ಸ್ಥಿರಾಸ್ತಿಗೆ ಆಧಾರ್ ಮಾದರಿಯ ಸಂಖ್ಯೆ
ಕೇಂದ್ರದ ಆಲೋಚನೆ; ಒಂದು ಸಂಖ್ಯೆಯಲ್ಲಿ ಎಲ್ಲ ಮಾಹಿತಿ
Team Udayavani, Sep 19, 2019, 5:45 AM IST
ಹೊಸದಿಲ್ಲಿ: ದೇಶದ ಪ್ರತಿಯೊಂದು ವ್ಯಕ್ತಿಗೂ ಆಧಾರ್ ಸಂಖ್ಯೆ ನೀಡಿದ ಹಾಗೆ ಇನ್ನು ಮುಂದೆ ಎಲ್ಲ ಸ್ಥಿರಾಸ್ತಿಗಳಿಗೆ ಆಧಾರ್ ಮಾದರಿಯ ವಿಶಿಷ್ಟ “ಗುರುತಿನ ಸಂಖ್ಯೆ’ ನೀಡಲು ಕೇಂದ್ರ ಸರಕಾರ ಚಿಂತಿಸಿದೆ.
ದೇಶದಲ್ಲಿ ಬೇನಾಮಿ ಆಸ್ತಿಗಳನ್ನು ಪತ್ತೆಹಚ್ಚುವ ಕಾರಣಕ್ಕಾಗಿ ಈ ಯೋಜನೆ ರೂಪಿಸಲಾಗುತ್ತಿದೆ. ಆಸ್ತಿ ಗಳಿಗೆ ನೀಡಲಾಗುವ ಈ ಸಂಖ್ಯೆ ಜಿಯೋಗ್ರಾಫಿಕ್ ಇನ್ಫರ್ಮೇಶನ್ ಸಿಸ್ಟಂ (ಜಿಐಎಸ್) ಜತೆಗೆ ನಂಟು ಹೊಂದಿರ ಲಿದ್ದು, ಆಧಾರ್ ಸಂಖ್ಯೆಗೆ ಹಾಗೂ ಕಂದಾಯ ನ್ಯಾಯಾ ಲಯದ ದಾಖಲೆಗಳೊಂದಿಗೆ ಸೇರಿಸುವುದು ಕಡ್ಡಾಯಗೊಳಿಸಲಾಗು ತ್ತದೆ. ಆ ಮೂಲಕ ಸ್ಥಿರಾಸ್ತಿ ವ್ಯವಹಾರಗಳಲ್ಲಿ ಅಕ್ರಮ ಹಣ ಹೂಡಿಕೆಯ ಪತ್ತೆ ಸಹಿತ ಅನೇಕ ಉಪಯೋಗಗಳು ಲಭ್ಯವಾಗಲಿವೆ ಎಂದು ಹೆಸರು ಹೇಳಲು ಇಚ್ಛಿಸದ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶಿಷ್ಟ ಸಂಖ್ಯೆಯಲ್ಲೇನಿರುತ್ತೆ?
ಉದಾಹರಣೆಗೆ, ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಆ ವಾಹನ ನೋಂದಣಿಗೊಂಡ ರಾಜ್ಯ, ಜಿಲ್ಲೆಯ ವಿವರಗಳು ಹೇಗೆ ಅಡಕವಾಗಿರುತ್ತದೆಯೋ ಅದೇ ರೀತಿ ಪ್ರತಿ ಸ್ಥಿರಾಸ್ತಿಗೆ ನೀಡಲಾಗುವ ವಿಶಿಷ್ಟ ಗುರುತಿನ ಸಂಖ್ಯೆಯಲ್ಲಿ ಆ ಆಸ್ತಿ ಇರುವ ರಾಜ್ಯ, ಜಿಲ್ಲೆ, ನಗರ- ಪಟ್ಟಣ-ಗ್ರಾಮದ ವ್ಯಾಪ್ತಿ, ಬಡಾವಣೆ… ಅಷ್ಟೇ ಏಕೆ ಆ ಆಸ್ತಿ ಇರುವ ಬೀದಿಯ ಮಾಹಿತಿಯನ್ನೂ ನೀಡುತ್ತದೆ.
ಒಂದು ಸಂಖ್ಯೆ, ಹಲವು ಮಾಹಿತಿ
– ಸರಕಾರಿ ದಾಖಲೆಗಳಲ್ಲಿ ಪ್ರತಿ ಬಡಾವಣೆಗೂ ಒಂದು ನಿರ್ದಿಷ್ಟ ಗುರುತು.
– ರಿಯಲ್ ಎಸ್ಟೇಟ್ ವ್ಯವಹಾರ ಮತ್ತಷ್ಟು ಪಾರದರ್ಶಕ.
– ಆಸ್ತಿ ತೆರಿಗೆ ಪಾವತಿ ಹಿಂದೆಂದಿಗಿಂತಲೂ ಹೆಚ್ಚು ಸುಲಭ.
– ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಯಾವ ಜಿಲ್ಲೆಯ, ಯಾವ ಭಾಗದ ಬಡಾವಣೆಗಳು ಸಮಸ್ಯೆ ಎದುರಿಸುತ್ತಿವೆ ಎಂಬುದನ್ನು ಕೇವಲ ಒಂದು ಸಂಖ್ಯೆಯಿಂದ ಪತ್ತೆ ಹಚ್ಚಲು ಸಾಧ್ಯ.
– ಪ್ರತಿ ಬಡಾವಣೆ, ಅದರಲ್ಲಿ ಖಾಲಿ ಸೈಟು, ಮನೆಗಳ ಹಿಂದಿನ ವ್ಯವಹಾರಗಳ ಕ್ರೋಡೀಕರಣ. ಇದರಿಂದ ಖರೀದಿದಾರರಿಗೆ ತಾವು ಖರೀದಿಸಲು ಬಯಸುವ ಆಸ್ತಿಯ ವಿವರಗಳನ್ನು ಬೇಗ ಪಡೆಯಲು ಸಾಧ್ಯ.
– ಆಸ್ತಿಯ ಕಾನೂನಾತ್ಮಕ ಹಕ್ಕುದಾರರು, ಸಂಬಂಧಪಟ್ಟ ದಾಖಲೆಗಳು, ಆ ಆಸ್ತಿಗಳ ಹೆಸರಲ್ಲಿ ಇರುವ ಕಾನೂನು ವ್ಯಾಜ್ಯಗಳ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯ.
– ಯಾವುದೇ ಭೂಮಿಯ ಮೇಲೆ ಆ ಭೂ ಮಾಲಕರಾಗಲಿ, ಅದು ಕೃಷಿ ಭೂಮಿಯಾಗಿದ್ದಲ್ಲಿ ಅದನ್ನು ಉಳುಮೆ ಮಾಡುತ್ತಿರುವ ರೈತರಾಗಲಿ ಬ್ಯಾಂಕುಗಳಿಂದ, ವಿತ್ತೀಯ ಸಂಸ್ಥೆಗಳಿಂದ ಪಡೆದ ಸಾಲಗಳ ಬಗ್ಗೆ ಮಾಹಿತಿಯೂ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ