ಮೀನು ತುಂಬಿದ್ದ ಮಿನಿ ಟ್ರಕ್ ಢಿಕ್ಕಿ: ಅಂಬುಲೆನ್ಸ್ ಡ್ರೈವರ್ ಸಹಿತ ಎಂಟು ಮಂದಿ ಸಾವು
Team Udayavani, Jun 10, 2019, 4:03 PM IST
ಪಾಲಕ್ಕಾಡ್ : ಜಿಲ್ಲೆಯ ಥಣ್ಣಿಶೇರಿಯಲ್ಲಿ ಮೀನು ತುಂಬಿದ್ದ ಮಿನಿ ಟ್ರಕ್, ಅಂಬುಲೆನ್ಸ್ ಗೆ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಅಂಬುಲೆನ್ಸ್ನಲ್ಲಿದ್ದವರ ಪೈಕಿ 8 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರಲ್ಲಿ ಅಂಬುಲೆನ್ಸ್ ಡ್ರೈವರ್ ಕೂಡ ಸೇರಿದ್ದಾರೆ; ಅಂಬುಲೆನ್ಸ್ನಲ್ಲಿ ಒಟ್ಟು 12 ಮಂದಿ ಇದ್ದರು. ಮೃತರಲ್ಲಿ ಕೆಲವರು ಪಟ್ಟಾಂಬಿ ಎಂಬಲ್ಲಿಯವರಾಗಿದ್ದು ಅವರು ಬೆಳಗ್ಗೆ ಪ್ರವಾಸಾರ್ಥ ನೆಳ್ಳಿಯಂಪಾಟಿ ಗೆ ಹೋಗಿದ್ದಾಗ ಲಘು ಅಪಘಾತಕ್ಕೆ ಗುರಿಯಾಗಿದ್ದರು.
ಇವರನ್ನು ಮೊದಲು ನೇನ್ಮಾರಾ ದಲ್ಲಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಅವರನ್ನು ಅಲ್ಲಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ತರಲಾಗುತ್ತಿತ್ತು. ಆ ವೇಳೆ ಮಿನಿ ಟ್ರಕ್ ಢಿಕ್ಕಿಯಾಗಿತ್ತು. ಬೆಳಗ್ಗೆ ನಡೆದಿದ್ದ ಅಪಘಾತದ ಸುದ್ದಿ ತಿಳಿದು ಧಾವಿಸಿ ಬಂದಿದ್ದ ಕೆಲವು ಸಂಬಂಧಿಕರು ಕೂಡ ಅಂಬುಲೆನ್ಸ್ನಲ್ಲಿ ಇದ್ದರು.
ಟ್ರಕ್ ಢಿಕ್ಕಿಯ ರಭಸಕ್ಕೆ ಅಪ್ಪಚ್ಚಿಯಾಗಿದ್ದ ಅಂಬುಲೆನ್ಸ್ನಿಂದ ಮೃತ ದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ