ಗುಲಾಂ ನಬಿ ಆಜಾದ್ರಿಂದ ಸುಳ್ಳು ಸುದ್ದಿ: ಜೈರಾಂ ರಮೇಶ್ ಆರೋಪ
Team Udayavani, Sep 2, 2022, 11:30 PM IST
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಾಯೋಜಿಸಿರುವ ಬಂಗಲೆಯಲ್ಲಿ ಕುಳಿತು ಮಾಜಿ ಸಚಿವ ಗುಲಾಂ ನಬಿ ಆಜಾದ್ ಸುಳ್ಳು ಸುದ್ದಿಗಳನ್ನು ಹಬ್ಬುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಜಮ್ಮು ಮತ್ತು ಕಾಶ್ಮೀರದ ಭಲೆಸ್ಸಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಗ್ಗೆ ಆಜಾದ್ ಮಾಡಿದ್ದ ಟ್ವೀಟ್ ಬಗ್ಗೆ ಅವರು ಆಕ್ಷೇಪ ಮಾಡಿದ್ದಾರೆ. ಇದುವೇ ನಿಜ ಸ್ಥಿತಿ.
ಮೋದಿ ಸರ್ಕಾರ ನೀಡಿರುವ ಬಂಗಲೆಯಲ್ಲಿ ಕುಳಿತು, ಸುಳ್ಳು ಸುದ್ದಿ ಹಬ್ಬಿಸುವುದಲ್ಲ ಎಂದಿದ್ದಾರೆ. ಗುಲಾಂ ನಬಿ ಆಜಾದ್ ಅವರ ಊರು ಭಲೆಸ್ಸಾದಲ್ಲಿ ಸೆ.1ರಂದು ಆಯೋಜಿಸಲಾಗಿದ್ದ ಪಕ್ಷದ ಸಭೆಯ ಬಗ್ಗೆ ಕಾಂಗ್ರೆಸ್ನ ಜಮ್ಮು ಮತ್ತು ಕಾಶ್ಮೀರ ಘಟಕ ಟ್ವೀಟ್ ಮಾಡಿ “50 ವರ್ಷಗಳಿಂದ ಪ್ರತಿ ತಿಂಗಳ 1ನೇ ತಾರೀಕಿನಂದು ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಗುತ್ತದೆ. ಭಲೆಸ್ಸಾ ಆಜಾದ್ ಅವರ ಹುಟ್ಟೂರು’ ಎಂದು ಬರೆದುಕೊಂಡಿತ್ತು.
ಸೆ.4ರಂದು ಜಮ್ಮುವಿನಲ್ಲಿ ಮಾಜಿ ಸಚಿವ ಆಜಾದ್ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಯಲಿದೆ. ಅದರಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಕೇಂದ್ರಾಡಳಿತ ಪ್ರದೇಶದ 37 ಮಂದಿ ನಾಯಕರು ಭಾಗವಹಿಸಲಿದ್ದಾರೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಮುಖಂಡರು ಸಭೆಗಳನ್ನು ನಡೆಸಲಾರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ