ಉಪವಾಸನಿರತ ನಾಯಕರಿಂದ ಪುಷ್ಕಳ ಭೋಜನ: ಈಗ ಬಿಜೆಪಿ ಸರದಿ
Team Udayavani, Apr 13, 2018, 3:46 PM IST
ಪುಣೆ : ನಿರಂತರ ಗದ್ದಲ ಗಲಾಟೆಗಳ ಕಾರಣ ಬಜೆಟ್ ಅಧಿವೇಶನದ ಸಂಸತ್ ಕಲಾಪ ವ್ಯರ್ಥವಾಗಿ ಹೋದುದನ್ನು ಪ್ರತಿಭಟಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಳುವ ಬಿಜೆಪಿ ಪಕ್ಷದವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ ವೇಳೆಯೇ ಪುಣೆಯ ಇಬ್ಬರು ಬಿಜೆಪಿ ಶಾಸಕರು ಪುಷ್ಕಳ ಭೋಜನ ಸವಿದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ಸಂಸದರು ಇದೇ ಕಾರಣಕ್ಕೆ ಉಪವಾಸ ಸತ್ಯಾಗ್ರಹ ನಡೆಸಿದಂದು ಬೆಳಗ್ಗೆ ಪುಷ್ಕಳ ಉಪಾಹಾರ ಸೇವಿಸುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟು ವೈರಲ್ ಆಗಿತ್ತು. ಇದೀಗ ಬಿಜೆಪಿಯ ಸರದಿಯಾಗಿ ಅದರ ಪುನರಾವರ್ತನೆಯಾಗಿದೆ.
ನಿನ್ನೆ ಗುರುವಾರ ರಾಷ್ಟ್ರಾದ್ಯಂತ ಬಿಜೆಪಿಯದವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ಸೇರಿದ್ದ ಸರ್ವಪಕ್ಷ ನಾಯಕರು ಇಲ್ಲಿನ ಜಂಗ್ಲಿ ಮಹಾರಾಜ್ ರಸ್ತೆಯ ಹೊಟೇಲಲ್ಲಿ ಪುಷ್ಕಳ ಭೋಜನ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಯಿತು.
ಕ್ಯಾಮೆರಾದಲ್ಲಿ ಸೆರೆಯಾದ ಇಬ್ಬರು ಬಿಜೆಪಿ ಶಾಸಕರೆಂದರೆ ಪುಣೆ ಜಿಲ್ಲೆಯ ಭೀಮರಾವ್ ತಪಕೀರ್ (ಖಡಕ್ವಾಸ್ಲಾ ಕ್ಷೇತ್ರ) ಮತ್ತು ಸಂಜಯ್ ಭೇಗಾಡೆ (ಮವಾಲ್ ಕ್ಷೇತ್ರ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು