ ಚಿಂಚಾಲೆ ಗ್ರಾಮದ ಉದ್ರಿಕ್ತ ಗ್ರಾಮಸ್ಥರು ಕಬ್ಬಿಣದ ಸಲಾಕೆ, ದೊಣ್ಣೆ, ಕಲ್ಲು ದೊಣ್ಣೆಗಳಿಂದ 70ವರ್ಷದ ಮುದುಕ ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಅವರನ್ನು ತಪ್ಪಿಸಲು ಯತ್ನಿಸಿದ ಪೊಲೀಸ್ ತಂಡದ ಮೇಲೂ ದಾಳಿ ನಡೆಸಿದ್ದರು. ಸಾವನ್ನಪ್ಪಿದವರಲ್ಲಿ ಇಬ್ಬರು ಸಾಧುಗಳಾಗಿದ್ದು, ಮೂರನೇ ವ್ಯಕ್ತಿ ಕಾರಿನ ಚಾಲಕ ಎಂದು ವರದಿ ವಿವರಿಸಿದೆ.
ಮತ್ತೊಂದು ವಿಡಿಯೋದಲ್ಲಿ, ಹೊಡೆಯುತ್ತಿದ್ದ ವ್ಯಕ್ತಿಯೊಬ್ಬ ಹಲೋ ಇವರಿಗೆ ಹೊಡೆಯಿರಿ ಎಂದು ಬೊಬ್ಬೆ ಹೊಡೆಯುತ್ತಿದ್ದ. ಇದರಲ್ಲಿ 70 ವರ್ಷದ ಮುದುಕ ಬಿಟ್ಟು ಬಿಡುವಂತೆ ಗೋಗರೆಯುತ್ತಿದ್ದ ದೃಶ್ಯ ಕೂಡಾ ಸೆರೆಯಾಗಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವುದು ವಿಡಿಯೋದಲ್ಲಿದೆ ಎಂದು ವರದಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸರು ತಲುಪಿದ ನಂತರ ಮೂವರು ಸಂತ್ರಸ್ತರನ್ನು ಪೊಲೀಸ್ ಜೀಪ್ ನಲ್ಲಿ ಕುಳ್ಳಿರಿಸಿದ್ದರು. ಆದರೆ ಆಕ್ರೋಶಗೊಂಡ ಗುಂಪು ಮತ್ತೆ ಮೂವರನ್ನು ಹೊರಗೆಳೆದು ಹಲ್ಲೆ ನಡೆಸಿತ್ತು. ಈ ಸಂದರ್ಭದಲ್ಲಿ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು. ಆದರೂ ಅವರನ್ನೆಲ್ಲಾ ಆಸ್ಪತ್ರೆಗೆ ಕರೆದೊಯ್ದರು ಕೂಡಾ ಅಷ್ಟರಲ್ಲಿಯೇ ಪ್ರಾಣ ಹೋಗಿರುವುದಾಗಿ ವೈದ್ಯರು ತಿಳಿಸಿದ್ದರು.ಪ್ರಕರಣದ ಬಗ್ಗೆ ತನಿಖೆ ನಡೆಸಿ 110 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೈಲಾಶ್ ಶಿಂಧೆ ತಿಳಿಸಿದ್ದಾರೆ.
ನಾನು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ಯಾವ ಊಹಾಪೋಹವನ್ನು ನಂಬಬೇಡಿ. ಯಾರೊಬ್ಬರೂ ನಿಮ್ಮ ಮಕ್ಕಳ ಕಿಡ್ನಿ ಕದಿಯಲು ಹಳ್ಳಿಗೆ ಬಂದಿಲ್ಲ. ಗ್ರಾಮಸ್ಥರು ತಾವೇ ಕಾನೂನನ್ನು ಕೈಗೆತ್ತಿಕೊಂಡಿದ್ದು, ನಾವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕೈಲಾಶ್ ಶಿಂಧೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ