“35 ಎ’ ತಂಟೆಗೆ ಬಂದರೆ ಹುಷಾರ್: ಮುಫ್ತಿ ಬೆದರಿಕೆ
Team Udayavani, Feb 26, 2019, 12:30 AM IST
ಹೊಸದಿಲ್ಲಿ: ಸಂವಿಧಾನದ “35- ಎ’ ಪರಿಚ್ಛೇದದ ತಂಟೆಗೆ ಕೇಂದ್ರ ಸರಕಾರ ಬಂದರೆ, ಜಮ್ಮು-ಕಾಶ್ಮೀರದ ಜನತೆ ಯಾವ ಧ್ವಜವನ್ನು ಹಿಡಿಯುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುಡುಗಿದ್ದಾರೆ.
ಶ್ರೀನಗರದಲ್ಲಿ ಸೋಮವಾರ ಸುದ್ದಿ, ಗೋಷ್ಠಿ ನಡೆಸಿದ ಅವರು, “”ಕೇಂದ್ರ ಸರಕಾರ ಬೆಂಕಿಯೊಡನೆ ಸರಸ ಆಡು ವುದನ್ನು ಬಿಡಬೇಕು. 35-ಎ ಪರಿಚ್ಛೇದ ತೆಗೆದುಹಾಕಲು ಪ್ರಯತ್ನಪಟ್ಟರೆ 1947 ರಿಂದ ಈವರೆಗೆ ಘಟಿಸದಂಥ ಘಟನೆಗಳು ನಡೆದುಹೋಗುತ್ತವೆ” ಎಂದು ಅವರು ಎಚ್ಚರಿಸಿದ್ದಾರೆ. ಇದೇ ವಾರದಲ್ಲಿ 35-ಎ ಪರಿಚ್ಛೇದದ ಔಚಿತ್ಯದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಆರಂಭ ವಾಗಲಿದ್ದು, ಅದಕ್ಕೂ ಮುನ್ನವೇ ಮುಫ್ತಿಯವರ ಈ ಹೇಳಿಕೆ ರಾಜಕೀ ಯವಾಗಿ ಮಹತ್ವ ಪಡೆದಿದೆ. “35 -ಎ’ ಪರಿಚ್ಛೇದವು, ಕಾಶ್ಮೀರ ರಾಜ್ಯ ಸರಕಾರಕ್ಕೆ ತನ್ನಲ್ಲಿನ ನಿವಾಸಿಗಳಿಗೆ ಶಾಶ್ವತ ನಿವಾಸಿ ಸ್ಥಾನಮಾನ ನೀಡುವುದು, ಅವರಿಗೆ ವಿಶೇಷ ಹಕ್ಕು- ಸವಲತ್ತುಗಳನ್ನು ಕಲ್ಪಿಸುವ ಅಧಿಕಾರ ನೀಡುತ್ತದೆ. ಇದರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿವೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನ ಮಾನದಲ್ಲಿ ಮೂಗು ತೂರಿಸಲು ಬಂದರೆ, ಗಂಭೀರ ಹಾಗೂ ದೀರ್ಘ ಕಾಲಿಕ ಪರಿಣಾಮ ಎದುರಿಸ ಬೇಕಾಗುತ್ತದೆ. ಇದು ಬೆದರಿಕೆಯಲ್ಲ. ನಿಮ್ಮನ್ನು ಎಚ್ಚರಿಸು ವುದು ನನ್ನ ಕರ್ತವ್ಯ. ಉಳಿದಿದ್ದು ನಿಮಗೆ ಬಿಟ್ಟಿದ್ದೇನೆ.
ಒಮರ್ ಅಬ್ದುಲ್ಲಾ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ