ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಕಾವೇರಿ ಪಾಲು
Team Udayavani, Jun 5, 2019, 4:25 PM IST
ಕುಶಾಲನಗರ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದದುರ್ಘಟನೆ ಬುಧವಾರ ಮಧ್ಯಾಹ್ನಕುಶಾಲನಗರದಲ್ಲಿ ನಡೆದಿದೆ.
ಮೃತರು ಮಡಿಕೇರಿ ಜ್ಯೂನಿಯರ್ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಾದ ಆಕಾಶ್, ಗಗನ್ ಮತ್ತು ಶಶಾಂಕ್ ಎಂದು ತಿಳಿದು ಬಂದಿದೆ.
ರಂಜಾನ್ ರಜೆ ನಿಮಿತ್ತ ನೀರಿನಲ್ಲಿ ಆಟವಾಡಲೆಂದು ಬಂದಿದ್ದು, ಈಜು ಬಾರದ ಓರ್ವನನ್ನು ರಕ್ಷಿಸಲು ಮುಂದಾಗಿ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯರು, ಅಗ್ನಿಶಾಮಕದಳದ ಸಿಬಂದಿಗಳು ಮತ್ತು ಪೊಲೀಸರ ಸಮಕ್ಷಮದಲ್ಲಿ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ.
ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.