ಲೈಫ್ಗಾರ್ಡ್ ಎಚ್ಚರಿಕೆಗೆ ನಿರ್ಲಕ್ಷ್ಯ: ಜುಹು ಬೀಚ್ನಲ್ಲಿ ಮುಳುಗಿದ ನಾಲ್ವರು ಬಾಲಕರು
Team Udayavani, Jun 13, 2023, 9:20 AM IST
ಮುಂಬಯಿ: ಸಮುದ್ರಕ್ಕಿಳಿದ ನಾಲ್ವರು ಬಾಲಕರು ನಾಪತ್ತೆಯಾಗಿರುವ ಘಟನೆ ಮುಂಬಯಿಯ ಜುಹು ಬೀಚ್ ನಲ್ಲಿ ಸೋಮವಾರ ಸಂಜೆ (ಜೂ.12 ರಂದು) ನಡೆದಿದೆ.
ಪಿಕ್ ನಿಕ್ ಮಾಡಿಕೊಂಡು ಬಂದ 8 ಜನರ ಗುಂಪೊಂದು ಸೋಮವಾರ ಸಂಜೆ ಜುಹು ಬೀಚ್ ಗೆ ಇಳಿದಿದ್ದಾರೆ. ಬೈಪರ್ ಜಾಯ್ ಚಂಡಮಾರುತದ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಯಾರು ಇಳಿಯದಂತೆ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಲೈಫ್ ಗಾರ್ಡ್ ಬಾಲಕರನ್ನು ತಡೆಯಲು ಯತ್ನಿಸಿದ್ದಾರೆ. ಸಮುದ್ರಕ್ಕೆ ಇಳಿಯಬೇಡಿ ಎಂದು ಎಚ್ಚರಿಸಿದ್ದಾರೆ. ಆದರೆ ಅವರ ಮಾತನ್ನು ಕೇಳದೆ 5 ಮಂದಿ ಸಮುದ್ರಕ್ಕೆ ಇಳಿದಿದ್ದಾರೆ.
ಅಲೆಗಳ ಅಬ್ಬರಕ್ಕೆ ಸಿಲುಕಿ ಬಾಲಕರು ಮುಳುಗಿದ್ದು, ಒಬ್ಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮುಳುಗಿದ ನಾಲ್ವರನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆಯನ್ನು ಸತತ 5 ಗಂಟೆ ನಡೆಸಿದ್ದಾರೆ. ಯಾವುದೇ ಪ್ರಯೋಜನವಾಗದ ಕಾರಣ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ.
ನಾಪತ್ತೆಯಾದ ನಾಲ್ವರು ಬಾಲಕರು ಸಾಂತಾಕ್ರೂಜ್ ಪೂರ್ವದ ವಕೋಲಾದಲ್ಲಿರುವ ದತ್ತ ಮಂದಿರ ಪ್ರದೇಶದ ನಿವಾಸಿಗಳು ಎಂದು ಹೇಳಲಾಗಿದೆ.
ನೀರಿಗಿಳಿದ ಐವರಲ್ಲಿ ದೀಪೇಶ್ ಕರಣ್ (16) ಜೆಟ್ಟಿಯ ಬಳಿ ತೂಗಾಡುವ ಹಗ್ಗವನ್ನು ಹಿಡಿದು ಮೇಲಕ್ಕೆ ಬಂದಿದ್ದಾನೆ.
ಧರ್ಮೇಶ್ ಭುಜೀಯವ್ (15), ಜಯ್ ತಜ್ಭಾರಿಯಾ (16), ಮತ್ತು ಸಹೋದರರಾದ ಮನೀಶ್ (15) ಮತ್ತು ಶುಭಂ ಭೋಗಾನಿಯಾ (16) ಎಂಬುವರು ನೀರಿನಲ್ಲಿ ಮುಳುಗಿದ್ದು, ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಬದುಕುಳಿದ ಕರಣ್ ಅವರನ್ನು ಅವರ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!