ಉತ್ತರ ಪ್ರದೇಶದಲ್ಲಿ ಪತ್ತೆಯಾದ 3,800 ವರ್ಷ ಹಳೇ ಸ್ಮಶಾನ!
ಉತ್ತರ ಪ್ರದೇಶದಲ್ಲಿ ವರ್ಷಗಳ ಹಿಂದೆ ಪತ್ತೆಯಾಗಿದ್ದ ಸಮಾಧಿಗಳ ಸ್ಥಳ
Team Udayavani, Feb 22, 2020, 8:57 PM IST
– ಕಾರ್ಬನ್ ಡೇಟಿಂಗ್ ತಂತ್ರಜ್ಞಾನದಿಂದ ಕಾಲದ ಕರಾರುವಾಕ್ ಪತ್ತೆ
– ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ತಜ್ಞರಿಂದ ಪ್ರಕಟಣೆ
– ದೆಹಲಿಯಿಂದ 68 ಕಿ.ಮೀ. ದೂರದ ಬಾಗ್ಪತ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಸ್ಮಶಾನ
– 2005ರಲ್ಲಿ ಮೊದಲು ಭಾಗಶಃ ಉತ್ಖನನಗೊಂಡಿದ್ದ ರುದ್ರಭೂಮಿ
ನವದೆಹಲಿ: ಉತ್ತರ ಪ್ರದೇಶದಲ್ಲಿ 2005ರಿಂದೀಚೆಗೆ ಹಂತಹಂತವಾಗಿ ಉತ್ಖನನದ ಮೂಲಕ ಪತ್ತೆಯಾದ ವಿಶಾಲವಾದ ಸ್ಮಶಾನ 3,800 ವರ್ಷಗಳಷ್ಟು ಹಿಂದಿನದ್ದಾಗಿದ್ದು, ಕಾರ್ಬನ್ ಡೇಟಿಂಗ್ ತಂತ್ರಜ್ಞಾನದಿಂದ ಇದರ ಕಾಲವನ್ನು ಅಳೆಯಲಾಗಿದೆ ಎಂದು ಭಾತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ (ಎಎಸ್ಐ) ತಜ್ಞರು ಹೇಳಿದ್ದಾರೆ.
ದೆಹಲಿಯಿಂದ ಕೇವಲ 68 ಕಿ.ಮೀ. ದೂರವಿರುವ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಗೆ ಸೇರಿದ ಸನೌಲಿಯ ಬಳಿಯಿರುವ ಈ ಸ್ಮಶಾನದ ಒಂದು ಭಾಗ ಉತ್ಖನನದ ವೇಳೆ 2005ರಲ್ಲಿ ಮೊದಲ ಬಾರಿಗೆ ಗೋಚರಿಸಿತ್ತು.
ಆನಂತರ, 2018ರಲ್ಲಿ ಉತ್ಖನನವನ್ನು ಪುನರಾರಂಭಿಸಿದಾಗ ಭೂಗರ್ಭದಲ್ಲಿ 120 ಸಮಾಧಿಗಳು ಪತ್ತೆಯಾಗಿದ್ದವು.
ಪ್ರತಿಯೊಂದು ಸಮಾಧಿಗೂ ಒಂದೊಂದು ಪುಟ್ಟ ಕೋಣೆಯನ್ನು ಕಟ್ಟಲಾಗಿದ್ದು, ಅದರಲ್ಲಿ ಅಲಂಕೃತ ಕಾಲುಗಳುಳ್ಳ ಶವಪೆಟ್ಟಿಗೆಗಳಲ್ಲಿ ಶವ ಹಾಗೂ ಅಕ್ಕಿ ಮುಂತಾದ ವಸ್ತುಗಳನ್ನು ಇಟ್ಟು ಮಣ್ಣು ಮಾಡಲಾಗಿರುವುದು ಅವುಗಳ ಅಧ್ಯಯನದಿಂದ ತಿಳಿದುಬಂದಿತ್ತು.
ಇದು ಆ ಪ್ರಾಂತ್ಯದಲ್ಲಿ ಶತಮಾನಗಳ ಹಿಂದೆ ಇದ್ದ ಬುಡಕಟ್ಟು ಸಮುದಾಯದ ಸಮಾಧಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ಸ್ಮಶಾನದ ಜೊತೆಗೆ, ಮಣ್ಣಿನಿಂದ ಮಾಡಿದ ಮಡಕೆ ಮತ್ತಿತರ ಮನೆ ಬಳಕೆ ವಸ್ತುಗಳು, ಕುದುರೆ ಗಾಡಿ, ನಾಲ್ಕು ಕಾಲುಗಳುಳ್ಳ ಶವಪೆಟ್ಟಿಗೆಗಳು, ತಾಮ್ರದ ಒಂದು ಕತ್ತಿ, ಗುರಾಣಿಗಳು ಸಿಕ್ಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ