507 ಕೋಟಿ ದೇಣಿಗೆ: ತಿಮ್ಮಪ್ಪನ ಅಕೌಂಟ್ಗೆ ಹರಿದು ಬಂತು ಹಣ
Team Udayavani, Apr 6, 2019, 6:00 AM IST
ಹೈದರಾಬಾದ್: ದೇಶದ ಶ್ರೀಮಂತ ದೇಗುಲಗಳ ಪೈಕಿ
ಒಂದಾಗಿರುವ ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ
ದೇಗುಲಕ್ಕೆ ಸಂದಾಯವಾದ ದೇಣಿಗೆ ಪ್ರಮಾಣ
ಗಣನೀಯವಾಗಿ ಏರಿಕೆ ಆಗಿದೆ. 2018-19ರ ವಿತ್ತೀಯ ವರ್ಷದಲ್ಲಿ ಒಟ್ಟು 507 ಕೋಟಿ ರೂ. ದೇಣಿಗೆ ಲಭ್ಯವಾಗಿದ್ದು, ಇದು ಕಳೆದ ಸಾಲಿಗಿಂತ 206 ಕೋಟಿ ರೂ. ಹೆಚ್ಚುವರಿ ಸಂಗ್ರಹ. 2017-18 ರ ವಿತ್ತವರ್ಷದಲ್ಲಿ 301 ಕೋಟಿ ರೂ. ಸಂಗ್ರಹವಾಗಿತ್ತು ಎಂದು ದೇಗುಲದ ಕಾರ್ಯನಿರ್ವಹಣಾ ಧಿಕಾರಿ ಅನಿಲ್ ಕುಮಾರ್ ಸಿಂಘಲ್ ಈ ಮಾಹಿತಿ ನೀಡಿದ್ದಾರೆ.
ದೇವಾಲಯಕ್ಕೆ ಅತ್ಯಂತ ಹೆಚ್ಚಿನ ಆದಾಯ ಲಭ್ಯವಾಗುವ ಬಗ್ಗೆ ಮಾತನಾಡಿದ ಸಿಂಘಲ್, ಅತಿ ಹೆಚ್ಚು ಹಣ ಹುಂಡಿಯಿಂದ ಲಭ್ಯವಾಗುತ್ತಿದೆ. ಈ ಬಾರಿ ತಿರುಪತಿ ದೇಗುಲದ ಹುಂಡಿಯಲ್ಲಿ 1,214 ಕೋಟಿ ರೂ. ಸಂಗ್ರಹ ವಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೊತ್ತ 67 ಕೋಟಿ ರೂ ಹೆಚ್ಚಳವಾಗಿದೆ. 2017-18ರ ವಿತ್ತ ವರ್ಷದಲ್ಲಿ ಹುಂಡಿಗೆ 1, 147 ಕೋಟಿ ರೂ. ಲಭ್ಯವಾಗಿತ್ತು. 2018-19ರಲ್ಲಿ ಅನ್ನ ಪ್ರಸಾದಂ ಟ್ರಸ್ಟ್ಗೆ 140 ಕೋಟಿ ರೂ. ಲಭ್ಯವಾಗಿದ್ದು, ಹಿಂದಿನ ವರ್ಷ 127 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನೊಂದೆಡೆ ಬಿಐಆರ್ಆರ್ಡಿ ಟ್ರಸ್ಟ್ಗೆ 21 ಕೋಟಿ ರೂ, ಎಸ್ವಿ ಸರ್ವ ಶ್ರೇಯ ಟ್ರಸ್ಟ್ಗೆ 10.40 ಕೋಟಿ ರೂ ಎಸ್ವಿ ವಿದ್ಯಾ ದಾನ ಟ್ರಸ್ಟ್ಗೆ 11.37 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.
1,214 ಕೋಟಿ ರೂ. ಹುಂಡಿಯಿಂದ ಸಂಗ್ರಹವಾದದ್ದು
17 ಕೋಟಿ ರೂ. ಹಿಂದಿನ ವರ್ಷದ ಸಂಗ್ರಹ
1,147 ಕೋಟಿ ರೂ 2017-18ರಲ್ಲಿ ಸಂಗ್ರಹವಾದದ್ದು
140 ಕೋಟಿ ರೂ. ಅನ್ನಪ್ರಸಾದಂ ಟ್ರಸ್ಟ್ (2018-19)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್