ಸ್ವ-ಸಜೀವ ದಹನಕ್ಕೆ ಯತ್ನ : ಒಂದೇ ಕುಟುಂಬದ 8 ಮಂದಿ ಜೈಲು ಪಾಲು
Team Udayavani, Jul 24, 2017, 5:02 PM IST
ಕೊಯಮುತ್ತೂರು : ಸ್ವಂತ ಮನೆ ನಿರ್ಮಾಣದ ಜಾಗಕ್ಕೆ ಪಟ್ಟಾ ನೀಡಲು ವರ್ಷ ಮೀರಿ ವಿಳಂಬಿಸುತ್ತಿರುವುದನ್ನು ಪ್ರತಿಭಟಿಸಲು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ, ಕೂಲಿ ಕೆಲಸದ ಒಂದೇ ಕುಟುಂಬದ ಎಂಟು ಮಂದಿ ಸ್ವ-ಸಜೀವ ದಹನಕ್ಕೆ ಯತ್ನಿಸಿ ಅಂತಿಮವಾಗಿ ಜೈಲು ಪಾಲಾದ ಘಟನೆ ವರದಿಯಾಗಿದೆ.
ನಗರದ ಹೊರವಲಯದ ಸೂಳೂರು ಎಂಬಲ್ಲಿನ ನಿವಾಸಿಯಾಗಿರುವ ಕೂಲಿ ಕಾರ್ಮಿಕ ಶರವಣನ್ ಎಂಬಾತ ವರ್ಷದ ಹಿಂದೆ ತಾನು ಮನೆ ಕಟ್ಟಿಕೊಳ್ಳುವ ಜಾಗಕ್ಕೆ ಪಟ್ಟಾ ನೀಡಬೇಕೆಂದು ಒತ್ತಾಯಿಸಿ ಸ್ವ-ಸಜೀವ ದಹನಕ್ಕೆ ಯತ್ನಿಸಿದ್ದ. ಆಗ ಪೊಲೀಸರು ಮತ್ತು ಜಿಲ್ಲಾ ಆಡಳಿತಾಧಿಕಾರಿಗಳು ಆತನನ್ನು ತಡೆದು ಜಿಲ್ಲಾಧಿಕಾರಿಗೆ ಆತನ ದೂರಿನ ಪೂರ್ತಿ ವಿವರ ನೀಡಿ ಆತನಿಗೆ ಪಟ್ಟಾ ದೊರಕಿಸಿಕೊಡುವ ಭರವಸೆ ನೀಡಿದ್ದರು.
ಅದಾಗಿ ವರ್ಷವೊಂದು ಸಂದರೂ ಶರವಣನ್ಗೆ ಪಟ್ಟಾ ಸಿಗಲಿಲ್ಲ. ಇಂದು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಅಹವಾಲು ದಿನವಾಗಿತ್ತು. ಹಾಗಾಗಿ ಶರವಣನ್ ಜತೆಗೆ ಪತ್ನಿ ಸಹಿತ ಆತನ ಮನೆಯ 11 ಸದಸ್ಯರು ಬಂದಿದ್ದರು. ಆದರೂ ಪಟ್ಟಾ ಸಿಗುವ ಸಾಧ್ಯತೆ ಕಂಡು ಬಾರದಿದ್ದಾಗ ಶರವಣನ್ ಸಹಿತ ಒಟ್ಟು ಎಂಟು ಮಂದಿ ಸ್ವ-ಸಜೀವ ದಹನಕ್ಕೆ ಮುಂದಾದರು.
ಪೊಲೀಸರು ಕೂಡಲೇ ಅವರ ಮೇಲೆರಗಿ ದುರಂತವನ್ನು ತಪ್ಪಿಸಿ ಬಳಿಕ ಅವರನ್ನು ಜೈಲಿಗೆ ಕರೆದೊಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ