ವಿಚಾರಣೆ ಡಿಲೇ ಮಾಡಿದ್ದಕ್ಕೆ ನ್ಯಾಯಾಧೀಶರಿಗೆ ಕೋವಿಡ್ ಸೋಂಕು ಬರಲಿ ಎಂದು ಶಾಪ ಹಾಕಿದ ವಕೀಲ!
Team Udayavani, Apr 8, 2020, 7:38 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸಾಲ ಮರುಪಾವತಿ ಪ್ರಕರಣ ಇತ್ಯರ್ಥ ತಡವಾಗಿದ್ದಕ್ಕೆ ವಕೀಲರೊಬ್ಬರು, ನ್ಯಾಯಾಧೀಶರಿಗೇ ‘ಕೋವಿಡ್ ಶಾಪ’ ಹಾಕಿದ ವಿಚಿತ್ರ ಘಟನೆ ಕಲ್ಕತ್ತಾ ಹೈಕೋರ್ಟ್ನಲ್ಲಿ ನಡೆದಿದೆ. ಸಾಲ ತೀರಿಸದ್ದಕ್ಕೆ ಬ್ಯಾಂಕ್, ಬಸ್ಸನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಪ್ರಕರಣವನ್ನು ತುರ್ತಾಗಿ ಪರಿಗಣಿಸಲು, ಜನವರಿಯಲ್ಲಿ ಕೋರ್ಟ್ ನಿರಾಕರಿಸಿತ್ತು.
ಇದೀಗ ಪ್ರಕರಣಗಳ ವಿಚಾರಣೆಗಳೆಲ್ಲಾ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯುತ್ತಿವೆ. ಈ ನಡುವೆ ತನ್ನ ಕಕ್ಷಿದಾರರ ಪ್ರಕರಣ ಇತ್ಯರ್ಥ ತಡವಾದುದಕ್ಕೆ ವಕೀಲ, ಕಲಾಪದ ನಡುವೆಯೇ ಜಡ್ಜ್ ಗೆ ‘ನಿಮಗೆ ಕೋವಿಡ್ ವೈರಸ್ ಸೋಂಕು ತಗುಲಲಿ’ ಎಂದು ಹೇಳಿದ್ದಾರೆ. ವಕೀಲನ ವರ್ತನೆಯನ್ನು ಜಡ್ಜ್ ತೀವ್ರವಾಗಿ ಖಂಡಿಸಿದ್ದಾರೆ.