ಜುಲೈನಿಂದ ಎಲ್ಲದಕ್ಕೂ ಆಧಾರವೇ ಮೂಲ! ಜಿಎಸ್‌ಟಿ ಯುಗ ಆರಂಭ


Team Udayavani, Jun 29, 2017, 3:45 AM IST

aadhar-29.jpg

ನವದೆಹಲಿ: ಜುಲೈ ಒಂದರಿಂದ ನಾವೆಲ್ಲರೂ ಎರಡು ಮಹತ್ತರ ಬದಲಾವಣೆಗೆ ಸಿದ್ಧವಾಗುತ್ತಿದ್ದೇವೆ. ಅಂದು ದೇಶದ ಹೊಸ ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಯಾಗಲಿದ್ದರೆ,ಇದರ ಜತೆಗೆ ಆಧಾರ್‌ ಕೂಡ ಹಲವಾರು ಯೋಜನೆಗಳಿಗೆ ಕಡ್ಡಾಯವಾಗಲಿದೆ. ಐಟಿ ರಿಟರ್ನ್, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌, ಪಿಎಫ್ ಖಾತೆ ಸೇರಿದಂತೆ ಹಲವಾರು
ಯೋಜನೆಗಳಿಗೆ ಆಧಾರ್‌ ಬೇಕೇ ಬೇಕು. ಅಲ್ಲದೆ ಕೆಲವು ರಾಜ್ಯಗಳಲ್ಲಿ ಪಡಿತರ ಧಾನ್ಯ ಪಡೆಯಲೂ ಆಧಾರ್‌
ಕಡ್ಡಾಯವಾಗಿದೆ.

ಆಧಾರ್‌ ಇಲ್ಲದೇ ಐಟಿ ರಿಟರ್ನ್ ಅಸಾಧ್ಯ: ಆದಾಯ ತೆರಿಗೆ ಮರುಪಾವತಿಗೆ ಆಧಾರ್‌ ದಾಖಲೆ ಕಡ್ಡಾಯ. ಆಧಾರ್‌ ಇಲ್ಲದೇ ಐಟಿ ರಿಟರ್ನ್ ಅಸಾಧ್ಯ.

ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಕಡ್ಡಾಯ: ಪ್ಯಾನ್‌ ಕಾರ್ಡ್‌ ಅಕ್ರಮ ತಡೆಗಾಗಿ ಆಧಾರ್‌ ಲಿಂಕ್‌ ಕಡ್ಡಾಯಗೊಳಿಸಿದೆ. ತೆರಿಗೆ ತಪ್ಪಿಸಿಕೊಳ್ಳಲು ಎರಡೆರಡು ಪ್ಯಾನ್‌ ಕಾರ್ಡ್‌ ಹೊಂದಿರುತ್ತಾರೆನ್ನುವ ಕಾರಣಕ್ಕಾಗಿ ಈ ಕ್ರಮ. ಒಂದೊಮ್ಮೆ ಲಿಂಕ್‌ ಮಾಡಿಕೊಳ್ಳದೇ ಇದ್ದಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 139ಎಎ ಅನ್ವಯ ರದ್ದುಗೊಳಿಸಬಹುದು.

ಆಧಾರ್‌ ಇಲ್ಲದೇ ಪ್ಯಾನ್‌ ಕಾರ್ಡ್‌ ಇಲ್ಲ: ಹೊಸ ಪ್ಯಾನ್‌ ಕಾರ್ಡ್‌ ಪಡೆದುಕೊಳ್ಳಲು ಆಧಾರ್‌ ಕಡ್ಡಾಯಗೊಳಿಸಲಾಗಿದೆ. ಆಧಾರ್‌ ಇಲ್ಲದಿದ್ದಲ್ಲಿ ಪ್ಯಾನ್‌ ಕಾರ್ಡ್‌ ಹೊಂದಲು ಸಾಧ್ಯವೇ ಇಲ್ಲ.

ಪಾಸ್‌ಪೋರ್ಟ್‌ಗೂ ಬೇಕು ಆಧಾರ್‌: ಪಾಸ್‌ಪೋರ್ಟ್‌ ಪಡೆದುಕೊಳ್ಳಲಿಕ್ಕೂ ವಿದೇಶಾಂಗ ಸಚಿವಾಲಯ ಆಧಾರ್‌ ಕಡ್ಡಾಯಗೊಳಿಸಿದೆ.

ಪಿಎಫ್ ಖಾತೆಗೂ ಬೇಕು ಆಧಾರ್‌: ಜುಲೈ 1ರಿಂದ ಆಧಾರ್‌ ಇಲ್ಲದೇ ಪಿಎಫ್ ಖಾತೆ ತೆರೆಯಲು ಸಾಧ್ಯವಿಲ್ಲ. ಭವಿಷ್ಯ ನಿಧಿ ಖಾತೆಯೂ ಆಧಾರ್‌ ಲಿಂಕ್‌ ಹೊಂದಿರಬೇಕೆಂದು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ ಹೇಳಿದೆ. ನಿವೃತ್ತಿ ಪಿಂಚಿಣಿದಾರರು ಆಧಾರ್‌ ಹೊಂದಿರಬೇಕು. ಅಲ್ಲದೆ, ವಿತ್‌ಡ್ರಾ ಮತ್ತು ಸೆಟಲ್‌ಮೆಂಟ್‌ ಅವಧಿಯನ್ನೂ 20ರಿಂದ 10ದಿಗಳಿಗೆ ಕಡಿತಗೊಳಿಸುವ ನಿರೀಕ್ಷೆ ಇದೆ.

ರೈಲ್ವೆ ಟಿಕೆಟ್‌ ರಿಯಾಯಿತಿಗೂ ಬೇಕು ಆಧಾರ್‌: ರೈಲ್ವೆ ಟಿಕೆಟ್‌ ರಿಯಾಯಿತಿ ಯೋಜನೆಯ ಲಾಭ ಪಡೆಯಲು ಇನ್ನು ಆಧಾರ್‌ ಕಡ್ಡಾಯ. ವ್ಯವಸ್ಥೆ ದುರುಪಯೋಗ ತಡೆಗಟ್ಟಲಿಕ್ಕಾಗಿ ಈ ಕ್ರಮ ಎಂದಿದೆ ಭಾರತೀಯ ರೈಲ್ವೆ ಇಲಾಖೆ.

ಇನ್ಮುಂದೆ ಬೇಕಾಗಿಲ್ಲ ಡಿಪಾರ್ಚರ್‌ ಕಾರ್ಡ್‌: ಜುಲೈ 1ರಿಂದ ವಿಮಾನಯಾನದ ವೇಳೆ ಭಾರತೀಯರು ಡಿಪಾರ್ಚರ್‌ ಕಾರ್ಡ್‌ (ನಿರ್ಗಮನ ಕಾರ್ಡ್‌) ಹೊಂದಿರಬೇಕಾಗಿಲ್ಲ. ಅಲ್ಲದೆ, ಪ್ರಯಾಣಕ್ಕೂ ಮೊದಲ ಔಪಚಾರಿಕ ಪ್ರಕ್ರಿಯೆಗಳ ಅವಧಿಗೂ ಕಡಿತ ಬೀಳಲಿದೆ.

ಸೌದಿ ಅರೇಬಿಯಾದಲ್ಲಿ ಎಕ್ಸ್‌ಪ್ಯಾಟ್‌ ತೆರಿಗೆ: ಸೌದಿ ಅರೇಬಿಯಾ ಸರ್ಕಾರ ಮಾಸಿಕ ವಲಸೆ ಸುಂಕ (ಎಕ್ಸ್‌ಪ್ಯಾಟ್‌) ಪರಿಚಯಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ. ಭಾರತೀಯರೂ ಸೇರಿ ವಿದೇಶಿಗರಿಗೆ ಹೊರೆಯಾಗಿ ಪರಿಣಮಿಸಲಿದೆ. ಈ ವರ್ಷ ತಲಾ 100 ರಿಯಲ್‌ ಪಾವತಿಸಬೇಕು. 100 ರಿಯಲ್‌ ಅಂದರೆ 1,721 ರೂ. ಇದು 2018ಕ್ಕೆ ದುಪ್ಪಟ್ಟಾಗಲಿದೆ. 2019ಕ್ಕೆ ಮೂರು ಪಟ್ಟು, 2020ಕ್ಕೆ ನಾಲ್ಕು ಪಟ್ಟಾಗಲಿದೆ.

“ಸಿಎ’ಗೆ ಹೊಸ ಸಿಲೆಬಸ್‌: ಚಾರ್ಟೆಡ್‌ ಅಕೌಂಟೆಂಟ್‌ ಅಧ್ಯಯನದ ಸಿಲೆಬಸ್‌ ಬದಲಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಜುಲೈ 1ರಂದು ಚಾಲನೆ ನೀಡಲಿದ್ದಾರೆ. ಜಿಎಸ್‌ಟಿ ಪ್ರಕಾರ ಹೊಸ ತೆರಿಗೆ ನೀತಿ ಹಾಗೂ ಅಂತಾರಾಷ್ಟ್ರೀಯ ಅಕೌಂಟೆಂಟ್‌ಗಳ ಫೆಡರೇಷನ್‌ ಗುಣಮಟ್ಟದಲ್ಲಿ ಸಿಲೆಬಸ್‌ ಸಿದ್ಧಗೊಂಡಿದೆ.

ಆಸೀಸ್‌ಗೆ ಆನ್‌ಲೈನ್‌ನಲ್ಲೇ ವೀಸಾ: ಭಾರತೀಯ ಪ್ರವಾಸಿಗರಿಗೆಂದೇ ಆಸ್ಟ್ರೇಲಿಯಾ ಸರ್ಕಾರ ಆನ್‌ಲೈನ್‌ ವೀಸಾ ಪರಿಚಯಿಸಿದ್ದು, ಜುಲೈ 1ರಿಂದಲೇ ಈ ವ್ಯವಸ್ಥೆಗೆ ಚಾಲನೆ ಸಿಗಲಿದೆ. ಮಾನ್ಯತಾ ಪ್ರಕ್ರಿಯೆ ಬೇಗ ಆಗುತ್ತದೆಂದು ನಿರೀಕ್ಷಿಸಲಾಗುತ್ತಿದೆ.

ಆಧಾರ್‌ ಲಿಂಕ್‌ ಈಗ ಅಧಿಕೃತ
ಜು.1ರಿಂದ ಪ್ಯಾನ್‌ಕಾರ್ಡ್‌ ಅನ್ನು ಆಧಾರ್‌ಗೆ ಲಿಂಕ್‌ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಪ್ಯಾನ್‌ ಕಾರ್ಡ್‌ ಬಳಕೆಯ ಸಂದರ್ಭದಲ್ಲಿ ಮತ್ತೆ 12 ಅಂಕಿಗಳ ಬಯೋಮೆಟ್ರಿಕ್‌ ಆಧಾರ್‌ ಸಂಖ್ಯೆಯನ್ನು ಲಗತ್ತಿಸಬೇಕಾದ ಅಗತ್ಯವಿರುವುದಿಲ್ಲ. ಆಧಾರ್‌ ನಂಬರ್‌ ಮೂಲಕ ವ್ಯಕ್ತಿಯ ಬಹುತೇಕ ವೈಯಕ್ತಿಕ ದಾಖಲೆಗಳು ಲಭ್ಯವಾಗಲಿದೆ ಎನ್ನುವುದು ಇನ್ನೊಂದು ಉದ್ದೇಶವಾಗಿದೆ. ಅಲ್ಲದೆ, ತೆರಿಗೆ ರಿಟರ್ನ್ ವೇಳೆ ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿದ್ದರಿಂದ ಆ ಮೂಲಕವೇ ಆಧಾರ್‌ ಮಾಹಿತಿಯೂ ಲಭ್ಯ ಎನ್ನುವ ಲೆಕ್ಕಾಚಾರದ ಜತೆಗೆ, ಬ್ಯಾಂಕ್‌ ವಹಿವಾಟಿಗೂ ಆಧಾರ್‌, ಪ್ಯಾನ್‌ ಕಡ್ಡಾಯವಾಗಿದೆ. ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2.07 ಕೋಟಿ ತೆರಿಗೆದಾರರು ಈಗಾಗಲೇ ಪ್ಯಾನ್‌ ಕಾರ್ಡ್‌ ಜತೆ ಆಧಾರ್‌ ಲಿಂಕ್‌ ಮಾಡಿಕೊಂಡಿದ್ದಾರೆ.
– 25 ಕೋಟಿ: ದೇಶದಲ್ಲಿ ಪ್ಯಾನ್‌ ಹೊಂದಿರುವವರು
– 115 ಕೋಟಿ: ದೇಶದಲ್ಲಿ ಆಧಾರ್‌ ಹೊಂದಿರುವವರು

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.