ಬಿಜೆಪಿ ಕಾರ್ಯಕರ್ತನ ಹತ್ಯೆ: 5 ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ
Team Udayavani, Jun 25, 2018, 7:35 PM IST
ಕಣ್ಣೂರು : ಉತ್ತರ ಕೇರಳದ ರಾಜಕೀಯ ಸೂಕ್ಷ್ಮತೆಯ ಕಣ್ಣೂರು ಜಿಲ್ಲೆಯಲ್ಲಿ 2008ರಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕೊಂದ ಅಪರಾಧಕ್ಕಾಗಿ ಐವರು ಸಿಪಿಎಂ ಕಾರ್ಯಕರ್ತರಿಗೆ ತಲಶೇರಿಯ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಮತ್ತು ತಲಾ 50,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೆ ಗುರಿಯಾದವರೆಂದರೆ ಕೆ ಶ್ರೀಜಿತ್ (39), ವಿ ಬಿನಯ್ (31), ಕೆ ಪಿ ಮನಾಫ್ (42), ಪಿ ಪಿ ಸುನೀಲ್ ಕುಮಾರ್ (51) ಮತ್ತು ಸಿ ಕೆ ಮಸೂದ್ (34).
ಈ ಕೊಲೆ ಕೇಸಿನಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳಿದ್ದರು. ಅವರ ಪೈಕಿ ಒಬ್ಟಾತ ವಿಚಾರಣೆ ನಡೆಯುತ್ತಿದ್ದಾಗ ಮೃತಪಟ್ಟಿದ್ದ; ಉಳಿದಿಬ್ಬರನ್ನು ನ್ಯಾಯಾಲಯ ಸಾಕ್ಷ್ಯಾಧಾರಾದ ಕೊರತೆಯಿಂದಾಗಿ ಖುಲಾಸೆಗೊಳಿಸಿತ್ತು.
2008ರ ಮಾರ್ಚ್ 5ರಂದು ಲಾರಿ ಕ್ಲೀನರ್, 23ರ ಹರೆಯದ ನಿಖೀಲ್ ಎಂಬಾತನನ್ನು ರಾಜಕೀಯ ದ್ವೇಷದಲ್ಲಿ, ವಾಹನದಿಂದ ಹೊರಗೆಳೆದು ಕೊಚ್ಚಿ ಕೊಲೆಗೈಯಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!