ಕಾರ್ಗಿಲ್ ಯುದ್ಧದಲ್ಲಿ ಕೂದಲೆಳೆಯಲ್ಲಿ ಪಾರಾಗಿದ್ದ ಷರೀಫ್, ಮುಶರ್ರಫ್
Team Udayavani, Jul 24, 2017, 4:35 PM IST
ಹೊಸದಿಲ್ಲಿ : ಕಾರ್ಗಿಲ್ ಯುದ್ಧದ ಸಂದರ್ಭ – 1999ರ ಜೂನ್ 24ರಂದು ಸೋಮವಾರ ಬೆಳಗ್ಗೆ 8.45ರ ಹೊತ್ತು – ಗಡಿ ನಿಯಂತ್ರಣದಾಚೆಗಿನ ಪಾಕಿಸ್ಥಾನದ ಗುಲ್ತೇರಿ ಸೇನಾ ನೆಲೆಯ ಮೇಲೆ ಭಾರತೀಯ ವಾಯು ಪಡೆಯ ಫೈಟರ್ ಜೆಟ್ ಜಾಗ್ವಾರ್ ವಿಮಾನ ಬಾಂಬ್ ಹಾಕಲು ಸಜ್ಜಾಗಿತ್ತು. ರಾಡಾರ್ನಲ್ಲಿ ಗುರಿಯನ್ನೂ ನಿಗದಿಸಲಾಗಿತ್ತು.
ಆದರೆ ಕೊನೇ ಕ್ಷಣದಲ್ಲಿ, ಗುಲ್ತೇರಿ ಸೇನಾ ನೆಲೆಯಲ್ಲಿ ಪಾಕ್ ಅಧ್ಯಕ್ಷ ನವಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಪರ್ವೇಜ್ ಮುಶರ್ರಫ್ ಇದ್ದಾರೆನ್ನುವುದು ಗೊತ್ತಾಯಿತು. ಹಾಗಾಗಿ ವಿಮಾನದ ಪೈಲಟ್ಗೆ ಗುರಿಯನ್ನು ಕೊಂಚ ಬದಲಾಯಿಸಲು ಸೂಚಿಸಲಾಯಿತು.
ಗುರಿ ಬದಲಿಸಲ್ಪಟ್ಟ ಬಾಂಬ್ ಎಲ್ಓಸಿಯ ಈಚೆ, ಭಾರತೀಯ ಗಡಿ ಭಾಗದಲ್ಲಿ ಯಾವುದೇ ಹಾನಿ ಉಂಟು ಮಾಡದ ರೀತಿಯಲ್ಲಿ ಬಿತ್ತು. ಪರಿಣಾಮವಾಗಿ ನವಾಜ್ ಷರೀಫ್, ಪರ್ವೇಜ್ ಮುಶರ್ರಫ್ ಬದುಕುಳಿದರು. ಒಂದೊಮ್ಮೆ ಕೊನೇ ಕ್ಷಣದ ನಿರ್ಧಾರ ಬದಲಾಗದಿರುತ್ತಿದ್ದರೆ ಷರೀಫ್ ಮತ್ತು ಮುಶರ್ರಫ್ ಅಂದೇ ಇಹಲೋಕ ತ್ಯಜಿಸುತ್ತಿದ್ದರು.
ಕಾರ್ಗಿಲ್ ಯುದ್ಧದ ಅಂದಿನ ಈ ಘಟನಾವಳಿ ಕುರಿತ ಅಧಿಕೃತ ದಾಖಲೆ ಪತ್ರ “ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ಸಿಕ್ಕಿದ್ದು ಈ ನಿಗೂಢ ವಿಷಯವು ಈಗ ಬಹಿರಂಗವಾಗಿದೆ.
”1999 ಜೂನ್ 24ರಂದು ಬೆಳಗ್ಗೆ 8.45ರ ಹೊತ್ತಿಗೆ ಎಲ್ಓಸಿ ಆಚೆಗಿನ ಪ್ರದೇಶದಲ್ಲಿ ಬಾಂಬ್ ಎಸೆಯಲು ನಿಯುಕ್ತವಾಗಿದ್ದ ಜಾಗ್ವಾರ್ ಫೈಟರ್ ಜೆಟ್ನ ಕಾಕ್ಪಿಟ್ ಲೇಸರ್ ಡೆಸಿಗ್ನೇಶನ್ ಸಿಸ್ಟಮ್ ನಲ್ಲಿ 4388 ಸಂಖ್ಯೆಯ ಗುರಿಯನ್ನು ಸಜ್ಜುಗೊಳಿಸಲಾಗಿತ್ತು. ಅದು ಪಾಕಿಸ್ಥಾನದ ಗುಲ್ತೇರಿ ಸೇನಾ ನೆಲೆಯಾಗಿತ್ತು. ಅದನ್ನು ಉಡಾಯಿಸಲು ನಿರ್ಧರಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಆ ಸೇನಾ ನೆಲೆಯಲ್ಲಿ ನವಾಜ್ ಷರೀಫ್ ಮತ್ತು ಪರ್ವೇಜ್ ಮುಶರ್ರಫ್ ಇರುವುದು ಗೊತ್ತಾಯಿತು. ಒಡನೆಯೇ ಗುರಿಯನ್ನು ಬದಲಿಸಲು ನಿರ್ಧರಿಸಲಾಯಿತು. ಅಂತಿಮವಾಗಿ ಬಾಂಬನ್ನು ಭಾರತದ ಎಲ್ಓಸಿ ಭಾಗದಲ್ಲಿ, ಯಾವುದೇ ಹಾನಿ ಇಲ್ಲದೇ, ಬೀಳುವಂತೆ ಮಾಡಲಾಯಿತು” ಎಂದು ಪತ್ರಿಕಾ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್