ಟೈರ್ ಸಿಡಿದು ಕಾರು ಮರಕ್ಕೆ ಢಿಕ್ಕಿ; ನಾಲ್ವರ ದಾರುಣ ಸಾವು
Team Udayavani, Mar 26, 2019, 11:25 AM IST
ಕರೀಮ್ ನಗರ, ತೆಲಂಗಾಣ : ನೆರೆಯ ಜಗ್ತಿಯಾಲ್ ಜಿಲ್ಲೆಯಲ್ಲಿ ಕಾರೊಂದರ ಎದುರು ಚಕ್ರ ಸಿಡಿದ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಇಬ್ಬರು ದಂಪತಿ (ನಾಲ್ಕು ಮಂದಿ) ಮೃತ ಪಟ್ಟಿರುವುದಾಗಿ ಪೊಲೀಸರು ಇಂದು ಮಂಗಳವಾರ ತಿಳಿಸಿದ್ದಾರೆ.
ಈ ಅವಘಡವು ಧರ್ಮಾರಮ್ ಗ್ರಾಮಕ್ಕೆ ಸಮೀಪ ನಡೆದಿದೆ. ಕೋಡಿಮಾಲ್ ಗ್ರಾಮದ ಕೊಂಡೂರಿ ಮನೋಹರ್ ಅವರು ಪತ್ನಿ ಹಾಗೂ ತನ್ನ ಹಿರಿಯ ಸಹೋದರಿ ಮತ್ತು ಆಕೆಯ ಪತಿಯ ಜತೆಗೆ ಕಾರಿನಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು.
ಕಾರು ಚಲಾಯಿಸುತ್ತಿದ್ದ ಮನೋಹರ್ (56) ಮತ್ತು ವೀರೇಶಾಮ್ (78) ಸ್ಥಳದಲ್ಲೇ ಮೃತಪಟ್ಟರು ಎಂದು ಪೆದ್ದಪಳ್ಳಿ ಸಹಾಯಕ ಪೊಲೀಸ್ ಕಮಿಷನರ್ ವೆಂಕಟ ರಮಣ ರೆಡ್ಡಿ ತಿಳಿಸಿದರು.
ವೀರೇಶಾಮ್ ಅವರ 70ರ ಹರೆಯದ ಪತ್ನಿ ನಿನ್ನೆ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟರೆ ಮನೋಹರ್ ಅವರ ಪತ್ನಿ ಇಂದು ಮಂಗಳವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು ಎಂದು ರೆಡ್ಡಿ ತಿಳಿಸಿದರು.
ತೆಲಂಗಾಣ, ಟೈರ್ ನ್ಪೋಟ, ಕಾರು ಮರಕ್ಕೆ ಢಿಕ್ಕಿ,