ದೆಹಲಿ ಗೋಶಾಲೆಯಲ್ಲಿ 36 ಹಸುಗಳ ದಿಢೀರ್ ಸಾವು, ತನಿಖೆಗೆ ಆದೇಶ
Team Udayavani, Jul 28, 2018, 12:41 PM IST
ನವದೆಹಲಿ:ಗೋಶಾಲೆಯಲ್ಲಿ ಸುಮಾರು 36 ಹಸುಗಳು ಸಾವನ್ನಪ್ಪಿರುವ ಘಟನೆ ದ್ವಾರಕ ಸಮೀಪದ ನಜಾಫ್ ಘರ್ ಪ್ರದೇಶದ ಗೋಶಾಲೆಯಲ್ಲಿ ಶುಕ್ರವಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಸರ್ಕಾರ ಆದೇಶ ನೀಡಿದೆ.
ಗುಮ್ನೆಹ್ರಾ ಗ್ರಾಮದ ಗೋಶಾಲೆಯಲ್ಲಿ 36 ಗೋವುಗಳನ್ನು ಸಾವನ್ನಪ್ಪಿರುವುದಾಗಿ ಚಾವ್ಲಾ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಗೋಶಾಲೆಯಲ್ಲಿ 1,400 ಗೋವುಗಳಿದ್ದು ಅದರಲ್ಲಿ 36 ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಯಾವ ಕಾರಣದಿಂದ ಗೋವುಗಳು ಸಾವನ್ನಪ್ಪಿವೆ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಪಶುವೈದ್ಯರ ತಂಡ ಸಾವನ್ನಪ್ಪಿರುವ ಗೋವುಗಳ ಪೋಸ್ಟ್ ಮಾರ್ಟ್ಂ ವರದಿ ಬಂದ ನಂತರ ಮಾಹಿತಿ ದೊರೆಯಲಿದೆ ಎಂದು ವರದಿ ವಿವರಿಸಿದೆ.
1995ರಲ್ಲಿ ಆಚಾರ್ಯ ಸುಶೀಲ್ ಗೋಸಾದನ್ ಟ್ರಸ್ಟ್ ಗೆ ಸುಮಾರು 20 ಎಕರೆ ಜಾಗ ನೀಡಲಾಗಿದ್ದು, ಈ ಟ್ಟಸ್ಟ್ ಗೋಶಾಲೆಯನ್ನು ನಡೆಸುತ್ತಿದೆ. ಇಲ್ಲಿ 20 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ